<p><strong>ನಾಲತವಾಡ</strong>: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗದ ನಾಲತವಾಡದ ಗೆಳೆಯರ ಬಳಗದ ವತಿಯಿಂದ ನಿವೃತ್ತರಾದ ಚಾಲಕ ಹಾಗೂ ನಿರ್ವಾಹಕರು, ಪದೋನ್ನತಿ ಪಡೆದ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.</p>.<p>ನಿವೃತ್ತ ನಿರ್ವಾಹಕ ಮುತ್ತು ಸ್ಥಾವರಮಠ ಮಾತನಾಡಿ, ‘ಪಟ್ಟಣದ ಜನತೆ ಹಲವಾರು ವರ್ಷಗಳಿಂದ ಮಿನಿ ಬಸ್ ಡಿಪೊ ಸ್ಥಾಪನೆಯ ನಿರೀಕ್ಷೆಯಲ್ಲಿದ್ದಾರೆ. ಶಾಸಕರು ಮತ್ತು ಸಂಬಂಧಿತ ಅಧಿಕಾರಿಗಳಿಗೆ ಈ ಕುರಿತು ಹಲವು ಮನವಿ ಸಲ್ಲಿಸಲಾಗಿದೆ. ಪಟ್ಟಣ ಜಿಲ್ಲೆಯ ಕೊನೆಯ ಭಾಗದಲ್ಲಿರುವುದರಿಂದ ಇಲ್ಲಿಗೆ ಸಾರಿಗೆ ಸೌಲಭ್ಯ ಅಗತ್ಯವಾಗಿದೆ. ಯಾದಗಿರಿ, ರಾಯಚೂರು ಜಿಲ್ಲೆಗಳ ಸಂಪರ್ಕದ ದೃಷ್ಟಿಯಿಂದ ನಾಲತವಾಡ ಕೇಂದ್ರ ಸ್ಥಾನ ಹೊಂದಿದ್ದು, ಮಿನಿ ಡಿಪೊ ಪ್ರಾರಂಭ ಮಾಡಬೇಕು’ ಎಂದು ಹೇಳಿದರು.</p>.<p>ಸನ್ಮಾನ: ನಿವೃತ್ತರಾದ ಸಾರಿಗೆ ಸಿಬ್ಬಂದಿ ವೈ.ಬಿ.ಹಟ್ಟಿ, ಎಂ.ಎಸ್.ಹೋಗಾರ, ಕೆ.ಐ.ಅವಟಿ, ಬೈಲಪ್ಪ ಹಿಂದಿನಮನಿ ಹಾಗೂ ಸೇವೆಯಿಂದ ಪದೋನ್ನತಿ ಹೊಂದಿದ ರಾಚಯ್ಯ ಕಪ್ಪರದ, ಚಂದ್ರಶೇಖರ ವಾಲಿಶಟ್ಟಿ, ಡಿ.ಜಿ.ಡಂಬಳ ಅವರನ್ನು ಸನ್ಮಾನಿಸಲಾಯಿತು.</p>.<p>ಮುಖ್ಯ ಅಥಿತಿಗಳಾಗಿ ನಂದಪ್ಪ ಗಂಗನಗೌಡರ, ಶರಣಪ್ಪ ಬಿದರಕುಂದಿ, ಗಿರೀಶ ಕ್ಷತ್ರಿ, ಡಿ.ಎಸ್. ