<p><strong>ವಿಜಯಪುರ</strong>: ‘ಶರಣ ಸಾಹಿತ್ಯದ ಆಚಾರ–ವಿಚಾರಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಪಾಲಿಸಿದಾಗ ಮಾತ್ರ ಶರಣರ ಚಿಂತನೆಗಳಿಗೆ ಅರ್ಥ ಬರಲು ಸಾಧ್ಯ’ ಎಂದು ಅಕ್ಕಮಹಾದೇವಿ ಮಹಿಳಾ ವಿವಿಯ ಶಿಕ್ಷಣ ವಿಭಾಗದ ಮುಖ್ಯಸ್ಥ ವಿಷ್ಣು ಶಿಂಧೆ ಹೇಳಿದರು.</p>.<p>ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ‘ಶರಣ ಸಾಹಿತ್ಯ ಗೋಷ್ಠಿ’ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಶರಣರು ತಮ್ಮ ಬದುಕನ್ನು ಸಮಾಜದ ಒಳಿತಿಗೆ ಮೀಸಲಾಗಿಟ್ಟಿದ್ದರು. ಶರಣರ ಚಿಂತನೆಗಳು ಸಮಾಜ ಪರಿವರ್ತನೆಗೆ ಸನ್ಮಾರ್ಗವಿದ್ದಂತೆ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗೋಣ’ ಎಂದರು.</p>.<p>ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಮಾತನಾಡಿ, ‘ಮಾನವನಲ್ಲಿ ನಿರ್ಮಲ ಹೃದಯವಂತಿಕೆ ಇರಬೇಕು ಎಂದು ಪ್ರತಿಪಾದಿಸಿದ ಬಸವಾದಿ ಶರಣರ ವಿಚಾರಗಳನ್ನು ನವ ಯುಗದ ಸಮಾಜ ಮೈಗೂಡಿಸಿಕೊಳ್ಳಬೇಕಿದೆ’ ಎಂದರು.</p>.<p>‘ವಚನಗಳಲ್ಲಿ ಸಾಮಾಜಿಕ ಸಾಮರಸ್ಯ’ ವಿಷಯದ ಕುರಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಮಹಮ್ಮದ್ಗೌಸ್ ಹವಾಲ್ದಾರ್ ಉಪನ್ಯಾಸ ನೀಡಿದರು.</p>.<p>‘ಮಹಿಳಾ ಸಂವೇದನೆ ವಚನಗಳು’ ವಿಷಯದ ಕುರಿತು ಸಾಹಿತಿ ಶೋಭಾ ಮೆಡೆಗಾರ ಉಪನ್ಯಾಸ ನೀಡಿದರು.</p>.<p>‘ಜಿಲ್ಲೆಯ ಶರಣ ಶರಣೆಯರು’ ವಿಷಯದ ಕುರಿತು ತಿಕೋಟಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿಲ್ಪಾ ಹಂಜಿ ಉಪನ್ಯಾಸ ನೀಡಿದರು.</p>.<p>ಗೋಷ್ಠಿಯಲ್ಲಿ ಬಸವನ ಬಾಗೇವಾಡಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಬಿ ಮತ್ತೂರ, ಜಗದೀಶ ಬೋಳಸೂರ, ಅಶೋಕ ಆಸಂಗಿ, ಸಂಗಮೇಶ ಕೆಂಭಾವಿ, ಸಂತೋಷ ಅಮರಗೊಂಡ, ಸಾವಿತ್ರಿ ಬಾಗಲಕೋಟ, ನೀಲಾ ಆಲೂರ, ಅಮೋಘಸಿದ್ಧ ಪೂಜಾರಿ, ಮಮತಾ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ‘ಶರಣ ಸಾಹಿತ್ಯದ ಆಚಾರ–ವಿಚಾರಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಪಾಲಿಸಿದಾಗ ಮಾತ್ರ ಶರಣರ ಚಿಂತನೆಗಳಿಗೆ ಅರ್ಥ ಬರಲು ಸಾಧ್ಯ’ ಎಂದು ಅಕ್ಕಮಹಾದೇವಿ ಮಹಿಳಾ ವಿವಿಯ ಶಿಕ್ಷಣ ವಿಭಾಗದ ಮುಖ್ಯಸ್ಥ ವಿಷ್ಣು ಶಿಂಧೆ ಹೇಳಿದರು.</p>.<p>ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ‘ಶರಣ ಸಾಹಿತ್ಯ ಗೋಷ್ಠಿ’ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಶರಣರು ತಮ್ಮ ಬದುಕನ್ನು ಸಮಾಜದ ಒಳಿತಿಗೆ ಮೀಸಲಾಗಿಟ್ಟಿದ್ದರು. ಶರಣರ ಚಿಂತನೆಗಳು ಸಮಾಜ ಪರಿವರ್ತನೆಗೆ ಸನ್ಮಾರ್ಗವಿದ್ದಂತೆ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗೋಣ’ ಎಂದರು.</p>.<p>ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಮಾತನಾಡಿ, ‘ಮಾನವನಲ್ಲಿ ನಿರ್ಮಲ ಹೃದಯವಂತಿಕೆ ಇರಬೇಕು ಎಂದು ಪ್ರತಿಪಾದಿಸಿದ ಬಸವಾದಿ ಶರಣರ ವಿಚಾರಗಳನ್ನು ನವ ಯುಗದ ಸಮಾಜ ಮೈಗೂಡಿಸಿಕೊಳ್ಳಬೇಕಿದೆ’ ಎಂದರು.</p>.<p>‘ವಚನಗಳಲ್ಲಿ ಸಾಮಾಜಿಕ ಸಾಮರಸ್ಯ’ ವಿಷಯದ ಕುರಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಮಹಮ್ಮದ್ಗೌಸ್ ಹವಾಲ್ದಾರ್ ಉಪನ್ಯಾಸ ನೀಡಿದರು.</p>.<p>‘ಮಹಿಳಾ ಸಂವೇದನೆ ವಚನಗಳು’ ವಿಷಯದ ಕುರಿತು ಸಾಹಿತಿ ಶೋಭಾ ಮೆಡೆಗಾರ ಉಪನ್ಯಾಸ ನೀಡಿದರು.</p>.<p>‘ಜಿಲ್ಲೆಯ ಶರಣ ಶರಣೆಯರು’ ವಿಷಯದ ಕುರಿತು ತಿಕೋಟಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿಲ್ಪಾ ಹಂಜಿ ಉಪನ್ಯಾಸ ನೀಡಿದರು.</p>.<p>ಗೋಷ್ಠಿಯಲ್ಲಿ ಬಸವನ ಬಾಗೇವಾಡಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಬಿ ಮತ್ತೂರ, ಜಗದೀಶ ಬೋಳಸೂರ, ಅಶೋಕ ಆಸಂಗಿ, ಸಂಗಮೇಶ ಕೆಂಭಾವಿ, ಸಂತೋಷ ಅಮರಗೊಂಡ, ಸಾವಿತ್ರಿ ಬಾಗಲಕೋಟ, ನೀಲಾ ಆಲೂರ, ಅಮೋಘಸಿದ್ಧ ಪೂಜಾರಿ, ಮಮತಾ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>