<p><strong>ತಿಕೋಟಾ</strong>: ಸಾಧನೆಗೆ ಬಡತನ, ಕಷ್ಟ ಕಾರ್ಪಣ್ಯಗಳು ಅಡ್ಡಿಯಾಗಲಾರವು. ಸತತ ಓದಿನಿಂದ ಇಚ್ಚಿಸಿದ ಗುರಿಯನ್ನು ತಲುಪಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.</p>.<p>ನಗರದ ಟಕ್ಕೆಯಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ (ಬಿಸಿಎಂ) ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಭಾನುವಾರ<br> ಹಿರಿಯ ವಿದ್ಯಾರ್ಥಿಗಳ ಸಹಯೋಗದಿಂದ ಆರನೇ ಹಾಸ್ಟೆಲ್ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ತಮ್ಮ ಜೀವನದ ಕೆಲವು ಘಟನೆಗಳನ್ನು ಮೆಲುಕು ಹಾಕುತ್ತ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.</p>.<p>ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಮಾನವರ ಮಾತನಾಡಿ, ಹಾಸ್ಟೆಲ್ ಗಳು ಕೇವಲ ಅನ್ನವನ್ನು ಮಾತ್ರ ಕೊಡುವುದಿಲ್ಲ, ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.</p>.<p>ನಿವೃತ್ತ ನಿಲಯಪಾಲಕ ಎಂ. ಎಸ್. ಕಟಬು ಮಾತನಾಡಿದರು. </p>.<p>ಹಲವು ಹಳೆಯ ವಿದ್ಯಾರ್ಥಿಗಳು ತಮ್ಮ ನೆನಪಿನಂಗಳದಲ್ಲಿ ಅಚ್ಚಳಿಯದಂತಿರುವ ಭಾವನೆಗಳ ಬುತ್ತಿಯನ್ನು ತಮ್ಮ ಅನಿಸಿಕೆಗಳ ಮೂಲಕ ತೆರೆದಿಟ್ಟರು. ಒಟ್ಟಾರೆಯಾಗಿ ಈ ವರ್ಷದ ಹಾಸ್ಟೆಲ್ ಹಬ್ಬ ದೀಪಾವಳಿ ಹಬ್ಬದ ಮುನ್ನವೇ ಹಬ್ಬದ ವಾತಾವರಣ ಸೃಷ್ಟಿ ಮಾಡಿ ಸ್ನೇಹಿತರ ಪುನರ್ಮಿಲನಕ್ಕೆ ಸಾಕ್ಷಿಯಾಗಿತ್ತು.</p>.<p>ಲಕ್ಷ್ಮಣ ಸನದಿ, ಶಿಂಧೆ, ಎಸ್.ಎಸ್. ಕಬಾಡೆ, ರವಿಕುಮಾರ ಬಿರಾದಾರ, ನಾಗೇಶ ಅಳ್ಳಿ, ಎಚ್.ಎಲ್.ದೊಡ್ಡಮನಿ, ಸಂತೋಷ ಬಗಲಿ, ಮಹೇಶ ಸಾಲಿಕೇರಿ, ಅವಜಿ, ಗಿರಿಗೌಡರ,ಸಂತೋಷ ಗುದಳಿ, ಚಂದ್ರು ಗುಳಬಾಳ, ಹುಸನಪ್ಪ, ಸಿದ್ದನಗೌಡ, ಕಾಡೇಶ, ಮನಸೂರ್ ಬೀಳಗಿ, ಶ್ರೀಕಾಂತ ಇಚೂರ್, ಪ್ರವೀಣ್ ಮ್ಯಾಗೇರಿ, ಜೋತೆಪ್ಪ, ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಕೋಟಾ</strong>: ಸಾಧನೆಗೆ ಬಡತನ, ಕಷ್ಟ ಕಾರ್ಪಣ್ಯಗಳು ಅಡ್ಡಿಯಾಗಲಾರವು. ಸತತ ಓದಿನಿಂದ ಇಚ್ಚಿಸಿದ ಗುರಿಯನ್ನು ತಲುಪಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.</p>.<p>ನಗರದ ಟಕ್ಕೆಯಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ (ಬಿಸಿಎಂ) ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಭಾನುವಾರ<br> ಹಿರಿಯ ವಿದ್ಯಾರ್ಥಿಗಳ ಸಹಯೋಗದಿಂದ ಆರನೇ ಹಾಸ್ಟೆಲ್ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ತಮ್ಮ ಜೀವನದ ಕೆಲವು ಘಟನೆಗಳನ್ನು ಮೆಲುಕು ಹಾಕುತ್ತ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.</p>.<p>ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಮಾನವರ ಮಾತನಾಡಿ, ಹಾಸ್ಟೆಲ್ ಗಳು ಕೇವಲ ಅನ್ನವನ್ನು ಮಾತ್ರ ಕೊಡುವುದಿಲ್ಲ, ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.</p>.<p>ನಿವೃತ್ತ ನಿಲಯಪಾಲಕ ಎಂ. ಎಸ್. ಕಟಬು ಮಾತನಾಡಿದರು. </p>.<p>ಹಲವು ಹಳೆಯ ವಿದ್ಯಾರ್ಥಿಗಳು ತಮ್ಮ ನೆನಪಿನಂಗಳದಲ್ಲಿ ಅಚ್ಚಳಿಯದಂತಿರುವ ಭಾವನೆಗಳ ಬುತ್ತಿಯನ್ನು ತಮ್ಮ ಅನಿಸಿಕೆಗಳ ಮೂಲಕ ತೆರೆದಿಟ್ಟರು. ಒಟ್ಟಾರೆಯಾಗಿ ಈ ವರ್ಷದ ಹಾಸ್ಟೆಲ್ ಹಬ್ಬ ದೀಪಾವಳಿ ಹಬ್ಬದ ಮುನ್ನವೇ ಹಬ್ಬದ ವಾತಾವರಣ ಸೃಷ್ಟಿ ಮಾಡಿ ಸ್ನೇಹಿತರ ಪುನರ್ಮಿಲನಕ್ಕೆ ಸಾಕ್ಷಿಯಾಗಿತ್ತು.</p>.<p>ಲಕ್ಷ್ಮಣ ಸನದಿ, ಶಿಂಧೆ, ಎಸ್.ಎಸ್. ಕಬಾಡೆ, ರವಿಕುಮಾರ ಬಿರಾದಾರ, ನಾಗೇಶ ಅಳ್ಳಿ, ಎಚ್.ಎಲ್.ದೊಡ್ಡಮನಿ, ಸಂತೋಷ ಬಗಲಿ, ಮಹೇಶ ಸಾಲಿಕೇರಿ, ಅವಜಿ, ಗಿರಿಗೌಡರ,ಸಂತೋಷ ಗುದಳಿ, ಚಂದ್ರು ಗುಳಬಾಳ, ಹುಸನಪ್ಪ, ಸಿದ್ದನಗೌಡ, ಕಾಡೇಶ, ಮನಸೂರ್ ಬೀಳಗಿ, ಶ್ರೀಕಾಂತ ಇಚೂರ್, ಪ್ರವೀಣ್ ಮ್ಯಾಗೇರಿ, ಜೋತೆಪ್ಪ, ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>