ವಿಜಯಪುರದ ಸಂತೋಷ ಶಿರಡೋಣ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಈ ಬಾರಿ 641ನೇ ರ್ಯಾಂಕ್ ಪಡೆದಿದ್ದಾರೆ. ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾಗಿರುವ ಸಂತೋಷ, ಈ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಕನ್ನಡದ ಯುವಕ–ಯುವತಿಯರಿಗೆ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಪೂರ್ವಭಾವಿ, ಮುಖ್ಯಪರೀಕ್ಷೆ ಹಾಗೂ ಸಂದರ್ಶನದ ಬಗ್ಗೆ, ಪರೀಕ್ಷಾ ಸಿದ್ಧತೆ ವೇಳೆ ಮಾಡಿಕೊಳ್ಳಬೇಕಾದ ‘ಪ್ಲ್ಯಾನ್’ ಬಗ್ಗೆ ಮಾತನಾಡಿದ್ದಾರೆ.