<p><strong>ವಿಜಯಪುರ:</strong> ಗ್ರಾಮಗಳ ಅಭಿವೃದ್ಧಿಯಲ್ಲಿ ಪಿಡಿಒಗಳ ಪಾತ್ರ ಮುಖ್ಯವಾಗಿದ್ದು, ನಿರೀಕ್ಷಿತ ಪ್ರಗತಿಗೆ ಶ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್ ಸೂಚಿಸಿದರು.</p>.<p>ಬಬಲೇಶ್ವರ ತಾಲ್ಲೂಕು ಪಂಚಾಯಿತಿ ಸಭಾಗಂಣದಲ್ಲಿ ನಡೆದ ಬಬಲೇಶ್ವರ ಹಾಗೂ ತಿಕೋಟಾ ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ಎಲ್ಲಾ ಅಧಿಕಾರಿ, ಸಿಬ್ಬಂದಿ ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗಿ ಇ- ಹಾಜರಾತಿ ಮೂಲಕ ಹಾಜರಾತಿ ಸಲ್ಲಿಸಲು ಸೂಚಿಸಿದರು.</p>.<p>ಗ್ರಂಥಾಲಯ ಕರ ನಿಗದಿತ ಸಮಯದೊಳಗೆ ಕಟ್ಟಬೇಕು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಸಂಬಳ ವಿಳಂಬವಿಲ್ಲದೇ ಕಾಲಮಿತಿಯೊಳಗೆ ಪಾವತಿಗೆ ಕ್ರಮವಹಿಸಬೇಕು, ಬೇಸಿಗೆ ಅವಧಿಯಲ್ಲಿ ಕೂಲಿ ಕಾರ್ಮಿಕರಿಗೆ ನಿರಂತರ ಕೂಲಿ ಕೆಲಸ ನೀಡಬೇಕು ಎಂದರು.</p>.<p>ಕರ ವಸೂಲಾತಿ ಬಬಲೇಶ್ವರ ಕಳೆದ ವರ್ಷ ಉತ್ತಮ ಸಾಧನೆ ಮಾಡಿದ್ದು, ಪ್ರಸಕ್ತ ಸಾಲಿಗೂ ಉತ್ತಮ ಪ್ರಗತಿ ಕಾಣಬೇಕು. ಸ್ವಚ್ಛತಾ ಅಭಿಯಾನ ಪ್ರತಿ ಮೂರನೇ ಶನಿವಾರ ನಿರ್ಧಿಷ್ಟವಾಗಿ ಅಂಗನವಾಡಿ ಅಥವಾ ಶಾಲೆ, ಆರೋಗ್ಯ ಕೇಂದ್ರಗಳಲ್ಲಿ ಸ್ವ- ಸಹಾಯ ಸಂಘಗಳು, ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ಸೂಚನೆ ನೀಡಿದರು.</p>.<p>ಇ-ಹಾಜರಾತಿ, ನರೇಗಾ, ವಸತಿ, ಎಸ್ಬಿಎಂ, ಇ-ಖಾತಾ, ಗ್ರಂಥಾಲಯ, ಕರ ವಸೂಲಾತಿ ಸೇರಿ ವಿವಿಧ ವಿಷಯಗಳ ಕುರಿತು ಪರಿಶೀಲನೆ ನಡೆಸಿದರು.</p>.<p>ಕಾಖಂಡಕಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಆರೋಗ್ಯ ಕೇಂದ್ರದಲ್ಲಿನ ತಪಾಸಣಾ ಕೊಠಡಿ, ಪ್ರಯೋಗಾಲಯ, ಹೆರಿಗೆ ಕೊಠಡಿ, ವಾರ್ಡ್ಗಳು, ಲಸಿಕಾ ಕೊಠಡಿಗಳಿಗೆ ಭೇಟಿ ನೀಡಿ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಸಲಹೆ ನೀಡಿದರು.</p>.<p>ಆಸ್ಪತ್ರೆಗೆ ಬರುವ ರೋಗಿಗಳೊಡನೆ ಅತ್ಯಂತ ಸಹಕಾರ ಮನೋಭಾವದಿಂದ ವರ್ತಿಸಿ ತಾಳ್ಮೆಯಿಂದ ಸಂವಹನ ನಡೆಸಬೇಕು ಎಂದರು.</p>.<p>ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ನಿಲಯಕ್ಕೆ ತೆರಳಿ, ವಸತಿ ನಿಲಯದ ಆವರಣ, ಅಡುಗೆ ಕೋಣೆಯ ಆಹಾರ ಸಾಮಗ್ರಿ, ತರಕಾರಿ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ವ್ವವಸ್ಥೆ ಪರಿಶೀಲಿಸಿದರು.</p>.