<p><strong>ವಿಜಯಪುರ</strong>: ಪಂಡಿತ್ ದೀನ ದಯಾಳ ಉಪಾಧ್ಯಯರುಭಾರತದ ರಾಜಕಾರಣದಲ್ಲಿ ಕಂಡು ಬರುವ ಅಪರೂಪದ ರಾಜಕಾರಣಿ. ತಮಗಾಗಿ ಬಾಳದೇ ತಮ್ಮ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟಿದ್ದರು ಎಂದು ಬಿಜೆಪಿ ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಹೇಳಿದರು.</p>.<p>ನಗರದ ರಾಜ ರಾಜೇಶ್ವರಿ ಕಲ್ಯಾಣಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಪಂಡಿತ್ ದೀನ ದಯಾಳ ಉಪಾಧ್ಯಾಯರ ಪುಣ್ಯ ತಿಥಿ ಅಂಗವಾಗಿ ಏರ್ಪಡಿಸಿದ್ದ ಸಮರ್ಪಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.</p>.<p>ಉಪಾಧ್ಯಾಯ ಅವರು ಸರಳ ಜೀವನ, ಉದಾತ್ತ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ಏಕಾತ್ಮ ಮಾನವತಾವಾದ ತತ್ವದ ಪ್ರತಿಪಾದಕರಾಗಿ ರಾಷ್ಟ್ರಕಾರ್ಯ ವ್ಯಕ್ತಿಗತ ಸ್ವಾರ್ಥಕ್ಕಿಂತಲೂ ದೊಡ್ಡದು, ಮನುಷ್ಯ ತನಗಾಗಿ ಬಾಳದೇ ರಾಷ್ಟ್ರಕ್ಕಾಗಿ ಬಾಳಬೇಕು ಎಂದು ಭಾರತೀಯರ ಕರ್ತವ್ಯವನ್ನು ಜಾಗೃತಗೊಳಿಸಿದ ಚಿಂತಕರಾಗಿದ್ದಾರೆ ಎಂದರು.</p>.<p>ಪಂಡಿತ್ ದೀನ ದಯಾಳ ಉಪಾಧ್ಯಾಯ ಅವರು ಭಾರತದ ರಾಜಕಾರಣದಲ್ಲಿ ಕಂಡು ಬಂದ ಅಪರೂಪದ ಆದರ್ಶ ವ್ಯಕ್ತಿ. ಇವರು ಜನಸಂಘದ ಅಪ್ರತಿಮ ವಾಗ್ಮಿ, ಸಂಘಟನಾ ಚತುರರಾಗಿದ್ದರು ಎಂದು ಹೇಳಿದರು.</p>.<p>ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ನಗರ ಮಂಡಲ ಅಧ್ಯಕ್ಷ ಮಳುಗೌಡ ಪಾಟೀಲ, ಗೋಪಾಲ ಘಟಕಾಂಬಳೆ, ಶಿಲ್ಪಾ ಕುದರಗೊಂಡ, ಬಸವರಾಜ ಬಿರಾದಾರ, ಪಾಪುಸಿಂಗ್ ರಜಪೂತ, ಭೀಮಾಶಂಕರ ಹದನೂರ, ವಿಜಯ ಜೋಶಿ, ಛಾಯಾ ಮಸಿ, ಭರತ ಕೋಳಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಪಂಡಿತ್ ದೀನ ದಯಾಳ ಉಪಾಧ್ಯಯರುಭಾರತದ ರಾಜಕಾರಣದಲ್ಲಿ ಕಂಡು ಬರುವ ಅಪರೂಪದ ರಾಜಕಾರಣಿ. ತಮಗಾಗಿ ಬಾಳದೇ ತಮ್ಮ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟಿದ್ದರು ಎಂದು ಬಿಜೆಪಿ ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಹೇಳಿದರು.</p>.<p>ನಗರದ ರಾಜ ರಾಜೇಶ್ವರಿ ಕಲ್ಯಾಣಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಪಂಡಿತ್ ದೀನ ದಯಾಳ ಉಪಾಧ್ಯಾಯರ ಪುಣ್ಯ ತಿಥಿ ಅಂಗವಾಗಿ ಏರ್ಪಡಿಸಿದ್ದ ಸಮರ್ಪಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.</p>.<p>ಉಪಾಧ್ಯಾಯ ಅವರು ಸರಳ ಜೀವನ, ಉದಾತ್ತ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ಏಕಾತ್ಮ ಮಾನವತಾವಾದ ತತ್ವದ ಪ್ರತಿಪಾದಕರಾಗಿ ರಾಷ್ಟ್ರಕಾರ್ಯ ವ್ಯಕ್ತಿಗತ ಸ್ವಾರ್ಥಕ್ಕಿಂತಲೂ ದೊಡ್ಡದು, ಮನುಷ್ಯ ತನಗಾಗಿ ಬಾಳದೇ ರಾಷ್ಟ್ರಕ್ಕಾಗಿ ಬಾಳಬೇಕು ಎಂದು ಭಾರತೀಯರ ಕರ್ತವ್ಯವನ್ನು ಜಾಗೃತಗೊಳಿಸಿದ ಚಿಂತಕರಾಗಿದ್ದಾರೆ ಎಂದರು.</p>.<p>ಪಂಡಿತ್ ದೀನ ದಯಾಳ ಉಪಾಧ್ಯಾಯ ಅವರು ಭಾರತದ ರಾಜಕಾರಣದಲ್ಲಿ ಕಂಡು ಬಂದ ಅಪರೂಪದ ಆದರ್ಶ ವ್ಯಕ್ತಿ. ಇವರು ಜನಸಂಘದ ಅಪ್ರತಿಮ ವಾಗ್ಮಿ, ಸಂಘಟನಾ ಚತುರರಾಗಿದ್ದರು ಎಂದು ಹೇಳಿದರು.</p>.<p>ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ನಗರ ಮಂಡಲ ಅಧ್ಯಕ್ಷ ಮಳುಗೌಡ ಪಾಟೀಲ, ಗೋಪಾಲ ಘಟಕಾಂಬಳೆ, ಶಿಲ್ಪಾ ಕುದರಗೊಂಡ, ಬಸವರಾಜ ಬಿರಾದಾರ, ಪಾಪುಸಿಂಗ್ ರಜಪೂತ, ಭೀಮಾಶಂಕರ ಹದನೂರ, ವಿಜಯ ಜೋಶಿ, ಛಾಯಾ ಮಸಿ, ಭರತ ಕೋಳಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>