ಆಡಳಿತ ಸಂಪೂರ್ಣ ಸುಧಾರಣೆಯಾಗಲಿ: ನಗರಸಭೆಯಾಗಿ ಮೇಲ್ದರ್ಜೆಗೇರಿದೆ ಎಂದು ಹೆಮ್ಮೆಪಟ್ಟರೆ ಸಾಲದು. ಕಾರ್ಯಾಲಯದ ಹದಗೆಟ್ಟ ಆಡಳಿತ ಸಂಪೂರ್ಣ ಸುಧಾರಣೆಯಾಗಬೇಕು. ಇಲ್ಲಿ ದುಡಿಯುವ ಶ್ರಮಿಕ ವರ್ಗ ಹೊರಗುತ್ತಿಗೆ ಕಾರ್ಮಿಕರು ಸಂಬಳವಿಲ್ಲದೇ ಹಿಡಿಶಾಪ ಹಾಕುತ್ತಿದ್ದಾರೆ. ಹೀಗಿದ್ದಾಗ ನಗರಸಭೆ ಯಾವ ಪುರುಷಾರ್ಥಕ್ಕಾಗಿ? ಇನ್ನಾದರೂ ಪಾರದರ್ಶಕ ಆಡಳಿತದೊಂದಿಗೆ ಅಭಿವೃದ್ಧಿಗೆ ಒತ್ತು ಕೊಡಬೇಕು
ಶಾಂತವೀರ ಬಿರಾದಾರ ಸಿಂದಗಿ ಪುರಸಭೆ ಮಾಜಿ ಅಧ್ಯಕ್ಷ
ಅನುದಾನ ಸೂಕ್ತ ಬಳಕೆ ಅಗತ್ಯ: ಪುರಸಭೆ ನಗರಸಭೆಯಾಗಿ ಕಾಗದ ಮತ್ತು ನಾಮಫಲಕದಲ್ಲಿ ಮಾತ್ರ ಮೇಲ್ದರ್ಜೆಗೇರಿದರೆ ಏನೂ ಪ್ರಯೋಜನವಿಲ್ಲ. ಸರ್ಕಾರದ ಅನುದಾನ ಸಿಂದಗಿ ಸ್ವಚ್ಛ ನಗರವಾಗಲು ಅಭಿವೃದ್ಧಿಗೊಳ್ಳುವ ನಗರವಾಗಲು ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು
ಸಂತೋಷ ಪಾಟೀಲ ಡಂಬಳ ಬಿಜೆಪಿ ಮಂಡಲ ಅಧ್ಯಕ್ಷ
ಹೊಸ ಬಾಟಲಿಯಲ್ಲಿ ಹಳೆಯ ಪಾನೀಯ: ಹೊಸ ಬಾಟಲಿಯಲ್ಲಿ ಹಳೆಯ ಪಾನೀಯ ಇದ್ದಂತಾಗಿದೆ ಸಿಂದಗಿ ಪುರಸಭೆ ನಗರಸಭೆಯಾದ ಪರಿಸ್ಥಿತಿ. ಇಡೀ ರಾಜ್ಯದಲ್ಲಿಯೇ ಹಗರಣಗಳ ಸರಮಾಲೆಗೆ ಹೆಸರು ಮಾಡಿದ ಏಕಮೇವ ಪುರಸಭೆ ಎಂದರೆ ಇದೇ ಆಗಿದೆ. ನಗರಸಭೆ ಕಾರ್ಯಾಲಯದಲ್ಲಿ ಹಳೆಯ ಆಡಳಿತವೇ ಮುಂದುವರಿದರೆ ಅಭಿವೃದ್ಧಿಗೆ ಅವಕಾಶವೇ ಇರಲ್ಲ.
ಪ್ರಕಾಶ ಹಿರೇಕುರುಬರ ಜೆಡಿಎಸ್ ರಾಜ್ಯ ಘಟಕದ ಕಾರ್ಯದರ್ಶಿ ಸಿಂದಗಿ
ಹೆಚ್ಚಿನ ಅನುದಾನ ಲಭ್ಯ: ಸಿಂದಗಿ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ದೊರಕುತ್ತದೆ. ಪೌರ ಕಾರ್ಮಿಕರ ಸಂಖ್ಯೆ ಹೆಚ್ಚುತ್ತದೆ. ನಗರದ ಸ್ವಚ್ಛತೆಗೆ ಅಗತ್ಯವಾಗಿರುವ ವಾಹನಗಳು ದ್ವಿಗುಣಗೊಳ್ಳುತ್ತವೆ. ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿಯವರು ಮುಂಬರುವ ದಿನಗಳಲ್ಲಿ ನಗರಸಭೆ ಸದಸ್ಯರ ಸಹಕಾರದಿಂದ ಅನುದಾನದ ಸದ್ಬಳಕೆಯೊಂದಿಗೆ ಮಾದರಿ ನಗರವನ್ನಾಗಿಸುವ ಕಾರ್ಯಕ್ಕೆ ಮುಂದಾಗಲಿದ್ದಾರೆ