<p>ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಶ್ರಮವಹಿಸಬೇಕು, ಮಕ್ಕಳು ಸಹ ವಸತಿನಿಲಯದ ಲಾಭವನ್ನು ಪಡೆದು ಉತ್ತಮ ಪ್ರಜೆಯಾಗಿ ಹೊರ ಹೊಮ್ಮಬೇಕು ಎಂದರು. </p>.<p>ಕಾರಜೋಳ ಗ್ರಾಮಕ್ಕೆ ಭೇಟಿ ನೀಡಿದ ಅವರು, ನೂತನವಾಗಿ ನಿರ್ಮಾಣಗೊಂಡ ಗ್ರಾಮ ಪಂಚಾಯಿತಿ ಕಟ್ಟಡ, ಕಲ್ಯಾಣಿ, ಗೋಡೌನ್ಗಳನ್ನು ವೀಕ್ಷಣೆ ಮಾಡಿದರು.</p>.<p>ಬಬಲೇಶ್ವರ ಕಾರ್ಯ ನಿರ್ವಾಹಕ ಅಧಿಕಾರಿ ಜೆ.ಎಸ್ ಪಠಾಣ, ತಿಕೋಟಾ ಕಾರ್ಯ ನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ, ಸಹಾಯಕ ನಿರ್ದೇಶಕ ವಿ.ಎಸ್. ಹಿರೇಮಠ, ಬಸವರಾಜ ಸಂಕಗೊಂಡ ಇದ್ದರು.</p>.<p><strong>ಇ- ಹಾಜರಾತಿ ಸಲ್ಲಿಕೆಗೆ ಸೂಚನೆ ಗ್ರಂಥಾಲಯ ಕರ ನಿಗದಿತ ಸಮಯದೊಳಗೆ ಪಾವತಿಸಿ ಗ್ರಾ.ಪಂ.ಸಿಬ್ಬಂದಿ ಸಂಬಳ ಕಾಲಮಿತಿಯೊಳಗೆ ಪಾವತಿಸಿ</strong></p>.<div><blockquote>ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳೊಡನೆ ಅತ್ಯಂತ ಸಹಕಾರ ಮನೋಭಾವದಿಂದ ವರ್ತಿಸಿ ತಾಳ್ಮೆಯಿಂದ ಸಂವಹನ ನಡೆಸಬೇಕು. ಉತ್ತಮ ಚಿಕಿತ್ಸೆ ನೀಡಬೇಕು</blockquote><span class="attribution"> ರಿಷಿ ಆನಂದ್ ಸಿಇಒ ಜಿ.ಪಂ. ವಿಜಯಪುರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಗ್ರಾಮಗಳ ಅಭಿವೃದ್ಧಿಯಲ್ಲಿ ಪಿಡಿಒಗಳ ಪಾತ್ರ ಮುಖ್ಯವಾಗಿದ್ದು, ನಿರೀಕ್ಷಿತ ಪ್ರಗತಿಗೆ ಶ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್ ಸೂಚಿಸಿದರು.</p>.<p>ಬಬಲೇಶ್ವರ ತಾಲ್ಲೂಕು ಪಂಚಾಯಿತಿ ಸಭಾಗಂಣದಲ್ಲಿ ನಡೆದ ಬಬಲೇಶ್ವರ ಹಾಗೂ ತಿಕೋಟಾ ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ಎಲ್ಲಾ ಅಧಿಕಾರಿ, ಸಿಬ್ಬಂದಿ ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗಿ ಇ- ಹಾಜರಾತಿ ಮೂಲಕ ಹಾಜರಾತಿ ಸಲ್ಲಿಸಲು ಸೂಚಿಸಿದರು.</p>.<p>ಗ್ರಂಥಾಲಯ ಕರ ನಿಗದಿತ ಸಮಯದೊಳಗೆ ಕಟ್ಟಬೇಕು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಸಂಬಳ ವಿಳಂಬವಿಲ್ಲದೇ ಕಾಲಮಿತಿಯೊಳಗೆ ಪಾವತಿಗೆ ಕ್ರಮವಹಿಸಬೇಕು, ಬೇಸಿಗೆ ಅವಧಿಯಲ್ಲಿ ಕೂಲಿ ಕಾರ್ಮಿಕರಿಗೆ ನಿರಂತರ ಕೂಲಿ ಕೆಲಸ ನೀಡಬೇಕು ಎಂದರು.</p>.<p>ಕರ ವಸೂಲಾತಿ ಬಬಲೇಶ್ವರ ಕಳೆದ ವರ್ಷ ಉತ್ತಮ ಸಾಧನೆ ಮಾಡಿದ್ದು, ಪ್ರಸಕ್ತ ಸಾಲಿಗೂ ಉತ್ತಮ ಪ್ರಗತಿ ಕಾಣಬೇಕು. ಸ್ವಚ್ಛತಾ ಅಭಿಯಾನ ಪ್ರತಿ ಮೂರನೇ ಶನಿವಾರ ನಿರ್ಧಿಷ್ಟವಾಗಿ ಅಂಗನವಾಡಿ ಅಥವಾ ಶಾಲೆ, ಆರೋಗ್ಯ ಕೇಂದ್ರಗಳಲ್ಲಿ ಸ್ವ- ಸಹಾಯ ಸಂಘಗಳು, ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ಸೂಚನೆ ನೀಡಿದರು.