<p><strong>ತಿಕೋಟಾ</strong>: ಮುಂಗಾರು ಮಳೆಯ ಕೊರತೆಯ ನಡುವೆಯೂ ತಾಲ್ಲೂಕಿನ ಹಳ್ಳ ಕೊಳ್ಳ, ಕೆರೆಕಟ್ಟೆ ಬಾಂದಾರಗಳು ತುಬಚಿ– ಬಬಲೇಶ್ವರ ಏತ ನೀರಾವರಿ ಯೋಜನೆಯ ಫಲವಾಗಿ ಜಲಪಾತದ ವೈಭವ ಮರುಕಳಿಸಿದೆ.</p>.<p>ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳಕ್ಕೆ ನಿರ್ಮಿಸಿರುವ ಬಾಂದಾರ ದಾರಿ ಹೋಕರ ಕೈಬಿಸಿ ಕರೆಯುತ್ತಿದೆ.</p>.<p>ಬಾಬಾನಗರ ಗ್ರಾಮದಿಂದ ಬರುವ ಈ ಹಳ್ಳವು ತುಂಬಿ ಹರಿಯುತ್ತಿದೆ. ಅಲ್ಲಲ್ಲಿ ನಿರ್ಮಿಸಿರುವ ಬಾಂದಾರಗಳು ಧುಮಿಕ್ಕಿ ಹರಿಯುತ್ತಿವೆ.</p>.<p>ಈ ಬಾರಿ ಹದ ಮಳೆ ಮಾತ್ರ ಆಗಿದ್ದು, ಬಿತ್ತನೆಯ ನಂತರ ಮಳೆಯೇ ಆಗಿಲ್ಲ. ಸದ್ಯ ಬೆಳೆಗೆ ಮಳೆಯ ಅವಶ್ಯಕತೆ ಇದೆ. ತೊಗರಿ, ಉದ್ದು, ಶೇಂಗಾ ಇತರೆ ಬೆಳೆಗೆ ನೀರಿನ ಕೊರತೆ ಎದುರಾಗಿದೆ. </p>.<p>ಮಳೆಯ ಕೊರತೆಯ ಮಧ್ಯೆಯೂ ಹಳ್ಳ ಕೊಳ್ಳ ತುಂಬಿ ಹರಿಯುತ್ತಿರುವುದರಿಂದ ಕೆಲವು ರೈತರ ತೋಟಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಅನೂಕೂಲವಾಗುತ್ತಿದೆ. ಇನ್ನೂ ಕೆಲವು ಎತ್ತರದ ಪ್ರದೇಶ ಗಡಿ ಭಾಗದ ಗ್ರಾಮದ ಕಾಲುವೆಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಅಂತಹ ರೈತರ ತೋಟಗಳಿಗೆ ಈ ಯೋಜನೆಯ ಫಲ ಇನ್ನೂ ದೊರೆತಿಲ್ಲ. ರಾಜ್ಯದ ಕೊನೆಯ ಗ್ರಾಮಕ್ಕೂ ನೀರಾವರಿ ಯೋಜನೆಯ ಅನೂಕೂಲವಾದರೆ ಗಡಿಯುದ್ದಕ್ಕೂ ಇರುವ ಅನ್ನದಾತರ ಖುಷಿ ಇಮ್ಮಡಿಗೊಳ್ಳುತ್ತದೆ.</p>.<p>‘2013 ರಿಂದ 2018ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀರಾವರಿ ಸಚಿವರಾಗಿ ಎಂ.ಬಿ.ಪಾಟೀಲರು ಮಾಡಿದ ಸಾವಿರಾರು ಕೋಟಿಯ ನೀರಾವರಿ ಯೋಜನೆಗಳು ನಮ್ಮ ಮತಕ್ಷೇತ್ರದ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಈ ವರ್ಷ ಮಳೆಯೇ ಇಲ್ಲ. ಆದರೂ ಹಳ್ಳ ಕೊಳ್ಳ ತುಂಬಿ ಹರಿಯುತ್ತಿವೆ ಎಂದರೆ ಸಾಮಾನ್ಯ ಕೆಲಸವಲ್ಲ, ಅವರು ಮಾಡಿದ ನೀರಾವರಿ ಕೆಲಸವು ರೈತರು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಾಗಿದೆ’ ಎಂದು ರೈತ ಗುರು ಮಾಳಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಕೋಟಾ</strong>: ಮುಂಗಾರು ಮಳೆಯ ಕೊರತೆಯ ನಡುವೆಯೂ ತಾಲ್ಲೂಕಿನ ಹಳ್ಳ ಕೊಳ್ಳ, ಕೆರೆಕಟ್ಟೆ ಬಾಂದಾರಗಳು ತುಬಚಿ– ಬಬಲೇಶ್ವರ ಏತ ನೀರಾವರಿ ಯೋಜನೆಯ ಫಲವಾಗಿ ಜಲಪಾತದ ವೈಭವ ಮರುಕಳಿಸಿದೆ.