<p><strong>ವಿಜಯಪುರ:</strong> ನಗರದ ಬಬಲೇಶ್ವರ ರಸ್ತೆಯಲ್ಲಿರುವ ‘ಸಾಯಿ ಪ್ರಭಾತ್‘ ಬಾರ್ ಮಾಲೀಕನ ಲ್ಯಾಬ್ರಡಾರ್ ನಾಯಿಯನ್ನು ಕದ್ದು ಪರಾರಿಯಾಗಿದ್ದ ಕುಡುಕನನ್ನು ಬಾರ್ನ ಸಿಬ್ಬಂದಿ ಪತ್ತೆ ಹಚ್ಚಿ, ಅದೇ ನಾಯಿ ಬೋನ್ (ಪಂಜರ)ನಲ್ಲಿ ಕೂಡಿ ಹಾಕಿ ಶಿಕ್ಷಿಸಿರುವ ಘಟನೆ ನಡೆದಿದೆ.</p><p>ವಿಜಯಪುರ ನಗರದ ನಿವಾಸಿ ಸೋಮು ಎಂಬಾತ ಇತ್ತೀಚೆಗೆ ಬಾರ್ಗೆ ಬಂದು ಕಂಠಪೂರ್ತಿ ಕುಡಿದು ಮನೆಗೆ ಮರಳುವಾಗ ಬಾರ್ ಮುಂದಿನ ಬೋನ್ನಲ್ಲಿ ಇದ್ದ ನಾಯಿಯನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ.</p><p>ನಾಯಿ ಕಳವುದಾಗಿದ್ದರಿಂದ ಬೇಸರಗೊಂಡಿದ್ದ ಬಾರ್ನ ಮಾಲೀಕನ ಕುಟುಂಬದವರು ಹಾಗೂ ಬಾರ್ ಸಿಬ್ಬಂದಿ ಕೊನೆಗೂ ನಾಯಿ ಕಳ್ಳನನ್ನು ಪತ್ತೆ ಹಂಚಿ, ನಾಯಿ ಸಹಿತಿ ಹಿಡಿದುಕೊಂಡು ಬಂದು, ಅದೇ ನಾಯಿ ಬೋನ್ನಲ್ಲಿ ಮಂಗಳವಾರ ಗಂಟೆಗಟ್ಟಲೆ ಕೂಡಿಹಾಕಿ, ಹಿಂಸೆ ನೀಡಿದ್ದಾರೆ.</p><p>ಬಾರ್ಗೆ ಬಂದಿದ್ದ ಇತರೆ ಗ್ರಾಹಕರು ಈ ದೃಶ್ಯ ಕಂಡು, ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ ಗ್ರಾಹಕರ ಸಲಹೆ ಮೇರೆಗೆ ಬೋನ್ನಲ್ಲಿದ್ದ ಸೋಮುನನ್ನು ಹೊರಗೆ ಬಿಟ್ಟಿದ್ದಾರೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.</p><p><strong>ಕಾನೂನು ಕ್ರಮ:</strong></p><p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ‘ಪ್ರಕರಣ ಗಮನಕ್ಕೆ ಬಂದಿರಲಿಲ್ಲ. ಈ ಕುರಿತು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ನಗರದ ಬಬಲೇಶ್ವರ ರಸ್ತೆಯಲ್ಲಿರುವ ‘ಸಾಯಿ ಪ್ರಭಾತ್‘ ಬಾರ್ ಮಾಲೀಕನ ಲ್ಯಾಬ್ರಡಾರ್ ನಾಯಿಯನ್ನು ಕದ್ದು ಪರಾರಿಯಾಗಿದ್ದ ಕುಡುಕನನ್ನು ಬಾರ್ನ ಸಿಬ್ಬಂದಿ ಪತ್ತೆ ಹಚ್ಚಿ, ಅದೇ ನಾಯಿ ಬೋನ್ (ಪಂಜರ)ನಲ್ಲಿ ಕೂಡಿ ಹಾಕಿ ಶಿಕ್ಷಿಸಿರುವ ಘಟನೆ ನಡೆದಿದೆ.</p><p>ವಿಜಯಪುರ ನಗರದ ನಿವಾಸಿ ಸೋಮು ಎಂಬಾತ ಇತ್ತೀಚೆಗೆ ಬಾರ್ಗೆ ಬಂದು ಕಂಠಪೂರ್ತಿ ಕುಡಿದು ಮನೆಗೆ ಮರಳುವಾಗ ಬಾರ್ ಮುಂದಿನ ಬೋನ್ನಲ್ಲಿ ಇದ್ದ ನಾಯಿಯನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ.</p><p>ನಾಯಿ ಕಳವುದಾಗಿದ್ದರಿಂದ ಬೇಸರಗೊಂಡಿದ್ದ ಬಾರ್ನ ಮಾಲೀಕನ ಕುಟುಂಬದವರು ಹಾಗೂ ಬಾರ್ ಸಿಬ್ಬಂದಿ ಕೊನೆಗೂ ನಾಯಿ ಕಳ್ಳನನ್ನು ಪತ್ತೆ ಹಂಚಿ, ನಾಯಿ ಸಹಿತಿ ಹಿಡಿದುಕೊಂಡು ಬಂದು, ಅದೇ ನಾಯಿ ಬೋನ್ನಲ್ಲಿ ಮಂಗಳವಾರ ಗಂಟೆಗಟ್ಟಲೆ ಕೂಡಿಹಾಕಿ, ಹಿಂಸೆ ನೀಡಿದ್ದಾರೆ.</p><p>ಬಾರ್ಗೆ ಬಂದಿದ್ದ ಇತರೆ ಗ್ರಾಹಕರು ಈ ದೃಶ್ಯ ಕಂಡು, ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ ಗ್ರಾಹಕರ ಸಲಹೆ ಮೇರೆಗೆ ಬೋನ್ನಲ್ಲಿದ್ದ ಸೋಮುನನ್ನು ಹೊರಗೆ ಬಿಟ್ಟಿದ್ದಾರೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.</p><p><strong>ಕಾನೂನು ಕ್ರಮ:</strong></p><p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ‘ಪ್ರಕರಣ ಗಮನಕ್ಕೆ ಬಂದಿರಲಿಲ್ಲ. ಈ ಕುರಿತು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>