ಲಚ್ಯಾಣದಲ್ಲಿ 1950ರಲ್ಲಿ ಸರ್ವಧರ್ಮ ಸಮ್ಮೇಳನ, ಸೊನ್ನದಲ್ಲಿ 1953ರಲ್ಲಿ 63 ಪುರಾತನ ಮಂಟಪ ಪೂಜೆ, ವಿಜಯಪುರ ನಗರದಲ್ಲಿ 1954ರಲ್ಲಿ 770 ಅಮರ ಗಣಾಧೀಶ್ವರರ ಪೂಜೆ ನೆರೆವೇರಿಸಿದರು. 1955ರಲ್ಲಿ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ಆಯ್ಕೆ, 1969ರಲ್ಲಿ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ 1,96,000 ಗಣಂಗಳ ಜರುಗಿಸಿದ ಕೀರ್ತಿ ಸಂಗನಬಸವ ಶ್ರೀಗಳಿಗೆ ಸಲ್ಲುತ್ತದೆ.