<p><strong>ಪಂಢರಪುರ(ಮಹಾರಾಷ್ಟ್ರ):</strong> ಆಷಾಢ ಏಕಾದಶಿ ಪ್ರಯುಕ್ತ ವಿಠಲನ ದರ್ಶನಕ್ಕೆ ಭಾನುವಾರ ಭಕ್ತ ಸಾಗರವೇ ಹರಿದು ಬಂತು. ಭೀಮೆಯ ತಟದಲ್ಲಿರುವ ಪಂಢರಪುರದ ಎಲ್ಲೆಡೆ ವಿಠಲನ ಸಂಕೀರ್ತನೆ, ಭಜನೆ ಅನುರಣಿಸಿತು.</p>.<p>ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತೆಲಂಗಾಣ ಸೇರಿ ದೇಶದ ಮೂಲೆಮೂಲೆಯಿಂದ ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಬಂದರು. ವಿಠಲ, ರುಕ್ಮಿಣಿಯರ ದರ್ಶನ ಪಡೆದು ಪುನೀತರಾದರು.</p>.<p>ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ದಂಪತಿ ಬೆಳಿಗ್ಗೆಯೇ ಆಷಾಢ ಏಕಾದಶಿಯ ಸರ್ಕಾರಿ ಮಹಾಪೂಜೆ ಮತ್ತು ಕಾಕಡಾರತಿ ಸಲ್ಲಿಸಿದರು.</p>.<p>‘ಅನ್ನದಾತನಿಗೆ ಸುಖಃ, ಸಮೃದ್ಧಿ ನೀಡು, ರಾಜ್ಯದ ಸಂಕಟವನ್ನು ದೂರ ಮಾಡು ಸರ್ವರನ್ನು ಸನ್ಮಾರ್ಗದ ದಾರಿಯಲ್ಲಿ ಸಾಗುವಂತೆ ಸದ್ಬುದ್ಧಿ ನೀಡು’ ಎಂದು ಮುಖ್ಯಮಂತ್ರಿ ಫಡಣವೀಸ್ ಪ್ರಾರ್ಥಿಸಿದರು.</p>.<p>ಭಾನುವಾರ ನಸುಕಿನಿಂದಲೇ ವಿಠಲ, ರುಕ್ಮಿಣಿ ದೇವಾಲಯದ ಮುಂಭಾಗದಲ್ಲಿ ಹರಿಯುವ ಚಂದ್ರಭಾಗ(ಭೀಮಾ) ನದಿಯಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿದರು. ನದಿಗೆ ವಿಶೇಷ ಪೂಜೆ ಸಲ್ಲಿಸಿ, ಆರತಿ ತೇಲಿ ಬಿಟ್ಟರು.</p>.<p>ಸಂತ ಜ್ಞಾನೇಶ್ವರ, ಏಕನಾಥ, ತುಕಾರಾಮ, ಪುಂಡಲೀಕ, ನಾಮದೇವ, ದಾಮಾಜಿ, ಮೀರಾಬಾಯಿ, ಮುಕ್ತಾಬಾಯಿ, ಕಬೀರದಾಸ, ರಾಮದಾಸ, ತುಳಸಿದಾಸ, ಸೂರದಾಸರ ಅಭಂಗಗಳನ್ನು ವಾರಕರಿ ರಾಗದಿಂದ ಹಾಡುತ್ತಾ ಕುಣಿಯುತ್ತ, ವಿಠಲ... ವಿಠಲ..ವಿಠಲ.. ಎಂದು ಭಜನೆ, ನಾಮ ಸಂಕೀರ್ತನೆ ನಡೆದವು.</p>.<p>ದಿಂಡಿಯಾತ್ರೆಯಲ್ಲಿ (ಪಾದಯಾತ್ರೆ) ಬಂದ ವಾರಕಾರಿಗಳು ವಿಠಲನ ನಾಮಸ್ಮರಣೆಯಲ್ಲಿ ಹೆಜ್ಜೆ ಹಾಕಿದರು. ಪಾದಯಾತ್ರಿ ವಾರಕಾರಿಗಳಿಗೆ ಪಂಢರಪುರದ ನಾಲ್ಕೂ ದಿಕ್ಕಿನಲ್ಲಿ ಊಟೋಪಹಾರದ ವ್ಯವಸ್ಥೆ ಇತ್ತು. ಪಂಢರಪುರ ದೇವಾಲಯವೂ ಸೇರಿ ಪ್ರಮುಖ ಬೀದಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಂಢರಪುರ(ಮಹಾರಾಷ್ಟ್ರ):</strong> ಆಷಾಢ ಏಕಾದಶಿ ಪ್ರಯುಕ್ತ ವಿಠಲನ ದರ್ಶನಕ್ಕೆ ಭಾನುವಾರ ಭಕ್ತ ಸಾಗರವೇ ಹರಿದು ಬಂತು. ಭೀಮೆಯ ತಟದಲ್ಲಿರುವ ಪಂಢರಪುರದ ಎಲ್ಲೆಡೆ ವಿಠಲನ ಸಂಕೀರ್ತನೆ, ಭಜನೆ ಅನುರಣಿಸಿತು.