<p><strong>ಇಂಡಿ:</strong> ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಬೇಸಾಯ ಸೂಕ್ತವಾಗಿದ್ದು, ಬಸವಂತ-780, ಎನ್-53, ಮತ್ತು ಭೀಮಾ ಸೂಪರ್ ತಳಿಗಳು ಉತ್ತಮವಾಗಿವೆ ಎಂದುಕೃಷಿ ವಿಜ್ಞಾನಿ ಡಾ. ಹೀನಾ ಎಂ.ಎಸ್.ತಿಳಿಸಿದರು.</p>.<p>ಸೋಮವಾರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಈರುಳ್ಳಿ ಸಮಗ್ರ ಬೇಸಾಯ ಕ್ರಮಗಳು ಎನ್ನುವ ಕುರಿತು ಆನ್ ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಿತ್ತನೆ ಬೀಜವನ್ನು ಪಾದರಸ ಸಂಯುಕ್ತ ವಸ್ತು 2 ಗ್ರಾಂ ಅಥವಾ ಥೈರಮ್ 2.5 ಗ್ರಾಂ ಅಥವಾ ಕ್ಯಾಪ್ಟಾನ್ 2 ಗ್ರಾಂ ಅಥವಾ ಬಿನೋಮಿಲ್ 2 ಗ್ರಾಂ. ಒಂದು ಕೆ.ಜಿ. ಬೀಜಕ್ಕೆ ಉಪಚರಿಸುವುದರಿಂದ ನೇರಳೆ ಮಚ್ಚೆರೋಗ, ಕತ್ತುಕೊಳೆ ರೋಗ ಮುಂತಾದ ರೋಗ ಬಾಧೆಗಳು ನಿಯಂತ್ರಣವಾಗುತ್ತವೆ’ ಎಂದರು.</p>.<p>ವಿಜ್ಞಾನಿ ಡಾ. ಜಹೀರ್ ಅಹಮ್ಮದ್ ಮಾತನಾಡಿ, ಈರುಳ್ಳಿಗೆ ಬರುವ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಕುರಿತು ಮಾಹಿತಿ ನೀಡಿದರು.</p>.<p>ಎಕರೆಗೆ ಒಂದು ಚೀಲ ಬೇವಿನ ಹಿಂಡಿ ಸೇರಿಸುವುದರಿಂದ ಸಾಕಷ್ಟು ಕೀಟ ಮತ್ತು ರೋಗಗಳ ಬಾಧೆಯನ್ನು ತಡೆಗಟ್ಟಬಹುದು ಎಂದರು.</p>.<p>ವಿಜಯಪುರ ಕೃಷಿ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಈರುಳ್ಳಿ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಮುಂಗಾರು ಹಂಗಾಮಿನಲ್ಲಿ ಶೇ 20ರಷ್ಟು<br />ಈರುಳ್ಳಿ ಉತ್ಪಾದನೆಯಾಗುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಡಿ:</strong> ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಬೇಸಾಯ ಸೂಕ್ತವಾಗಿದ್ದು, ಬಸವಂತ-780, ಎನ್-53, ಮತ್ತು ಭೀಮಾ ಸೂಪರ್ ತಳಿಗಳು ಉತ್ತಮವಾಗಿವೆ ಎಂದುಕೃಷಿ ವಿಜ್ಞಾನಿ ಡಾ. ಹೀನಾ ಎಂ.ಎಸ್.ತಿಳಿಸಿದರು.</p>.<p>ಸೋಮವಾರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಈರುಳ್ಳಿ ಸಮಗ್ರ ಬೇಸಾಯ ಕ್ರಮಗಳು ಎನ್ನುವ ಕುರಿತು ಆನ್ ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಿತ್ತನೆ ಬೀಜವನ್ನು ಪಾದರಸ ಸಂಯುಕ್ತ ವಸ್ತು 2 ಗ್ರಾಂ ಅಥವಾ ಥೈರಮ್ 2.5 ಗ್ರಾಂ ಅಥವಾ ಕ್ಯಾಪ್ಟಾನ್ 2 ಗ್ರಾಂ ಅಥವಾ ಬಿನೋಮಿಲ್ 2 ಗ್ರಾಂ. ಒಂದು ಕೆ.ಜಿ. ಬೀಜಕ್ಕೆ ಉಪಚರಿಸುವುದರಿಂದ ನೇರಳೆ ಮಚ್ಚೆರೋಗ, ಕತ್ತುಕೊಳೆ ರೋಗ ಮುಂತಾದ ರೋಗ ಬಾಧೆಗಳು ನಿಯಂತ್ರಣವಾಗುತ್ತವೆ’ ಎಂದರು.</p>.<p>ವಿಜ್ಞಾನಿ ಡಾ. ಜಹೀರ್ ಅಹಮ್ಮದ್ ಮಾತನಾಡಿ, ಈರುಳ್ಳಿಗೆ ಬರುವ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಕುರಿತು ಮಾಹಿತಿ ನೀಡಿದರು.</p>.<p>ಎಕರೆಗೆ ಒಂದು ಚೀಲ ಬೇವಿನ ಹಿಂಡಿ ಸೇರಿಸುವುದರಿಂದ ಸಾಕಷ್ಟು ಕೀಟ ಮತ್ತು ರೋಗಗಳ ಬಾಧೆಯನ್ನು ತಡೆಗಟ್ಟಬಹುದು ಎಂದರು.</p>.<p>ವಿಜಯಪುರ ಕೃಷಿ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಈರುಳ್ಳಿ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಮುಂಗಾರು ಹಂಗಾಮಿನಲ್ಲಿ ಶೇ 20ರಷ್ಟು<br />ಈರುಳ್ಳಿ ಉತ್ಪಾದನೆಯಾಗುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>