ವಿಜಯಪುರ:ಆರ್ಟಿಪಿಸಿಆರ್ ಸೆಂಟರ್ಗೆ ನಿತ್ಯ ನೂರಾರು ಮಂದಿ ಕೋವಿಡ್ ಪರೀಕ್ಷೆಗಾಗಿ ಸಾರ್ಜನಿಕರು ಬರುತ್ತಾರೆ. ಪ್ರತಿಯೊಬ್ಬರೂ ಗಡಿಬಿಡಿ, ಆತಂಕದಲ್ಲಿ ಇರುತ್ತಾರೆ. ಈ ಸಂದರ್ಭದಲ್ಲಿ ಅಂತರ ಕಾಪಾಡಿ, ಮಾಸ್ಕ್ ಧರಿಸಿಕೊಳ್ಳಿ, ಸ್ಯಾನಿಟೈಸ್ ಮಾಡಿಕೊಳ್ಳಿ ಎಂದು ಎಷ್ಟೇ ಮುನ್ನೆಚ್ಚರಿಕೆ ಮಾತು ಏಳಿದರೂ ಯಾರೂ ಕೇಳಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಮನಸ್ಸಿಗೆ ನೋವಾಗುವಂತೆ ತೀರಾ ಕೆಟ್ಟದಾಗಿ ನಮ್ಮನ್ನು ನಿಂದಿಸಿ ಮಾತನಾಡುತ್ತಾರೆ.ಆದರೂ ಬೇಸರಿಸಿಕೊಳ್ಳದೇ ನಮ್ಮಕೆಲಸಮಾಡುತ್ತೇವೆ.