<p><strong>ವಿಜಯಪುರ</strong>: ‘ಗುಮ್ಮಟನಗರಿ‘ಯ ರೈಲು ನಿಲ್ದಾಣದಲ್ಲಿ ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ. ಹೀಗಾಗಿ ಇದು ಕೇವಲ ರೈಲು ನಿಲ್ದಾಣವಲ್ಲ; ಮಳೆ ನೀರು ನಿಲ್ದಾಣವಾಗಿ(ರೈನ್ ನಿಲ್ದಾಣ) ಗುರುತಿಸಿಕೊಂಡಿದೆ.</p>.<p>ಹೌದು, ನಗರದ ರೈಲು ನಿಲ್ದಾಣದ ಚಾವಣಿ ಮೇಲೆ ಹಾಗೂ ಆವರಣದಲ್ಲಿ ಬೀಳುವ ಒಂದು ಹನಿ ಮಳೆ ನೀರೂ ವ್ಯರ್ಥವಾಗದಂತೆ ವೈಜ್ಞಾನಿಕವಾಗಿ ಕಾಪಿಡುವ, ಬಳಸುವ ಮೂಲಕ ಸ್ವಾಲಂಬನೆ ಜೊತೆಗೆ ಹಣದ ಉಳಿತಾಯವೂ ಸಾಧ್ಯವಾಗಿದೆ.</p>.<p>6937 ಚದರ ಮೀಟರ್ ಸುತ್ತಳತೆಯ ವಿಜಯಪುರ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ಸುರಿಯುವ ಮಳೆ ನೀರನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಿಕೊಂಡಿರುವುದರಿಂದ ವಾರ್ಷಿಕ29,135,40 ಲೀಟರ್ ನೀರು ಸಂಗ್ರಹವಾಗುತ್ತಿದೆ. ಈ ಮಳೆ ನೀರನ್ನು ರೈಲು ನಿಲ್ದಾಣದ ಸ್ವಚ್ಛತೆಗೆ ಹಾಗೂ ಉದ್ಯಾನ, ಗಿಡಮರಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ನಿಲ್ದಾಣದ ಆಸುಪಾಸು ಅಂತರ್ಜಲ ಮಟ್ಟವೂ ಏರಿಕೆಯಾಗಿದೆ ಎನ್ನುತ್ತಾರೆ ಹುಬ್ಬಳಿ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಅನೀಶ್ ಹೆಗ್ಡೆ.</p>.<p>ಅಷ್ಟೇ ಅಲ್ಲದೇ, ನೈರುತ್ಯ ರೈಲ್ವೆ ಇಲಾಖೆಯು ವಿಜಯಪುರ ಮಹಾನಗರ ಪಾಲಿಕೆಗೆ ಪ್ರತಿ ವರ್ಷ ಪಾವತಿಸುತ್ತಿರುವ ನೀರಿನ ಶುಲ್ಕದಲ್ಲಿ ₹87,406 ಉಳಿತಾಯವಾಗಿದೆ ಎನ್ನುತ್ತಾರೆ ಅನೀಶ್ ಹೆಗ್ಡೆ.</p>.<p>ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ಮಳೆಯಾದಾಗ ಹರಿದುಬರುವ ನೀರಿನ ಸಂಗ್ರಹಕ್ಕಾಗಿ (6 ಮೀಟರ್ X 3.25 ಮೀಟರ್ X1.70 ಮೀ) ಗುಂಡಿಯೊಂದನ್ನು ನಿರ್ಮಿಸಲಾಗಿದೆ. ಈ ಗುಂಡಿಗೆ ಮಳೆ ನೀರಿನೊಂದಿಗೆ ತೇಲಿಕೊಂಡು ಬರುವ ತ್ಯಾಜ್ಯ, ಮಣ್ಣು ಗುಂಡಿಯೊಳಗೆ ಹೋಗದಂತೆ ತಡೆಯಲು ಅಲ್ಲಲ್ಲಿ ಜಾಲರಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, 150 ಮೀಟರ್ ಆಳದ ಕೊಳವೆಬಾವಿಯಲ್ಲಿ ಮಳೆ ನೀರು ಇಂಗಲು ವ್ಯವಸ್ಥೆ ಮಾಡಲಾಗಿದೆ.</p>.<p>ಕಸ, ಕಡ್ಡಿ, ಮಣ್ಣು ಈ ಕೊಳವೆಬಾವಿಯೊಳಗೆ ಹೋಗದಂತೆಯೂ ಜಾಲರಿ ಅಳವಡಿಸಲಾಗಿದೆ. ಈ ಕೊಳವೆಬಾವಿ ಮತ್ತು ಗುಂಡಿಯ ಬಳಿ ಜಾನುವಾರು ಸೇರಿದಂತೆ ಜನರೂ ಬರದಂತೆ ತಪ್ಪಿಸಲು ಸುತ್ತಲೂ ತಂತಿಬೇಲಿ ಅಳವಡಿಸಲಾಗಿದೆ.</p>.<p>ಬರದ ನಾಡಿನರೈಲು ನಿಲ್ದಾಣ ಇದೀಗ ನೀರು ನಿಲ್ದಾಣದ ಖ್ಯಾತಿ ಗಳಿಸಿದೆ.</p>.<p>****</p>.<p>ರೈಲು ನಿಲ್ದಾಣದಲ್ಲಿ ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಿರುವುದರಿಂದ ನಿಲ್ದಾಣದ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಜೊತೆಗೆ ರೈಲ್ವೆಗೆ ಹಣದ ಉಳಿತಾಯವೂ ಆಗಿದೆ</p>.<p>–ಅನೀಶ್ ಹೆಗ್ಡೆ,ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ</p>.<p>ನೈರುತ್ಯ ರೈಲ್ವೆ,ಹುಬ್ಬಳಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ‘ಗುಮ್ಮಟನಗರಿ‘ಯ ರೈಲು ನಿಲ್ದಾಣದಲ್ಲಿ ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ. ಹೀಗಾಗಿ ಇದು ಕೇವಲ ರೈಲು ನಿಲ್ದಾಣವಲ್ಲ; ಮಳೆ ನೀರು ನಿಲ್ದಾಣವಾಗಿ(ರೈನ್ ನಿಲ್ದಾಣ) ಗುರುತಿಸಿಕೊಂಡಿದೆ.</p>.<p>ಹೌದು, ನಗರದ ರೈಲು ನಿಲ್ದಾಣದ ಚಾವಣಿ ಮೇಲೆ ಹಾಗೂ ಆವರಣದಲ್ಲಿ ಬೀಳುವ ಒಂದು ಹನಿ ಮಳೆ ನೀರೂ ವ್ಯರ್ಥವಾಗದಂತೆ ವೈಜ್ಞಾನಿಕವಾಗಿ ಕಾಪಿಡುವ, ಬಳಸುವ ಮೂಲಕ ಸ್ವಾಲಂಬನೆ ಜೊತೆಗೆ ಹಣದ ಉಳಿತಾಯವೂ ಸಾಧ್ಯವಾಗಿದೆ.</p>.<p>6937 ಚದರ ಮೀಟರ್ ಸುತ್ತಳತೆಯ ವಿಜಯಪುರ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ಸುರಿಯುವ ಮಳೆ ನೀರನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಿಕೊಂಡಿರುವುದರಿಂದ ವಾರ್ಷಿಕ29,135,40 ಲೀಟರ್ ನೀರು ಸಂಗ್ರಹವಾಗುತ್ತಿದೆ. ಈ ಮಳೆ ನೀರನ್ನು ರೈಲು ನಿಲ್ದಾಣದ ಸ್ವಚ್ಛತೆಗೆ ಹಾಗೂ ಉದ್ಯಾನ, ಗಿಡಮರಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ನಿಲ್ದಾಣದ ಆಸುಪಾಸು ಅಂತರ್ಜಲ ಮಟ್ಟವೂ ಏರಿಕೆಯಾಗಿದೆ ಎನ್ನುತ್ತಾರೆ ಹುಬ್ಬಳಿ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಅನೀಶ್ ಹೆಗ್ಡೆ.</p>.<p>ಅಷ್ಟೇ ಅಲ್ಲದೇ, ನೈರುತ್ಯ ರೈಲ್ವೆ ಇಲಾಖೆಯು ವಿಜಯಪುರ ಮಹಾನಗರ ಪಾಲಿಕೆಗೆ ಪ್ರತಿ ವರ್ಷ ಪಾವತಿಸುತ್ತಿರುವ ನೀರಿನ ಶುಲ್ಕದಲ್ಲಿ ₹87,406 ಉಳಿತಾಯವಾಗಿದೆ ಎನ್ನುತ್ತಾರೆ ಅನೀಶ್ ಹೆಗ್ಡೆ.</p>.<p>ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ಮಳೆಯಾದಾಗ ಹರಿದುಬರುವ ನೀರಿನ ಸಂಗ್ರಹಕ್ಕಾಗಿ (6 ಮೀಟರ್ X 3.25 ಮೀಟರ್ X1.70 ಮೀ) ಗುಂಡಿಯೊಂದನ್ನು ನಿರ್ಮಿಸಲಾಗಿದೆ. ಈ ಗುಂಡಿಗೆ ಮಳೆ ನೀರಿನೊಂದಿಗೆ ತೇಲಿಕೊಂಡು ಬರುವ ತ್ಯಾಜ್ಯ, ಮಣ್ಣು ಗುಂಡಿಯೊಳಗೆ ಹೋಗದಂತೆ ತಡೆಯಲು ಅಲ್ಲಲ್ಲಿ ಜಾಲರಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, 150 ಮೀಟರ್ ಆಳದ ಕೊಳವೆಬಾವಿಯಲ್ಲಿ ಮಳೆ ನೀರು ಇಂಗಲು ವ್ಯವಸ್ಥೆ ಮಾಡಲಾಗಿದೆ.</p>.<p>ಕಸ, ಕಡ್ಡಿ, ಮಣ್ಣು ಈ ಕೊಳವೆಬಾವಿಯೊಳಗೆ ಹೋಗದಂತೆಯೂ ಜಾಲರಿ ಅಳವಡಿಸಲಾಗಿದೆ. ಈ ಕೊಳವೆಬಾವಿ ಮತ್ತು ಗುಂಡಿಯ ಬಳಿ ಜಾನುವಾರು ಸೇರಿದಂತೆ ಜನರೂ ಬರದಂತೆ ತಪ್ಪಿಸಲು ಸುತ್ತಲೂ ತಂತಿಬೇಲಿ ಅಳವಡಿಸಲಾಗಿದೆ.</p>.<p>ಬರದ ನಾಡಿನರೈಲು ನಿಲ್ದಾಣ ಇದೀಗ ನೀರು ನಿಲ್ದಾಣದ ಖ್ಯಾತಿ ಗಳಿಸಿದೆ.</p>.<p>****</p>.<p>ರೈಲು ನಿಲ್ದಾಣದಲ್ಲಿ ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಿರುವುದರಿಂದ ನಿಲ್ದಾಣದ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಜೊತೆಗೆ ರೈಲ್ವೆಗೆ ಹಣದ ಉಳಿತಾಯವೂ ಆಗಿದೆ</p>.<p>–ಅನೀಶ್ ಹೆಗ್ಡೆ,ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ</p>.<p>ನೈರುತ್ಯ ರೈಲ್ವೆ,ಹುಬ್ಬಳಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>