</p>.<p>ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತೆಲಂಗಾಣ ಸೇರಿ ದೇಶದ ಮೂಲೆಮೂಲೆಯಿಂದ ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಬಂದರು. ವಿಠಲ, ರುಕ್ಮಿಣಿಯರ ದರ್ಶನ ಪಡೆದು ಪುನೀತರಾದರು.</p>.<p>ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ದಂಪತಿ ಬೆಳಿಗ್ಗೆಯೇ ಆಷಾಢ ಏಕಾದಶಿಯ ಸರ್ಕಾರಿ ಮಹಾಪೂಜೆ ಮತ್ತು ಕಾಕಡಾರತಿ ಸಲ್ಲಿಸಿದರು.</p>.<p>‘ಅನ್ನದಾತನಿಗೆ ಸುಖಃ, ಸಮೃದ್ಧಿ ನೀಡು, ರಾಜ್ಯದ ಸಂಕಟವನ್ನು ದೂರ ಮಾಡು ಸರ್ವರನ್ನು ಸನ್ಮಾರ್ಗದ ದಾರಿಯಲ್ಲಿ ಸಾಗುವಂತೆ ಸದ್ಬುದ್ಧಿ ನೀಡು’ ಎಂದು ಮುಖ್ಯಮಂತ್ರಿ ಫಡಣವೀಸ್ ಪ್ರಾರ್ಥಿಸಿದರು.</p>.<p>ಭಾನುವಾರ ನಸುಕಿನಿಂದಲೇ ವಿಠಲ, ರುಕ್ಮಿಣಿ ದೇವಾಲಯದ ಮುಂಭಾಗದಲ್ಲಿ ಹರಿಯುವ ಚಂದ್ರಭಾಗ(ಭೀಮಾ) ನದಿಯಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿದರು. ನದಿಗೆ ವಿಶೇಷ ಪೂಜೆ ಸಲ್ಲಿಸಿ, ಆರತಿ ತೇಲಿ ಬಿಟ್ಟರು.</p>.<p>ಸಂತ ಜ್ಞಾನೇಶ್ವರ, ಏಕನಾಥ, ತುಕಾರಾಮ, ಪುಂಡಲೀಕ, ನಾಮದೇವ, ದಾಮಾಜಿ, ಮೀರಾಬಾಯಿ, ಮುಕ್ತಾಬಾಯಿ, ಕಬೀರದಾಸ, ರಾಮದಾಸ, ತುಳಸಿದಾಸ, ಸೂರದಾಸರ ಅಭಂಗಗಳನ್ನು ವಾರಕರಿ ರಾಗದಿಂದ ಹಾಡುತ್ತಾ ಕುಣಿಯುತ್ತ, ವಿಠಲ... ವಿಠಲ..ವಿಠಲ.. ಎಂದು ಭಜನೆ, ನಾಮ ಸಂಕೀರ್ತನೆ ನಡೆದವು.</p>.<p>ದಿಂಡಿಯಾತ್ರೆಯಲ್ಲಿ (ಪಾದಯಾತ್ರೆ) ಬಂದ ವಾರಕಾರಿಗಳು ವಿಠಲನ ನಾಮಸ್ಮರಣೆಯಲ್ಲಿ ಹೆಜ್ಜೆ ಹಾಕಿದರು. ಪಾದಯಾತ್ರಿ ವಾರಕಾರಿಗಳಿಗೆ ಪಂಢರಪುರದ ನಾಲ್ಕೂ ದಿಕ್ಕಿನಲ್ಲಿ ಊಟೋಪಹಾರದ ವ್ಯವಸ್ಥೆ ಇತ್ತು. ಪಂಢರಪುರ ದೇವಾಲಯವೂ ಸೇರಿ ಪ್ರಮುಖ ಬೀದಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>