<p><strong>ವಿಜಯಪುರ</strong>: ‘ವಿಶೇಷವಾಗಿ ರೈತರ ಭೂ-ಸ್ವಾಧೀನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಹಾಗೂ ವಿವಿಧ ಪ್ರಕರಣಗಳ ರಾಜಿ– ಸಂಧಾನಕ್ಕೆ ಸಂಬಂಧಿಸಿದಂತೆ ವಿಶೇಷ ಲೋಕ ಅದಾಲತ್ನ್ನು ಜನವರಿ 24 ರಂದು ಆಯೋಜಿಸಲಾಗಿದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎ. ಹರೀಶ ತಿಳಿಸಿದರು.</p>.<p>ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಿ-ಸಂಧಾನ ಮಾಡಬಹುದಾದ ಭೂ-ಸ್ವಾಧೀನ ವಿಷಯಕ್ಕೆ ಸಂಬಂಧಿಸಿದ ಎಲ್ಎಸಿ, ಇಪಿ ಎಲ್ಎಸಿ ಪ್ರಕರಣಗಳನ್ನು ಈ ವಿಶೇಷ ಲೋಕ್ ಅದಾಲತ್ ಮೂಲಕ ಬಗೆ ಹರಿಸಿಕೊಳ್ಳಬಹುದಾಗಿದೆ’ ಎಂದರು.</p>.<p>2024 ರ ಡಿಸೆಂಬರ್ 1ಕ್ಕೆ ಜಿಲ್ಲೆಯ ವಿವಿಧ ಸಿವಿಲ್ ನ್ಯಾಯಾಲಯಗಳಲ್ಲಿ 9,820 ಎಲ್ಎಸಿ, ಹಾಗೂ 51 ಎಲ್ಎಸಿ ಅಪೀಲ್ ಪ್ರಕರಣಗಳಿದ್ದು, ಈ ಪೈಕಿ 1,666 ಎಲ್ಎಸಿ - ಇಪಿ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ, ಅವುಗಳನ್ನು ರಾಜಿಗಾಗಿ ಸಂಬಂಧಪಟ್ಟ ವಕೀಲರ ಹಾಗೂ ಕಕ್ಷಿದಾರರ ಜೊತೆ ಮಾತುಕತೆ ನಡೆಸಿ ರಾಜಿಗಾಗಿ ಗುರುತಿಸುವ ಪ್ರಯತ್ನ ನಡೆದಿದೆ ಎಂದು ವಿವರಿಸಿದರು.</p>.<p><strong>ಮಧ್ಯಸ್ಥಿಕೆ ಅಭಿಯಾನ 2.0: ಜನವರಿ 2 ರಂದು ಆರಂಭ</strong></p>.<p>ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಮಧ್ಯಸ್ಥಿಕೆ ಅಭಿಯಾನ 2.0 ಅಬಿಯಾನ ಜನವರಿ 2 ರಿಂದ ಆರಂಭಗೊಳ್ಳಲಿದ್ದು, ರಾಜಿಯಾಗಬಹುದಾದ ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರಗಳಿಗೆ ಕಳುಹಿಸಿ, ಅಲ್ಲಿ ವಿಶೇಷ ತರಬೇತಿ ಹೊಂದಿದ ಮಧ್ಯಸ್ಥಿಕೆಗಾರರಿಂದ ರಾಜಿ-ಸಂಧಾನ ಮಾಡಿಸುವ ವ್ಯವಸ್ಥೆ ಇದಾಗಿದೆ ಎಂದು ನ್ಯಾಯಾಧೀಶರಾದ ಹರೀಶ ವಿವರಿಸಿದರು.</p>.<p>ಮೊದಲನೇಯ ಬಾರಿ ನಡೆದ ಮಧ್ಯಸ್ಥಿಕೆ ಅಭಿಯಾನದಲ್ಲಿ ರಾಜಿ ಆಗಬಹುದಾದ ಪ್ರಕರಣಗಳಾದ 49,250 ರ ಪೈಕಿ 3228 ಪ್ರಕರಣಗಳನ್ನು ರಾಜಿಗಾಗಿ ಗುರುತಿಸಲಾಗಿತ್ತು, ಅದರಲ್ಲಿ 748 ಪ್ರಕರಣಗಳು ಮಧ್ಯಸ್ಥಿಕೆ ನಡೆದಿದ್ದು, 115 ಪ್ರಕರಣಗಳು ರಾಜಿ-ಸಂಧಾನದ ಮೂಲಕ ಇತ್ಯರ್ಥಗೊಂಡಿವೆ ಎಂದರು.</p>.