<p><strong>ವಿಜಯಪುರ:</strong> ‘ಸಮಾಜದಿಂದ ಶಿಕ್ಷಣವನ್ನು ಪಡೆಯುವ ನಾವು, ಅದನ್ನು ಸರಿಯಾದ ಮಾರ್ಗದಲ್ಲಿ ಸ್ವೀಕರಿಸಿ, ಬೆಳೆದು ಅದನ್ನು ಮೌಲ್ಯವಾಗಿ ಪರಿಗಣಿಸಿ ಸಮಾಜಕ್ಕೆ ಮರಳಿ ನೀಡುವ ಗುಣ ಬೆಳೆಸಿಕೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಹೇಳಿದರು.</p>.<p>ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದಲ್ಲಿ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ನಾಗರಿಕ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.</p>.<p>‘ಹಿಂಸೆ, ರೋಗ ರುಜಿನಗಳಿಗೆ ಮಾನವನ ಚಟುವಟಿಕೆಗಳೆ ಕಾರಣ. ಅದನ್ನು ಸರಿಪಡಿಸುವ, ಸುಸ್ಥಿತವಾಗಿಸುವ ಕೆಲಸವು ನಮ್ಮಿಂದಲೆ ನಡೆಯಬೇಕಾಗಿದೆ’ ಎಂದರು.</p>.<p>‘ಪೌರತ್ವ ಶಿಬಿರಗಳು ಶಿಕ್ಷಕ ತರಬೇತಿಗೆ ಬೇಕಾದ ಮೌಲ್ಯಗಳನ್ನು ತಿಳಿಸಿಕೊಡಲು ಸಹಕಾರಿ. ಪ್ರಸ್ತುತ ಪೌರತ್ವ ಶಿಬಿರದಲ್ಲಿ ಹಮ್ಮಿಕೊಂಡಿರುವ ಉಪನ್ಯಾಸಗಳು ಮತ್ತು ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ’ ಎಂದು ಹೇಳಿದರು.</p>.<p>‘ಮಹಿಳಾ ಪ್ರಶಿಕ್ಷಣಾರ್ಥಿಗಳು ಆತ್ಮವಿಶ್ವಾಸದಿಂದ ತರಬೇತಿ ಪಡೆದು ಶಾಲೆಗಳಲ್ಲಿ ಕರ್ತವ್ಯ ನಿಷ್ಠೆಯಿಂದ ಕಾರ್ಯಮಾಡಿ’ ಎಂದು ಸಲಹೆ ನೀಡಿದರು.</p>.<p>ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ವೆಂಕೋಬ ನಾರಾಯಣಪ್ಪ, ‘ತರಬೇತಿ ಶಿಬಿರ ವ್ಯಕ್ತತ್ವ ನಿರ್ಮಾಣಕ್ಕೆ ಪೂರಕವಾಗಿದೆ’ ಎಂದರು.</p>.<p>ಪೌರತ್ವ ತರಬೇತಿ ಶಿಬಿರದ ಸಂಯೋಜಕ ಡಾ.ಯು.ಕೆ.ಕುಲಕರ್ಣಿ, ಡಾ.ವಿಷ್ಣು.ಎಂ.ಶಿಂದೆ, ಡಾ.ಅಶೋಕಕುಮಾರ ಸುರಪುರ, ಡಾ.ಜಿ. ಸೌಭಾಗ್ಯ, ಡಾ.ಪ್ರಕಾಶ ಸಣ್ಣಕ್ಕನವರ, ಡಾ.ಭಾರತಿ ಗಾಣೀಗೆರ ಹಾಗೂ ಡಾ.