ವಿದ್ಯಾರ್ಥಿ ಶೈಕ್ಷಣಿಕ ದತ್ತು ಪಡೆದ ಜೆಸಿಐ

ಗೋಕಾಕ: ನಾಗನೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯು (ಕಲಾ ವಿಭಾಗ) ವಾರ್ಷಿಕ ಪರೀಕ್ಷೆಯಲ್ಲಿ ಶೇ 90ರಷ್ಟು ಅಂಕಗಳನ್ನು ಪಡೆದಿರುವ ಮೂಡಲಗಿ ತಾಲ್ಲೂಕು ನಾಗನೂರಿನ ಧರೆಪ್ಪ ಸುಳನವರ ಅವರನ್ನು ಇಲ್ಲಿನ ಜೆಸಿಐ ಕ್ಲಬ್ ಶೈಕ್ಷಣಿಕ ದತ್ತು ಪಡೆದಿದೆ.
ಬಿಇಒ ಕಚೇರಿಯಲ್ಲಿ ಈ ಘೋಷಣೆ ಮಾಡಲಾಯಿತು. ಬಿಇಒ ಜಿ.ಬಿ. ಬಳಿಗಾರ ಅವರ ಸಲಹೆಯಂತೆ ಸಂಸ್ಥೆಯು ಸಹಾಯಹಸ್ತ ಚಾಚಿದೆ ಎಂದು ತಿಳಿಸಲಾಯಿತು. ವಿದ್ಯಾರ್ಥಿಯ ವ್ಯಾಸಂಗಕ್ಕೆ ತಗಲುವ ಶೈಕ್ಷಣಿಕ ವೆಚ್ಚ ಭರಿಸುವುದಾಗಿ ಪದಾಧಿಕಾರಿಗಳು ವಾಗ್ದಾನ ಮಾಡಿದರು.
ವಲಯ ಸಂಯೋಜಕ ವಿಷ್ಣು ಲಾತೂರ, ‘ವಿದ್ಯಾರ್ಥಿ ಅಪೇಕ್ಷಿಸುವ ಕಾಲೇಜಿಗೆ ಪ್ರವೇಶ ಕೊಡಿಸಲಾಗುವುದು. ಸ್ನಾತಕೋತ್ತರ ಅಧ್ಯಯನದತ್ತ ಒಲವು ಹೊಂದಿದ್ದರೂ ಅದಕ್ಕೂ ನೆರವಾಗುತ್ತೇವೆ’ ಎಂದು ತಿಳಿಸಿದರು.
‘ಸಂಸ್ಥೆಯು ಮುಂದೆಯೂ ಇಂತಹ ಜನಪರ ಕಾರ್ಯಗಳನ್ನು ಬೆಂಬಲಿಸಲಿ’ ಎಂದು ಬಿಇಒ ಬಳಿಗಾರ ಆಶಿಸಿದರು.
ಅಧ್ಯಕ್ಷ ರಜನಿಕಾಂತ ಮಾಳೋದೆ, ರಾಚಪ್ಪ ಅಮ್ಮಣಗಿ, ಶೇಖರ ಉಳ್ಳೇಗಡ್ಡಿ, ಮೀನಾಕ್ಷಿ ಸವದಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.