<p><strong>ಸಿಂದಗಿ:</strong> ಪ್ರಶಸ್ತಿಗಳು ಬಯಸದೇ, ಕೇಳದೆ ತಾನಾಗಿಯೇ ಬರಬೇಕು. ಆದರೆ ಪ್ರಶಸ್ತಿಗಾಗಿ ಅರ್ಜಿ ಹಾಕಿ ವಶೀಲಿಬಾಜಿ, ರಾಜಕೀಯ ಪ್ರಭಾವಬೀರಿ ಪ್ರಶಸ್ತಿ ಪಡೆದುಕೊಂಡರೆ ಅದಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲ. ಈ ಹಿಂದೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸುತ್ತಿತ್ತು. ಆದರೆ ಈ ಬಾರಿ ಅರ್ಜಿಗೆ ಅವಕಾಶ ನೀಡದೇ ಸರ್ಕಾರವೇ ಗುರುತಿಸಿ ಪ್ರಶಸ್ತಿ ನೀಡಿರುವುದು ಸ್ವಾಗತಾರ್ಹ’ ಎಂದು ನಿವೃತ್ತ ಪ್ರಾಧ್ಯಾಪಕ ಅರವಿಂದ ಮನಗೂಳಿ ಹೇಳಿದರು.</p>.<p>ಪಟ್ಟಣದ ಎಲೈಟ್ ಪಿಯು ಕಾಲೇಜು ಆವರಣದಲ್ಲಿ ಬೋರಗಿ ಗ್ರಾಮದ ನಬಿರೋಷನ್ ಪ್ರಕಾಶನ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.</p>.<p>ಹ.ಮ.ಪೂಜಾರ ಬದುಕು-ಬರಹ ಕುರಿತು ಬರಹಗಾರ ಅಶೋಕ ಬಿರಾದಾರ ಉಪನ್ಯಾಸ ನೀಡಿ, ‘ಹ.ಮ.ಪೂಜಾರ ಅವರು ಸಾಹಿತ್ಯ ರಚನೆಯ ಜೊತೆಗೆ ಮಕ್ಕಳ ಬಳಗ ಸ್ಥಾಪಿಸಿ ಮಕ್ಕಳ ವಿಕಸನಕ್ಕಾಗಿ ಸಂಘಟನಾತ್ಮಕ, ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಲೇ ಬಂದಿದ್ದಾರೆ’ ಎಂದು ಹೇಳಿದರು.</p>.<p>ಪ್ರಕಾಶನ ಸಂಚಾಲಕ ಮೌಲಾಲಿ ಆಲಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು.</p>.<p>ಕರ್ನಾಟಕ ರಣದೀರ ಪಡೆ ಉತ್ತರಕರ್ನಾಟಕ ವಲಯ ಅಧ್ಯಕ್ಷ ಸಂತೋಷ ಮಣಿಗಿರಿ, ಎಲೈಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹಿಬೂಬ ಅಸಂತಾಪೂರ, ಪ್ರಾಚಾರ್ಯ ಐ.ಎ.ಜುಮನಾಳ ಅತಿಥಿಗಳಾಗಿ ಪಾಲ್ಗೊಂಡಿದ್ದರು.</p>.<p>ಸಾಧಕರಾದ ಇಮಾಂಬಿ ದೊಡಮನಿ, ಸೀತಮ್ಮ ಕಟ್ಟಿಮನಿ, ಸಂಗಮೇಶ ಛಾಯಾಗೋಳ, ಮಲಕಮ್ಮ ಮದಬಾವಿ, ಭಾಗೇಶ ಗೋಲಗೇರಿ, ಎಂ.ಎನ್.ಪೂಜಾರಿ, ಪ್ರಹ್ಲಾದ ಜಿ.ಕೆ ಅವರಿಗೆ ಸಂಸ್ಥೆಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<div><blockquote>ಮಕ್ಕಳ ಸಾಹಿತ್ಯ ಸೇವೆ ಸಾರ್ಥಕ ಭಾವ ಮೂಡಿಸಿದೆ. ಸಿಂದಗಿ ಪಟ್ಟಣದ ಜನತೆ ಸಂಭ್ರಮಿಸುತ್ತಿದ್ದಾರೆ. ನಬಿರೋಷನ್ ಪ್ರಕಾಶನ ನೀಡಿದ ಹೃದಯಸ್ಪರ್ಶಿ ಗೌರವ ಧನ್ಯತಾಭಾವ ಹೆಚ್ಚಿಸಿದೆ </blockquote><span class="attribution">ಹ.ಮ.ಪೂಜಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು</span></div>.<div><blockquote>ಹ.ಮ.ಪೂಜಾರ ಅವರು ಮಕ್ಕಳ ಸಾಹಿತ್ಯದ ಗಟ್ಟಿಧ್ವನಿ. ಇವರ ಸಾಹಿತ್ಯ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಪಠ್ಯಪುಸ್ತಕದ ವಿಷಯಗಳಾಗಿವೆ </blockquote><span class="attribution">ಎನ್.ಎಂ.ಬಿರಾದಾರ ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿ ಮುಖ್ಯಸ್ಥ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ:</strong> ಪ್ರಶಸ್ತಿಗಳು ಬಯಸದೇ, ಕೇಳದೆ ತಾನಾಗಿಯೇ ಬರಬೇಕು. ಆದರೆ ಪ್ರಶಸ್ತಿಗಾಗಿ ಅರ್ಜಿ ಹಾಕಿ ವಶೀಲಿಬಾಜಿ, ರಾಜಕೀಯ ಪ್ರಭಾವಬೀರಿ ಪ್ರಶಸ್ತಿ ಪಡೆದುಕೊಂಡರೆ ಅದಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲ. ಈ ಹಿಂದೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸುತ್ತಿತ್ತು. ಆದರೆ ಈ ಬಾರಿ ಅರ್ಜಿಗೆ ಅವಕಾಶ ನೀಡದೇ ಸರ್ಕಾರವೇ ಗುರುತಿಸಿ ಪ್ರಶಸ್ತಿ ನೀಡಿರುವುದು ಸ್ವಾಗತಾರ್ಹ’ ಎಂದು ನಿವೃತ್ತ ಪ್ರಾಧ್ಯಾಪಕ ಅರವಿಂದ ಮನಗೂಳಿ ಹೇಳಿದರು.</p>.<p>ಪಟ್ಟಣದ ಎಲೈಟ್ ಪಿಯು ಕಾಲೇಜು ಆವರಣದಲ್ಲಿ ಬೋರಗಿ ಗ್ರಾಮದ ನಬಿರೋಷನ್ ಪ್ರಕಾಶನ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.</p>.<p>ಹ.ಮ.ಪೂಜಾರ ಬದುಕು-ಬರಹ ಕುರಿತು ಬರಹಗಾರ ಅಶೋಕ ಬಿರಾದಾರ ಉಪನ್ಯಾಸ ನೀಡಿ, ‘ಹ.ಮ.ಪೂಜಾರ ಅವರು ಸಾಹಿತ್ಯ ರಚನೆಯ ಜೊತೆಗೆ ಮಕ್ಕಳ ಬಳಗ ಸ್ಥಾಪಿಸಿ ಮಕ್ಕಳ ವಿಕಸನಕ್ಕಾಗಿ ಸಂಘಟನಾತ್ಮಕ, ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಲೇ ಬಂದಿದ್ದಾರೆ’ ಎಂದು ಹೇಳಿದರು.</p>.<p>ಪ್ರಕಾಶನ ಸಂಚಾಲಕ ಮೌಲಾಲಿ ಆಲಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು.</p>.<p>ಕರ್ನಾಟಕ ರಣದೀರ ಪಡೆ ಉತ್ತರಕರ್ನಾಟಕ ವಲಯ ಅಧ್ಯಕ್ಷ ಸಂತೋಷ ಮಣಿಗಿರಿ, ಎಲೈಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹಿಬೂಬ ಅಸಂತಾಪೂರ, ಪ್ರಾಚಾರ್ಯ ಐ.ಎ.ಜುಮನಾಳ ಅತಿಥಿಗಳಾಗಿ ಪಾಲ್ಗೊಂಡಿದ್ದರು.</p>.<p>ಸಾಧಕರಾದ ಇಮಾಂಬಿ ದೊಡಮನಿ, ಸೀತಮ್ಮ ಕಟ್ಟಿಮನಿ, ಸಂಗಮೇಶ ಛಾಯಾಗೋಳ, ಮಲಕಮ್ಮ ಮದಬಾವಿ, ಭಾಗೇಶ ಗೋಲಗೇರಿ, ಎಂ.ಎನ್.ಪೂಜಾರಿ, ಪ್ರಹ್ಲಾದ ಜಿ.ಕೆ ಅವರಿಗೆ ಸಂಸ್ಥೆಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<div><blockquote>ಮಕ್ಕಳ ಸಾಹಿತ್ಯ ಸೇವೆ ಸಾರ್ಥಕ ಭಾವ ಮೂಡಿಸಿದೆ. ಸಿಂದಗಿ ಪಟ್ಟಣದ ಜನತೆ ಸಂಭ್ರಮಿಸುತ್ತಿದ್ದಾರೆ. ನಬಿರೋಷನ್ ಪ್ರಕಾಶನ ನೀಡಿದ ಹೃದಯಸ್ಪರ್ಶಿ ಗೌರವ ಧನ್ಯತಾಭಾವ ಹೆಚ್ಚಿಸಿದೆ </blockquote><span class="attribution">ಹ.ಮ.ಪೂಜಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು</span></div>.<div><blockquote>ಹ.ಮ.ಪೂಜಾರ ಅವರು ಮಕ್ಕಳ ಸಾಹಿತ್ಯದ ಗಟ್ಟಿಧ್ವನಿ. ಇವರ ಸಾಹಿತ್ಯ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಪಠ್ಯಪುಸ್ತಕದ ವಿಷಯಗಳಾಗಿವೆ </blockquote><span class="attribution">ಎನ್.ಎಂ.ಬಿರಾದಾರ ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿ ಮುಖ್ಯಸ್ಥ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>