ಪ್ರಕಾಶ ಬಡಿಗೇರ,ನಫಿಸಾಬಾನು, ಪೂಜಾ ಸಾಗರ, ಆರತಿ ಕಾಂಬಳೆ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯರಿಂದ ಸರ್ವಧರ್ಮ ಪಠಣ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ‘ಸಮಾಜದಿಂದ ಶಿಕ್ಷಣವನ್ನು ಪಡೆಯುವ ನಾವು, ಅದನ್ನು ಸರಿಯಾದ ಮಾರ್ಗದಲ್ಲಿ ಸ್ವೀಕರಿಸಿ, ಬೆಳೆದು ಅದನ್ನು ಮೌಲ್ಯವಾಗಿ ಪರಿಗಣಿಸಿ ಸಮಾಜಕ್ಕೆ ಮರಳಿ ನೀಡುವ ಗುಣ ಬೆಳೆಸಿಕೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಹೇಳಿದರು.</p>.<p>ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದಲ್ಲಿ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ನಾಗರಿಕ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.</p>.<p>‘ಹಿಂಸೆ, ರೋಗ ರುಜಿನಗಳಿಗೆ ಮಾನವನ ಚಟುವಟಿಕೆಗಳೆ ಕಾರಣ. ಅದನ್ನು ಸರಿಪಡಿಸುವ, ಸುಸ್ಥಿತವಾಗಿಸುವ ಕೆಲಸವು ನಮ್ಮಿಂದಲೆ ನಡೆಯಬೇಕಾಗಿದೆ’ ಎಂದರು.</p>.<p>‘ಪೌರತ್ವ ಶಿಬಿರಗಳು ಶಿಕ್ಷಕ ತರಬೇತಿಗೆ ಬೇಕಾದ ಮೌಲ್ಯಗಳನ್ನು ತಿಳಿಸಿಕೊಡಲು ಸಹಕಾರಿ. ಪ್ರಸ್ತುತ ಪೌರತ್ವ ಶಿಬಿರದಲ್ಲಿ ಹಮ್ಮಿಕೊಂಡಿರುವ ಉಪನ್ಯಾಸಗಳು ಮತ್ತು ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ’ ಎಂದು ಹೇಳಿದರು.</p>.<p>‘ಮಹಿಳಾ ಪ್ರಶಿಕ್ಷಣಾರ್ಥಿಗಳು ಆತ್ಮವಿಶ್ವಾಸದಿಂದ ತರಬೇತಿ ಪಡೆದು ಶಾಲೆಗಳಲ್ಲಿ ಕರ್ತವ್ಯ ನಿಷ್ಠೆಯಿಂದ ಕಾರ್ಯಮಾಡಿ’ ಎಂದು ಸಲಹೆ ನೀಡಿದರು.</p>.<p>ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ವೆಂಕೋಬ ನಾರಾಯಣಪ್ಪ, ‘ತರಬೇತಿ ಶಿಬಿರ ವ್ಯಕ್ತತ್ವ ನಿರ್ಮಾಣಕ್ಕೆ ಪೂರಕವಾಗಿದೆ’ ಎಂದರು.</p>.<p>ಪೌರತ್ವ ತರಬೇತಿ ಶಿಬಿರದ ಸಂಯೋಜಕ ಡಾ.ಯು.ಕೆ.ಕುಲಕರ್ಣಿ, ಡಾ.ವಿಷ್ಣು.ಎಂ.ಶಿಂದೆ, ಡಾ.ಅಶೋಕಕುಮಾರ ಸುರಪುರ, ಡಾ.ಜಿ. ಸೌಭಾಗ್ಯ, ಡಾ.ಪ್ರಕಾಶ ಸಣ್ಣಕ್ಕನವರ, ಡಾ.ಭಾರತಿ ಗಾಣೀಗೆರ ಹಾಗೂ ಡಾ.ಪ್ರಕಾಶ ಬಡಿಗೇರ,ನಫಿಸಾಬಾನು, ಪೂಜಾ ಸಾಗರ, ಆರತಿ ಕಾಂಬಳೆ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯರಿಂದ ಸರ್ವಧರ್ಮ ಪಠಣ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>