ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಳಸಂಗಿ ಕೊಲೆ ಪ್ರಕರಣ: ಆರೋಪಿಗಳ ಬಂಧನ

Last Updated 1 ಏಪ್ರಿಲ್ 2021, 14:24 IST
ಅಕ್ಷರ ಗಾತ್ರ

ವಿಜಯಪುರ: ಇಂಡಿ ತಾಲ್ಲೂಕಿನ ಲಾಳಸಂಗಿಯಲ್ಲಿ ಮಾರ್ಚ್‌ 27ರಂದು ಉಳ್ಳಾಗಡ್ಡಿ ಕಣದ ಹತ್ತಿರ ಮಲಗಿದ್ದ ಸಿದ್ಧಾರೂಢ ಮರಾಠಿ(22) ಎಂಬಾತನ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರ ಸೇರಿದಂತೆ ಅದೇ ಗ್ರಾಮ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ವ್ಯಕ್ತಿಯ ಸಹೋದರಗಡ್ಡೆಪ್ಪ ಮರಾಠಿ(25) ಮತ್ತು ಜೆಟ್ಟೆಪ್ಪ ನಾಟಿಕಾರ (40) ಎಂಬುವವರನ್ನುಇಂಡಿ ಗ್ರಾಮೀಣ ಠಾಣೆ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

‘ತನ್ನ ಹೆಂಡತಿಯೊಂದಿಗೆ ಸಹೋದರ ಅಕ್ರಮ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆಕೊಲೆ ಮಾಡಿರುವುದಾಗಿ’ ಆರೋಪಿ ಗಡ್ಡೆಪ್ಪ ಮರಾಠಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಡಿಸಿ.ಪಿ.ಐರಾಜಶೇಖರ ನೇತೃತ್ವದಲ್ಲಿ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ವಿನೋದ ದೊಡಮನಿ, ಇಂಡಿ ಶಹರ ಪೊಲೀಸ್ ಠಾಣೆಯ ಪಿ.ಎಸ್.ಐಮಾಳಪ್ಪ ಪೂಜಾರಿ, ಎ.ಎಸ್.ಐ ಡಿ.ಎನ್. ತಳವಾರ ಹಾಗೂ ಪೊಲೀಸ್ ಸಿಬ್ಬಂದಿ ವಿ.ಎಂ. ಪಾಟೀಲ, ವಿ.ಆರ್. ಕಲ್ಲೂರ, ಆರ್.ಪಿ. ಗಡೇದ. ಎಸ್.ಎಲ್. ತೆನ್ನಿಹಳ್ಳಿ. ಆರ್.ವಿ. ಭತಗುಣಕಿ. ಆರ್.ಎಂ. ಬಿರಾದಾರ ಅವರನ್ನು ಒಳಗೊಂಡ ತಂಡ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT