<p><strong>ವಿಜಯಪುರ:</strong>‘ನಾಗಠಾಣ ಶಾಸಕ ದೇವಾನಂದ ಚವ್ಹಾಣ ಅವರಿಗೆ ನನ್ನ ಅಧಿಕಾರ ಮಿತಿಯಲ್ಲೇ ಭದ್ರತಾ ಸಿಬ್ಬಂದಿ ನಿಯೋಜಿಸಿರುವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್ ಅಮೃತ್ ತಿಳಿಸಿದರು.</p>.<p>‘ಶಾಸಕರು ಭಾನುವಾರ ಭೇಟಿಯಾಗಿ ಭದ್ರತಾ ಸಿಬ್ಬಂದಿ ಒದಗಿಸುವಂತೆ ಮನವಿ ಮಾಡಿದರು. ಇದೇ ಸಂದರ್ಭ ಬೆದರಿಕೆ ಕರೆ ಬಗ್ಗೆ ವಿಚಾರಿಸಿದೆ. ಮಾಹಿತಿ ನೀಡಲಿಲ್ಲ. ದೂರು ನೀಡುವಂತೆ ತಿಳಿಸಿದೆ’ ಎಂದು ಭಾನುವಾರ ಎಸ್ಪಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಗುಪ್ತಚರ ವಿಭಾಗದ ವತಿಯಿಂದ ಪಟ್ಟಿ ಬಂದ ಬಳಿಕ ಸಹಜವಾಗಿ ಎಲ್ಲ ಶಾಸಕರಿಗೂ ಭದ್ರತಾ ಸಿಬ್ಬಂದಿ ನೀಡುತ್ತೇವೆ. ನಾಗಠಾಣ ಶಾಸಕರು ಪಟ್ಟಿ ಬರುವ ಮುನ್ನವೇ ಮನವಿ ಮಾಡಿಕೊಂಡಿದ್ದರಿಂದ, ನನ್ನ ಅಧಿಕಾರ ವ್ಯಾಪ್ತಿಯಲ್ಲೇ ಸಿಬ್ಬಂದಿಯೊಬ್ಬರನ್ನು ನಿಯೋಜಿಸಿರುವೆ’ ಎಂದು ನಿಕ್ಕಂ ಹೇಳಿದರು.</p>.<p>‘ಸಮಸ್ಯೆ ಇರುವುದರಿಂದ ಎಸ್ಪಿ ಭೇಟಿಯಾಗಿ ಭದ್ರತಾ ಸಿಬ್ಬಂದಿ ನಿಯೋಜಿಸುವಂತೆ ಮನವಿ ಮಾಡಿರುವೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದಷ್ಟೇ ಶಾಸಕ ದೇವಾನಂದ ಚವ್ಹಾಣ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong>‘ನಾಗಠಾಣ ಶಾಸಕ ದೇವಾನಂದ ಚವ್ಹಾಣ ಅವರಿಗೆ ನನ್ನ ಅಧಿಕಾರ ಮಿತಿಯಲ್ಲೇ ಭದ್ರತಾ ಸಿಬ್ಬಂದಿ ನಿಯೋಜಿಸಿರುವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್ ಅಮೃತ್ ತಿಳಿಸಿದರು.</p>.<p>‘ಶಾಸಕರು ಭಾನುವಾರ ಭೇಟಿಯಾಗಿ ಭದ್ರತಾ ಸಿಬ್ಬಂದಿ ಒದಗಿಸುವಂತೆ ಮನವಿ ಮಾಡಿದರು. ಇದೇ ಸಂದರ್ಭ ಬೆದರಿಕೆ ಕರೆ ಬಗ್ಗೆ ವಿಚಾರಿಸಿದೆ. ಮಾಹಿತಿ ನೀಡಲಿಲ್ಲ. ದೂರು ನೀಡುವಂತೆ ತಿಳಿಸಿದೆ’ ಎಂದು ಭಾನುವಾರ ಎಸ್ಪಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಗುಪ್ತಚರ ವಿಭಾಗದ ವತಿಯಿಂದ ಪಟ್ಟಿ ಬಂದ ಬಳಿಕ ಸಹಜವಾಗಿ ಎಲ್ಲ ಶಾಸಕರಿಗೂ ಭದ್ರತಾ ಸಿಬ್ಬಂದಿ ನೀಡುತ್ತೇವೆ. ನಾಗಠಾಣ ಶಾಸಕರು ಪಟ್ಟಿ ಬರುವ ಮುನ್ನವೇ ಮನವಿ ಮಾಡಿಕೊಂಡಿದ್ದರಿಂದ, ನನ್ನ ಅಧಿಕಾರ ವ್ಯಾಪ್ತಿಯಲ್ಲೇ ಸಿಬ್ಬಂದಿಯೊಬ್ಬರನ್ನು ನಿಯೋಜಿಸಿರುವೆ’ ಎಂದು ನಿಕ್ಕಂ ಹೇಳಿದರು.</p>.<p>‘ಸಮಸ್ಯೆ ಇರುವುದರಿಂದ ಎಸ್ಪಿ ಭೇಟಿಯಾಗಿ ಭದ್ರತಾ ಸಿಬ್ಬಂದಿ ನಿಯೋಜಿಸುವಂತೆ ಮನವಿ ಮಾಡಿರುವೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದಷ್ಟೇ ಶಾಸಕ ದೇವಾನಂದ ಚವ್ಹಾಣ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>