</p>.<p>ಇ-ಹಾಜರಾತಿ, ನರೇಗಾ, ವಸತಿ, ಎಸ್ಬಿಎಂ, ಇ-ಖಾತಾ, ಗ್ರಂಥಾಲಯ, ಕರ ವಸೂಲಾತಿ ಸೇರಿ ವಿವಿಧ ವಿಷಯಗಳ ಕುರಿತು ಪರಿಶೀಲನೆ ನಡೆಸಿದರು.</p>.<p>ಕಾಖಂಡಕಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಆರೋಗ್ಯ ಕೇಂದ್ರದಲ್ಲಿನ ತಪಾಸಣಾ ಕೊಠಡಿ, ಪ್ರಯೋಗಾಲಯ, ಹೆರಿಗೆ ಕೊಠಡಿ, ವಾರ್ಡ್ಗಳು, ಲಸಿಕಾ ಕೊಠಡಿಗಳಿಗೆ ಭೇಟಿ ನೀಡಿ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಸಲಹೆ ನೀಡಿದರು.</p>.<p>ಆಸ್ಪತ್ರೆಗೆ ಬರುವ ರೋಗಿಗಳೊಡನೆ ಅತ್ಯಂತ ಸಹಕಾರ ಮನೋಭಾವದಿಂದ ವರ್ತಿಸಿ ತಾಳ್ಮೆಯಿಂದ ಸಂವಹನ ನಡೆಸಬೇಕು ಎಂದರು.</p>.<p>ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ನಿಲಯಕ್ಕೆ ತೆರಳಿ, ವಸತಿ ನಿಲಯದ ಆವರಣ, ಅಡುಗೆ ಕೋಣೆಯ ಆಹಾರ ಸಾಮಗ್ರಿ, ತರಕಾರಿ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ವ್ವವಸ್ಥೆ ಪರಿಶೀಲಿಸಿದರು.</p>.<p>ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಶ್ರಮವಹಿಸಬೇಕು, ಮಕ್ಕಳು ಸಹ ವಸತಿನಿಲಯದ ಲಾಭವನ್ನು ಪಡೆದು ಉತ್ತಮ ಪ್ರಜೆಯಾಗಿ ಹೊರ ಹೊಮ್ಮಬೇಕು ಎಂದರು. </p>.<p>ಕಾರಜೋಳ ಗ್ರಾಮಕ್ಕೆ ಭೇಟಿ ನೀಡಿದ ಅವರು, ನೂತನವಾಗಿ ನಿರ್ಮಾಣಗೊಂಡ ಗ್ರಾಮ ಪಂಚಾಯಿತಿ ಕಟ್ಟಡ, ಕಲ್ಯಾಣಿ, ಗೋಡೌನ್ಗಳನ್ನು ವೀಕ್ಷಣೆ ಮಾಡಿದರು.</p>.<p>ಬಬಲೇಶ್ವರ ಕಾರ್ಯ ನಿರ್ವಾಹಕ ಅಧಿಕಾರಿ ಜೆ.ಎಸ್ ಪಠಾಣ, ತಿಕೋಟಾ ಕಾರ್ಯ ನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ, ಸಹಾಯಕ ನಿರ್ದೇಶಕ ವಿ.ಎಸ್. ಹಿರೇಮಠ, ಬಸವರಾಜ ಸಂಕಗೊಂಡ ಇದ್ದರು.</p>.<p><strong>ಇ- ಹಾಜರಾತಿ ಸಲ್ಲಿಕೆಗೆ ಸೂಚನೆ ಗ್ರಂಥಾಲಯ ಕರ ನಿಗದಿತ ಸಮಯದೊಳಗೆ ಪಾವತಿಸಿ ಗ್ರಾ.ಪಂ.ಸಿಬ್ಬಂದಿ ಸಂಬಳ ಕಾಲಮಿತಿಯೊಳಗೆ ಪಾವತಿಸಿ</strong></p>.<div><blockquote>ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳೊಡನೆ ಅತ್ಯಂತ ಸಹಕಾರ ಮನೋಭಾವದಿಂದ ವರ್ತಿಸಿ ತಾಳ್ಮೆಯಿಂದ ಸಂವಹನ ನಡೆಸಬೇಕು. ಉತ್ತಮ ಚಿಕಿತ್ಸೆ ನೀಡಬೇಕು</blockquote><span class="attribution"> ರಿಷಿ ಆನಂದ್ ಸಿಇಒ ಜಿ.ಪಂ. ವಿಜಯಪುರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>