ರೇಣುಕರ ದಶಸೂತ್ರ ಬಸವಣ್ಣವರ ಸಪ್ತ ಸೂತ್ರ...
ಪಂಚಾಚಾರ್ಯ ರೇಣುಕರ ಧರ್ಮದ ದಶ ಸೂತ್ರಗಳು ಮತ್ತು ಬಸವಣ್ಣನವರ ಸಪ್ತ ಸೂತ್ರಗಳು ಪ್ರತಿಯೊಬ್ಬ ವ್ಯಕ್ತಿಗೂ ದಾರಿದೀಪ. ಈ ಸೂತ್ರಗಳು ಎಲ್ಲ ಧರ್ಮಿಯರಿಗೂ ಅನ್ವಯವಾಗುತ್ತವೆ. ಇವುಗಳನ್ನು ಜೀವನದಲ್ಲಿ ಪರಿಪಾಲಿಸಿದರೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಆದರೆ ಸತ್ಯಕ್ಕಿಂತ ಸುಳ್ಳು ವಿಜೃಂಭಿಸಿ ಎಲ್ಲ ರಂಗಗಳಲ್ಲಿ ಕಲುಷಿತ ವಾತಾವರಣವಿದೆ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು