<p><strong>ಸೋಲಾಪುರ(ವಿಜಯಪುರ):</strong> ಸೀನಾ ನದಿಯಲ್ಲಿಪ್ರವಾಹ ಪರಿಸ್ಥಿತಿ ತಲೆದೋರಿರುವುದರಿಂದ ದಕ್ಷಿಣ ಸೋಲಾಪುರ ತಾಲ್ಲೂಕಿನ ತೆಲಗಾವ ಹತ್ತಿರದ ಸೇತುವೆ ಮೇಲೆ ನೀರು ಹರಿಯುತ್ತಿದೆ. ಈ ರಸ್ತೆ ಮೂಲಕ ಚಲಿಸುವ ವಾಹನಗಳ ಸಂಚಾರ ಸ್ಥಗಿತವಾಗಿದೆ.</p>.<p>ಮೂರು ದಿನಗಳಿಂದ ಉಜಿನಿ ಜಲಾಶಯದ ಹಾಗೂ ಅಹಮ್ಮದ್ ನಗರ ಜಿಲ್ಲೆಯ ಸೀನಾ ನದಿಯ ಉಗಮ ಭಾಗದಲ್ಲಿ ಹೆಚ್ಚು ಮಳೆ ಆಗುತ್ತಿರುವುದರಿಂದ ನದಿ ತುಂಬಿ ಹರಿಯುತ್ತಿದೆ.</p>.<p>ಕಂದಲ್ಗಾವ್, ತೆಲಗಾವ, ಔರಾದ, ಸಂಜವಾಡ, ನಂದೂರ್, ಸಿಂಧಖೇಡ, ರಾಜೂರ ಈ ಮಾರ್ಗವಾಗಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.</p>.<p>ಈ ಭಾಗದ ರೈತರ ಹೊಲಗಳು ಜಲಾವೃತವಾಗಿವೆ. ಬೆಳೆಗಳು ನೀರಿನಲ್ಲಿ ಮುಳುಗಿದ್ದು ರೈತರು ನಷ್ಠಕ್ಕೆ ಒಳಗಾಗಿದ್ದಾರೆ.</p>.<p>ಹೆಚ್ಚುವರಿ ಜಿಲ್ಲಾಧಿಕಾರಿ ಮನಿಷಾ ಆವ್ಹಾಳೆ, ತಹಶೀಲ್ದಾರ್ ಉಜ್ವಲಾ ಸೋರಟೆ, ಮಂದೃಪ್ ಪೊಲೀಸ್ ಠಾಣೆಯ ಸಿಪಿಐ ಡಾ. ನಿತಿನ ಥೇಟೆ ಸ್ಥಳಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು.</p>.<p>ಸೀನಾ ನದಿ ಭಾಗದಲ್ಲಿರುವ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಕ್ಕೆ ಹೋಗಲು ಹಾಗೂ ಮಹಿಳೆಯರು, ಮಕ್ಕಳು ನೀರಲ್ಲಿ ಇಳಿಯದಂತೆ ಅವರು ಮನವಿ ಮಾಡಿದರು.</p>.<p>ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಈ ಭಾಗದ ಜನರ ಜೊತೆ ಸತತ ಸಂಪರ್ಕದಲ್ಲಿರಲು ಸೂಚನೆ ನೀಡಿದರು.</p>.<p>ಕಂದಾಯ ನಿರೀಕ್ಷಕ ಸಂತೋಷ ಫುಲಾರಿ, ಶ್ರೀಸ್ವಾಮಿ, ಪೊಲೀಸ್ ಪಾಟೀಲ್ ಅಶೋಕ್ ಪೂಜಾರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೋಲಾಪುರ(ವಿಜಯಪುರ):</strong> ಸೀನಾ ನದಿಯಲ್ಲಿಪ್ರವಾಹ ಪರಿಸ್ಥಿತಿ ತಲೆದೋರಿರುವುದರಿಂದ ದಕ್ಷಿಣ ಸೋಲಾಪುರ ತಾಲ್ಲೂಕಿನ ತೆಲಗಾವ ಹತ್ತಿರದ ಸೇತುವೆ ಮೇಲೆ ನೀರು ಹರಿಯುತ್ತಿದೆ. ಈ ರಸ್ತೆ ಮೂಲಕ ಚಲಿಸುವ ವಾಹನಗಳ ಸಂಚಾರ ಸ್ಥಗಿತವಾಗಿದೆ.</p>.<p>ಮೂರು ದಿನಗಳಿಂದ ಉಜಿನಿ ಜಲಾಶಯದ ಹಾಗೂ ಅಹಮ್ಮದ್ ನಗರ ಜಿಲ್ಲೆಯ ಸೀನಾ ನದಿಯ ಉಗಮ ಭಾಗದಲ್ಲಿ ಹೆಚ್ಚು ಮಳೆ ಆಗುತ್ತಿರುವುದರಿಂದ ನದಿ ತುಂಬಿ ಹರಿಯುತ್ತಿದೆ.</p>.<p>ಕಂದಲ್ಗಾವ್, ತೆಲಗಾವ, ಔರಾದ, ಸಂಜವಾಡ, ನಂದೂರ್, ಸಿಂಧಖೇಡ, ರಾಜೂರ ಈ ಮಾರ್ಗವಾಗಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.</p>.<p>ಈ ಭಾಗದ ರೈತರ ಹೊಲಗಳು ಜಲಾವೃತವಾಗಿವೆ. ಬೆಳೆಗಳು ನೀರಿನಲ್ಲಿ ಮುಳುಗಿದ್ದು ರೈತರು ನಷ್ಠಕ್ಕೆ ಒಳಗಾಗಿದ್ದಾರೆ.</p>.<p>ಹೆಚ್ಚುವರಿ ಜಿಲ್ಲಾಧಿಕಾರಿ ಮನಿಷಾ ಆವ್ಹಾಳೆ, ತಹಶೀಲ್ದಾರ್ ಉಜ್ವಲಾ ಸೋರಟೆ, ಮಂದೃಪ್ ಪೊಲೀಸ್ ಠಾಣೆಯ ಸಿಪಿಐ ಡಾ. ನಿತಿನ ಥೇಟೆ ಸ್ಥಳಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು.</p>.<p>ಸೀನಾ ನದಿ ಭಾಗದಲ್ಲಿರುವ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಕ್ಕೆ ಹೋಗಲು ಹಾಗೂ ಮಹಿಳೆಯರು, ಮಕ್ಕಳು ನೀರಲ್ಲಿ ಇಳಿಯದಂತೆ ಅವರು ಮನವಿ ಮಾಡಿದರು.</p>.<p>ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಈ ಭಾಗದ ಜನರ ಜೊತೆ ಸತತ ಸಂಪರ್ಕದಲ್ಲಿರಲು ಸೂಚನೆ ನೀಡಿದರು.</p>.<p>ಕಂದಾಯ ನಿರೀಕ್ಷಕ ಸಂತೋಷ ಫುಲಾರಿ, ಶ್ರೀಸ್ವಾಮಿ, ಪೊಲೀಸ್ ಪಾಟೀಲ್ ಅಶೋಕ್ ಪೂಜಾರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>