ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಮಾತನಾಡಿ, ದೇಶದ ಗಡಿಯಲ್ಲಿ ಹಾಗೂ ದೇಶದೊಳಗೆ ಉಗ್ರರು, ನಕ್ಸಲೀಯರನ್ನು ಬಗ್ಗು ಬಡಿಯುವಾಗ ಹಾಗೂ ಕೋಮು ಗಲಭೆ ನಿಯಂತ್ರಿಸುವಾಗ, ಪ್ರಾಕೃತಿಕ ವಿಕೋಪಗಳ ವೇಳೆ ರಕ್ಷಣಾ ಕಾರ್ಯಾಚರಣೆ ನಡೆಸುವಾಗ ಜೀವ ಕಳೆದುಕೊಳ್ಳುತ್ತಿದ್ದ ಪೊಲೀಸರು ಈ ಬಾರಿ ಕೋವಿಡ್ ವಿರುದ್ಧವೂ ಹೋರಾಟ ನಡೆಸಿ, ಕರ್ತವ್ಯದ ವೇಳೆ ಜೀವ ತೆತ್ತಿದ್ದಾರೆ ಎಂದರು.