<p>2025 ರ ಡಿಸೆಂಬರ್ 1ಕ್ಕೆ ಸಂಬಂಧಿಸಿದಂತೆ 45878 ಸಿವಿಲ್ ಹಾಗೂ 37373 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದು ವಿವರಿಸಿದರು.</p>.<p>ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಹಾಗರಗಿ, ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಎಸ್.ಎಸ್. ಚೂರಿ ಇದ್ದರು.</p>.<p><strong>ರಾಜಿ ಸಂಧಾನ:</strong> ವಿಜಯಪುರ ಜಿಲ್ಲೆ 2ನೇ ಸ್ಥಾನ ಜನತಾ ನ್ಯಾಯಾಲಯದಲ್ಲಿ 2024ರ ಡಿಸೆಂಬರ್ 1 ರವರೆಗೆ ಬಾಕಿ ಇರುವ 83,251 ಪ್ರಕರಣಗಳಲ್ಲಿ 21,263 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿ ₹66,95,70,565 ಪರಿಹಾರ ಕೊಡಿಸಲಾಗಿದ್ದು 2,89,479 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ₹18,30,25,426 ಪರಿಹಾರ ಕೊಡಿಸಲಾಗಿದೆ ಇದರಿಂದ ರಾಜಿ ಸಂಧಾನ ಮಾಡುವಲ್ಲಿ ವಿಜಯಪುರ ಜಿಲ್ಲೆ ಸತತ 3 ನೇ ಬಾರಿಗೆ 2ನೇ ಸ್ಥಾನ ಪಡೆದುಕೊಂಡಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ‘ವಿಶೇಷವಾಗಿ ರೈತರ ಭೂ-ಸ್ವಾಧೀನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಹಾಗೂ ವಿವಿಧ ಪ್ರಕರಣಗಳ ರಾಜಿ– ಸಂಧಾನಕ್ಕೆ ಸಂಬಂಧಿಸಿದಂತೆ ವಿಶೇಷ ಲೋಕ ಅದಾಲತ್ನ್ನು ಜನವರಿ 24 ರಂದು ಆಯೋಜಿಸಲಾಗಿದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎ. ಹರೀಶ ತಿಳಿಸಿದರು.</p>.<p>ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಿ-ಸಂಧಾನ ಮಾಡಬಹುದಾದ ಭೂ-ಸ್ವಾಧೀನ ವಿಷಯಕ್ಕೆ ಸಂಬಂಧಿಸಿದ ಎಲ್ಎಸಿ, ಇಪಿ ಎಲ್ಎಸಿ ಪ್ರಕರಣಗಳನ್ನು ಈ ವಿಶೇಷ ಲೋಕ್ ಅದಾಲತ್ ಮೂಲಕ ಬಗೆ ಹರಿಸಿಕೊಳ್ಳಬಹುದಾಗಿದೆ’ ಎಂದರು.</p>.<p>2024 ರ ಡಿಸೆಂಬರ್ 1ಕ್ಕೆ ಜಿಲ್ಲೆಯ ವಿವಿಧ ಸಿವಿಲ್ ನ್ಯಾಯಾಲಯಗಳಲ್ಲಿ 9,820 ಎಲ್ಎಸಿ, ಹಾಗೂ 51 ಎಲ್ಎಸಿ ಅಪೀಲ್ ಪ್ರಕರಣಗಳಿದ್ದು, ಈ ಪೈಕಿ 1,666 ಎಲ್ಎಸಿ - ಇಪಿ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ, ಅವುಗಳನ್ನು ರಾಜಿಗಾಗಿ ಸಂಬಂಧಪಟ್ಟ ವಕೀಲರ ಹಾಗೂ ಕಕ್ಷಿದಾರರ ಜೊತೆ ಮಾತುಕತೆ ನಡೆಸಿ ರಾಜಿಗಾಗಿ ಗುರುತಿಸುವ ಪ್ರಯತ್ನ ನಡೆದಿದೆ ಎಂದು ವಿವರಿಸಿದರು.</p>.<p><strong>ಮಧ್ಯಸ್ಥಿಕೆ ಅಭಿಯಾನ 2.0: ಜನವರಿ 2 ರಂದು ಆರಂಭ</strong></p>.<p>ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಮಧ್ಯಸ್ಥಿಕೆ ಅಭಿಯಾನ 2.0 ಅಬಿಯಾನ ಜನವರಿ 2 ರಿಂದ ಆರಂಭಗೊಳ್ಳಲಿದ್ದು, ರಾಜಿಯಾಗಬಹುದಾದ ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರಗಳಿಗೆ ಕಳುಹಿಸಿ, ಅಲ್ಲಿ ವಿಶೇಷ ತರಬೇತಿ ಹೊಂದಿದ ಮಧ್ಯಸ್ಥಿಕೆಗಾರರಿಂದ ರಾಜಿ-ಸಂಧಾನ ಮಾಡಿಸುವ ವ್ಯವಸ್ಥೆ ಇದಾಗಿದೆ ಎಂದು ನ್ಯಾಯಾಧೀಶರಾದ ಹರೀಶ ವಿವರಿಸಿದರು.</p>.<p>ಮೊದಲನೇಯ ಬಾರಿ ನಡೆದ ಮಧ್ಯಸ್ಥಿಕೆ ಅಭಿಯಾನದಲ್ಲಿ ರಾಜಿ ಆಗಬಹುದಾದ ಪ್ರಕರಣಗಳಾದ 49,250 ರ ಪೈಕಿ 3228 ಪ್ರಕರಣಗಳನ್ನು ರಾಜಿಗಾಗಿ ಗುರುತಿಸಲಾಗಿತ್ತು, ಅದರಲ್ಲಿ 748 ಪ್ರಕರಣಗಳು ಮಧ್ಯಸ್ಥಿಕೆ ನಡೆದಿದ್ದು, 115 ಪ್ರಕರಣಗಳು ರಾಜಿ-ಸಂಧಾನದ ಮೂಲಕ ಇತ್ಯರ್ಥಗೊಂಡಿವೆ ಎಂದರು.</p>.<p>2025 ರ ಡಿಸೆಂಬರ್ 1ಕ್ಕೆ ಸಂಬಂಧಿಸಿದಂತೆ 45878 ಸಿವಿಲ್ ಹಾಗೂ 37373 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದು ವಿವರಿಸಿದರು.</p>.<p>ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಹಾಗರಗಿ, ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಎಸ್.ಎಸ್. ಚೂರಿ ಇದ್ದರು.</p>.<p><strong>ರಾಜಿ ಸಂಧಾನ:</strong> ವಿಜಯಪುರ ಜಿಲ್ಲೆ 2ನೇ ಸ್ಥಾನ ಜನತಾ ನ್ಯಾಯಾಲಯದಲ್ಲಿ 2024ರ ಡಿಸೆಂಬರ್ 1 ರವರೆಗೆ ಬಾಕಿ ಇರುವ 83,251 ಪ್ರಕರಣಗಳಲ್ಲಿ 21,263 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿ ₹66,95,70,565 ಪರಿಹಾರ ಕೊಡಿಸಲಾಗಿದ್ದು 2,89,479 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ₹18,30,25,426 ಪರಿಹಾರ ಕೊಡಿಸಲಾಗಿದೆ ಇದರಿಂದ ರಾಜಿ ಸಂಧಾನ ಮಾಡುವಲ್ಲಿ ವಿಜಯಪುರ ಜಿಲ್ಲೆ ಸತತ 3 ನೇ ಬಾರಿಗೆ 2ನೇ ಸ್ಥಾನ ಪಡೆದುಕೊಂಡಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>