</p>.<p>ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳಕ್ಕೆ ನಿರ್ಮಿಸಿರುವ ಬಾಂದಾರ ದಾರಿ ಹೋಕರ ಕೈಬಿಸಿ ಕರೆಯುತ್ತಿದೆ.</p>.<p>ಬಾಬಾನಗರ ಗ್ರಾಮದಿಂದ ಬರುವ ಈ ಹಳ್ಳವು ತುಂಬಿ ಹರಿಯುತ್ತಿದೆ. ಅಲ್ಲಲ್ಲಿ ನಿರ್ಮಿಸಿರುವ ಬಾಂದಾರಗಳು ಧುಮಿಕ್ಕಿ ಹರಿಯುತ್ತಿವೆ.</p>.<p>ಈ ಬಾರಿ ಹದ ಮಳೆ ಮಾತ್ರ ಆಗಿದ್ದು, ಬಿತ್ತನೆಯ ನಂತರ ಮಳೆಯೇ ಆಗಿಲ್ಲ. ಸದ್ಯ ಬೆಳೆಗೆ ಮಳೆಯ ಅವಶ್ಯಕತೆ ಇದೆ. ತೊಗರಿ, ಉದ್ದು, ಶೇಂಗಾ ಇತರೆ ಬೆಳೆಗೆ ನೀರಿನ ಕೊರತೆ ಎದುರಾಗಿದೆ. </p>.<p>ಮಳೆಯ ಕೊರತೆಯ ಮಧ್ಯೆಯೂ ಹಳ್ಳ ಕೊಳ್ಳ ತುಂಬಿ ಹರಿಯುತ್ತಿರುವುದರಿಂದ ಕೆಲವು ರೈತರ ತೋಟಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಅನೂಕೂಲವಾಗುತ್ತಿದೆ. ಇನ್ನೂ ಕೆಲವು ಎತ್ತರದ ಪ್ರದೇಶ ಗಡಿ ಭಾಗದ ಗ್ರಾಮದ ಕಾಲುವೆಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಅಂತಹ ರೈತರ ತೋಟಗಳಿಗೆ ಈ ಯೋಜನೆಯ ಫಲ ಇನ್ನೂ ದೊರೆತಿಲ್ಲ. ರಾಜ್ಯದ ಕೊನೆಯ ಗ್ರಾಮಕ್ಕೂ ನೀರಾವರಿ ಯೋಜನೆಯ ಅನೂಕೂಲವಾದರೆ ಗಡಿಯುದ್ದಕ್ಕೂ ಇರುವ ಅನ್ನದಾತರ ಖುಷಿ ಇಮ್ಮಡಿಗೊಳ್ಳುತ್ತದೆ.</p>.<p>‘2013 ರಿಂದ 2018ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀರಾವರಿ ಸಚಿವರಾಗಿ ಎಂ.ಬಿ.ಪಾಟೀಲರು ಮಾಡಿದ ಸಾವಿರಾರು ಕೋಟಿಯ ನೀರಾವರಿ ಯೋಜನೆಗಳು ನಮ್ಮ ಮತಕ್ಷೇತ್ರದ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಈ ವರ್ಷ ಮಳೆಯೇ ಇಲ್ಲ. ಆದರೂ ಹಳ್ಳ ಕೊಳ್ಳ ತುಂಬಿ ಹರಿಯುತ್ತಿವೆ ಎಂದರೆ ಸಾಮಾನ್ಯ ಕೆಲಸವಲ್ಲ, ಅವರು ಮಾಡಿದ ನೀರಾವರಿ ಕೆಲಸವು ರೈತರು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಾಗಿದೆ’ ಎಂದು ರೈತ ಗುರು ಮಾಳಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>