ಸೋಮವಾರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಈರುಳ್ಳಿ ಸಮಗ್ರ ಬೇಸಾಯ ಕ್ರಮಗಳು ಎನ್ನುವ ಕುರಿತು ಆನ್ ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಿತ್ತನೆ ಬೀಜವನ್ನು ಪಾದರಸ ಸಂಯುಕ್ತ ವಸ್ತು 2 ಗ್ರಾಂ ಅಥವಾ ಥೈರಮ್ 2.5 ಗ್ರಾಂ ಅಥವಾ ಕ್ಯಾಪ್ಟಾನ್ 2 ಗ್ರಾಂ ಅಥವಾ ಬಿನೋಮಿಲ್ 2 ಗ್ರಾಂ. ಒಂದು ಕೆ.ಜಿ. ಬೀಜಕ್ಕೆ ಉಪಚರಿಸುವುದರಿಂದ ನೇರಳೆ ಮಚ್ಚೆರೋಗ, ಕತ್ತುಕೊಳೆ ರೋಗ ಮುಂತಾದ ರೋಗ ಬಾಧೆಗಳು ನಿಯಂತ್ರಣವಾಗುತ್ತವೆ’ ಎಂದರು.