<p><strong>ಮುದ್ದೇಬಿಹಾಳ:</strong> ‘ಶೋಷಿತರ ನೆರವಿಗೆ ನಿಲ್ಲುವ ದಲಿತ ಸಂಘರ್ಷ ಸಮಿತಿಯು, ಪರಿಶಿಷ್ಟರಿಗೆ ಮಾತ್ರ ಮೀಸಲಾದ ಸಂಘಟನೆಯಲ್ಲ’ ಎಂದು ಡಿ.ಎಸ್.ಎಸ್. (ಡಿ.ಜಿ.ಸಾಗರ ಬಣ) ಜಿಲ್ಲಾ ಸಂಚಾಲಕ ವೈ.ಸಿ. ಮಯೂರ ಹೇಳಿದರು.</p>.<p>ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಡಿ.ಎಸ್.ಎಸ್ .(ಡಿ.ಜಿ.ಸಾಗರ ಬಣ) ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.</p>.<p>‘ದಲಿತರೆಂದರೆ ಜಾತಿ, ಧರ್ಮ, ಭಾಷೆಯ ಗಡಿ ಇಲ್ಲದವರು. ಡಿ.ಎಸ್.ಎಸ್.ಗೆ ಜಾತಿ, ಧರ್ಮ, ಭಾಷೆಯ ಗಡಿ ಇಲ್ಲ. ಆರ್ಥಿಕ, ಸಾಮಾಜಿಕವಾಗಿ ಶೋಷಣೆಗೆ ಒಳಗಾದವರೆಲ್ಲರೂ ದಲಿತರೇ. ಇಂಥವರ ಪರವಾಗಿ ದಲಿತ ಸಂಘರ್ಷ ಸಮಿತಿ ನಿಲ್ಲುತ್ತದೆ’ ಎಂದರು.</p>.<p>ತಾಲ್ಲೂಕು ಘಟಕಕ್ಕೆ ನೂತನ ಸಂಚಾಲಕನ್ನಾಗಿ ಬಸವರಾಜ ತಂಗಡಗಿ, ಸಹ ಸಂಚಾಲಕರನ್ನಾಗಿ ಪರಶು ಇಂಗಳಗೇರಿ, ತಮ್ಮಣ್ಣ ನಂದಿ, ಪರಶುರಾಮ ಚಲವಾದಿ, ಖಜಾಂಚಿಯನ್ನಾಗಿ ರಾಮಣ್ಣ ಚಲವಾದಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.</p>.<p>ಜಿಲ್ಲಾ ಸಮಿತಿಯ ಪ್ರಮುಖರಾದ ಮಹಾಂತೇಶ ಸಾಸಬಾಳ, ಅವಿನಾಶ ಬಾಣಿಕೋಲ, ಸಿದ್ದಾರ್ಥ ರೋಗಿ, ಯಮನೂರಿ ಬೆಕಿನಾಳ, ಕಾನೂನು ಸಲಹೆಗಾರ ಕೆ.ಬಿ. ದೊಡಮನಿ, ಸಿ.ಜಿ. ವಿಜಯಕರ, ಹರೀಶ ನಾಟೀಕಾರ, ದೇವರಾಜ ಹಂಗರಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದ್ದೇಬಿಹಾಳ:</strong> ‘ಶೋಷಿತರ ನೆರವಿಗೆ ನಿಲ್ಲುವ ದಲಿತ ಸಂಘರ್ಷ ಸಮಿತಿಯು, ಪರಿಶಿಷ್ಟರಿಗೆ ಮಾತ್ರ ಮೀಸಲಾದ ಸಂಘಟನೆಯಲ್ಲ’ ಎಂದು ಡಿ.ಎಸ್.ಎಸ್. (ಡಿ.ಜಿ.ಸಾಗರ ಬಣ) ಜಿಲ್ಲಾ ಸಂಚಾಲಕ ವೈ.ಸಿ. ಮಯೂರ ಹೇಳಿದರು.</p>.<p>ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಡಿ.ಎಸ್.ಎಸ್ .(ಡಿ.ಜಿ.ಸಾಗರ ಬಣ) ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.</p>.<p>‘ದಲಿತರೆಂದರೆ ಜಾತಿ, ಧರ್ಮ, ಭಾಷೆಯ ಗಡಿ ಇಲ್ಲದವರು. ಡಿ.ಎಸ್.ಎಸ್.ಗೆ ಜಾತಿ, ಧರ್ಮ, ಭಾಷೆಯ ಗಡಿ ಇಲ್ಲ. ಆರ್ಥಿಕ, ಸಾಮಾಜಿಕವಾಗಿ ಶೋಷಣೆಗೆ ಒಳಗಾದವರೆಲ್ಲರೂ ದಲಿತರೇ. ಇಂಥವರ ಪರವಾಗಿ ದಲಿತ ಸಂಘರ್ಷ ಸಮಿತಿ ನಿಲ್ಲುತ್ತದೆ’ ಎಂದರು.</p>.<p>ತಾಲ್ಲೂಕು ಘಟಕಕ್ಕೆ ನೂತನ ಸಂಚಾಲಕನ್ನಾಗಿ ಬಸವರಾಜ ತಂಗಡಗಿ, ಸಹ ಸಂಚಾಲಕರನ್ನಾಗಿ ಪರಶು ಇಂಗಳಗೇರಿ, ತಮ್ಮಣ್ಣ ನಂದಿ, ಪರಶುರಾಮ ಚಲವಾದಿ, ಖಜಾಂಚಿಯನ್ನಾಗಿ ರಾಮಣ್ಣ ಚಲವಾದಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.</p>.<p>ಜಿಲ್ಲಾ ಸಮಿತಿಯ ಪ್ರಮುಖರಾದ ಮಹಾಂತೇಶ ಸಾಸಬಾಳ, ಅವಿನಾಶ ಬಾಣಿಕೋಲ, ಸಿದ್ದಾರ್ಥ ರೋಗಿ, ಯಮನೂರಿ ಬೆಕಿನಾಳ, ಕಾನೂನು ಸಲಹೆಗಾರ ಕೆ.ಬಿ. ದೊಡಮನಿ, ಸಿ.ಜಿ. ವಿಜಯಕರ, ಹರೀಶ ನಾಟೀಕಾರ, ದೇವರಾಜ ಹಂಗರಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>