<p><strong>ಗೋಕಾಕ: </strong>ನಾಗನೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯು (ಕಲಾ ವಿಭಾಗ) ವಾರ್ಷಿಕ ಪರೀಕ್ಷೆಯಲ್ಲಿ ಶೇ 90ರಷ್ಟು ಅಂಕಗಳನ್ನು ಪಡೆದಿರುವ ಮೂಡಲಗಿ ತಾಲ್ಲೂಕು ನಾಗನೂರಿನ ಧರೆಪ್ಪ ಸುಳನವರ ಅವರನ್ನು ಇಲ್ಲಿನ ಜೆಸಿಐ ಕ್ಲಬ್ ಶೈಕ್ಷಣಿಕ ದತ್ತು ಪಡೆದಿದೆ.</p>.<p>ಬಿಇಒ ಕಚೇರಿಯಲ್ಲಿ ಈ ಘೋಷಣೆ ಮಾಡಲಾಯಿತು. ಬಿಇಒ ಜಿ.ಬಿ. ಬಳಿಗಾರ ಅವರ ಸಲಹೆಯಂತೆ ಸಂಸ್ಥೆಯು ಸಹಾಯಹಸ್ತ ಚಾಚಿದೆ ಎಂದು ತಿಳಿಸಲಾಯಿತು. ವಿದ್ಯಾರ್ಥಿಯ ವ್ಯಾಸಂಗಕ್ಕೆ ತಗಲುವ ಶೈಕ್ಷಣಿಕ ವೆಚ್ಚ ಭರಿಸುವುದಾಗಿ ಪದಾಧಿಕಾರಿಗಳು ವಾಗ್ದಾನ ಮಾಡಿದರು.</p>.<p>ವಲಯ ಸಂಯೋಜಕ ವಿಷ್ಣು ಲಾತೂರ, ‘ವಿದ್ಯಾರ್ಥಿ ಅಪೇಕ್ಷಿಸುವ ಕಾಲೇಜಿಗೆ ಪ್ರವೇಶ ಕೊಡಿಸಲಾಗುವುದು. ಸ್ನಾತಕೋತ್ತರ ಅಧ್ಯಯನದತ್ತ ಒಲವು ಹೊಂದಿದ್ದರೂ ಅದಕ್ಕೂ ನೆರವಾಗುತ್ತೇವೆ’ ಎಂದು ತಿಳಿಸಿದರು.</p>.<p>‘ಸಂಸ್ಥೆಯು ಮುಂದೆಯೂ ಇಂತಹ ಜನಪರ ಕಾರ್ಯಗಳನ್ನು ಬೆಂಬಲಿಸಲಿ’ ಎಂದು ಬಿಇಒ ಬಳಿಗಾರ ಆಶಿಸಿದರು.</p>.<p>ಅಧ್ಯಕ್ಷ ರಜನಿಕಾಂತ ಮಾಳೋದೆ, ರಾಚಪ್ಪ ಅಮ್ಮಣಗಿ, ಶೇಖರ ಉಳ್ಳೇಗಡ್ಡಿ, ಮೀನಾಕ್ಷಿ ಸವದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕಾಕ: </strong>ನಾಗನೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯು (ಕಲಾ ವಿಭಾಗ) ವಾರ್ಷಿಕ ಪರೀಕ್ಷೆಯಲ್ಲಿ ಶೇ 90ರಷ್ಟು ಅಂಕಗಳನ್ನು ಪಡೆದಿರುವ ಮೂಡಲಗಿ ತಾಲ್ಲೂಕು ನಾಗನೂರಿನ ಧರೆಪ್ಪ ಸುಳನವರ ಅವರನ್ನು ಇಲ್ಲಿನ ಜೆಸಿಐ ಕ್ಲಬ್ ಶೈಕ್ಷಣಿಕ ದತ್ತು ಪಡೆದಿದೆ.</p>.<p>ಬಿಇಒ ಕಚೇರಿಯಲ್ಲಿ ಈ ಘೋಷಣೆ ಮಾಡಲಾಯಿತು. ಬಿಇಒ ಜಿ.ಬಿ. ಬಳಿಗಾರ ಅವರ ಸಲಹೆಯಂತೆ ಸಂಸ್ಥೆಯು ಸಹಾಯಹಸ್ತ ಚಾಚಿದೆ ಎಂದು ತಿಳಿಸಲಾಯಿತು. ವಿದ್ಯಾರ್ಥಿಯ ವ್ಯಾಸಂಗಕ್ಕೆ ತಗಲುವ ಶೈಕ್ಷಣಿಕ ವೆಚ್ಚ ಭರಿಸುವುದಾಗಿ ಪದಾಧಿಕಾರಿಗಳು ವಾಗ್ದಾನ ಮಾಡಿದರು.</p>.<p>ವಲಯ ಸಂಯೋಜಕ ವಿಷ್ಣು ಲಾತೂರ, ‘ವಿದ್ಯಾರ್ಥಿ ಅಪೇಕ್ಷಿಸುವ ಕಾಲೇಜಿಗೆ ಪ್ರವೇಶ ಕೊಡಿಸಲಾಗುವುದು. ಸ್ನಾತಕೋತ್ತರ ಅಧ್ಯಯನದತ್ತ ಒಲವು ಹೊಂದಿದ್ದರೂ ಅದಕ್ಕೂ ನೆರವಾಗುತ್ತೇವೆ’ ಎಂದು ತಿಳಿಸಿದರು.</p>.<p>‘ಸಂಸ್ಥೆಯು ಮುಂದೆಯೂ ಇಂತಹ ಜನಪರ ಕಾರ್ಯಗಳನ್ನು ಬೆಂಬಲಿಸಲಿ’ ಎಂದು ಬಿಇಒ ಬಳಿಗಾರ ಆಶಿಸಿದರು.</p>.<p>ಅಧ್ಯಕ್ಷ ರಜನಿಕಾಂತ ಮಾಳೋದೆ, ರಾಚಪ್ಪ ಅಮ್ಮಣಗಿ, ಶೇಖರ ಉಳ್ಳೇಗಡ್ಡಿ, ಮೀನಾಕ್ಷಿ ಸವದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>