<p><strong>ಸಿಂದಗಿ</strong>: ಬಳಗಾನೂರ ಗ್ರಾಮದ ಯುವಕ ಕೇದಾರಲಿಂಗ ಕುಂಬಾರ ಜನವರಿ 3 ರಂದು ಗ್ರಾಮದಿಂದ 55 ಕೆ.ಜಿ ತೂಕದ ಗೋದಿ ಹೊತ್ತುಕೊಂಡು ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದರು. ಅವರು ಭಾನುವಾರ ಫೆ. 8 ರಂದು ಗ್ರಾಮದಿಂದ 1350 ಕಿ.ಮಿ ದೂರದ ಉತ್ತರಪ್ರದೇಶದ ಪ್ರಯಾಗರಾಜ್ ತ್ರಿವೇಣಿ ಸಂಗಮ ತಲುಪಿದ್ದಾರೆ.</p>.<p>ಸಂಗಮದಲ್ಲಿ ಸ್ನಾನ ಮುಗಿಸಿ ಹೊತ್ತುಕೊಂಡು ಹೋದ ಗೋದಿ ಚೀಲಕ್ಕೆ ಪೂಜೆ ಸಲ್ಲಿಸಿದ್ದಾರೆ. ಅಲ್ಲಿಂದ ಮತ್ತೆ ಅಯೋಧ್ಯೆಯತ್ತ ಪಾದಯಾತ್ರೆ ಬೆಳೆಸಿದ್ದಾರೆ.<br /> ಅವರ ಜೊತೆ ಅದೇ ಗ್ರಾಮದ ಮುಸ್ಲಿಂ ವ್ಯಕ್ತಿ ನೂರಸಾಬ ನಧಾಪ್ ಹಾಗೂ ವಿವೇಕಾನಂದ ಕುಂಬಾರ, ರೇವಣಸಿದ್ದಪ್ಪ ಕೊಪ್ಪ, ಅರವಿಂದ ಪುರದಾಳ ಇದ್ದಾರೆ.</p>.<p>ನಿತ್ಯ 40-50 ಕಿ.ಮಿ ನಡೆದು ವಾಸ್ತವ್ಯ ಮಾಡಿ ಮತ್ತೆ ಪಾದಯಾತ್ರೆ ಬೆಳೆಸುತ್ತಾರೆ. ವಿವೇಕಾನಂದ ಕುಂಬಾರ ಸಹಾಯಕನಾಗಿ ಬೈಕ್ ತೆಗೆದುಕೊಂಡು ಪಾದಯಾತ್ರಿ ಯುವಕನಿಗೆ ನೀರು, ಊಟದ ವ್ಯವಸ್ಥೆ ಮಾಡುತ್ತಾರೆ ಎಂದು ಗ್ರಾಮದ ಅನೀಲ ಸುರಗಿಹಳ್ಳಿ 'ಪ್ರಜಾವಾಣಿ' ಗೆ ಪ್ರತಿಕ್ರಿಯಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ</strong>: ಬಳಗಾನೂರ ಗ್ರಾಮದ ಯುವಕ ಕೇದಾರಲಿಂಗ ಕುಂಬಾರ ಜನವರಿ 3 ರಂದು ಗ್ರಾಮದಿಂದ 55 ಕೆ.ಜಿ ತೂಕದ ಗೋದಿ ಹೊತ್ತುಕೊಂಡು ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದರು. ಅವರು ಭಾನುವಾರ ಫೆ. 8 ರಂದು ಗ್ರಾಮದಿಂದ 1350 ಕಿ.ಮಿ ದೂರದ ಉತ್ತರಪ್ರದೇಶದ ಪ್ರಯಾಗರಾಜ್ ತ್ರಿವೇಣಿ ಸಂಗಮ ತಲುಪಿದ್ದಾರೆ.</p>.<p>ಸಂಗಮದಲ್ಲಿ ಸ್ನಾನ ಮುಗಿಸಿ ಹೊತ್ತುಕೊಂಡು ಹೋದ ಗೋದಿ ಚೀಲಕ್ಕೆ ಪೂಜೆ ಸಲ್ಲಿಸಿದ್ದಾರೆ. ಅಲ್ಲಿಂದ ಮತ್ತೆ ಅಯೋಧ್ಯೆಯತ್ತ ಪಾದಯಾತ್ರೆ ಬೆಳೆಸಿದ್ದಾರೆ.<br /> ಅವರ ಜೊತೆ ಅದೇ ಗ್ರಾಮದ ಮುಸ್ಲಿಂ ವ್ಯಕ್ತಿ ನೂರಸಾಬ ನಧಾಪ್ ಹಾಗೂ ವಿವೇಕಾನಂದ ಕುಂಬಾರ, ರೇವಣಸಿದ್ದಪ್ಪ ಕೊಪ್ಪ, ಅರವಿಂದ ಪುರದಾಳ ಇದ್ದಾರೆ.</p>.<p>ನಿತ್ಯ 40-50 ಕಿ.ಮಿ ನಡೆದು ವಾಸ್ತವ್ಯ ಮಾಡಿ ಮತ್ತೆ ಪಾದಯಾತ್ರೆ ಬೆಳೆಸುತ್ತಾರೆ. ವಿವೇಕಾನಂದ ಕುಂಬಾರ ಸಹಾಯಕನಾಗಿ ಬೈಕ್ ತೆಗೆದುಕೊಂಡು ಪಾದಯಾತ್ರಿ ಯುವಕನಿಗೆ ನೀರು, ಊಟದ ವ್ಯವಸ್ಥೆ ಮಾಡುತ್ತಾರೆ ಎಂದು ಗ್ರಾಮದ ಅನೀಲ ಸುರಗಿಹಳ್ಳಿ 'ಪ್ರಜಾವಾಣಿ' ಗೆ ಪ್ರತಿಕ್ರಿಯಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>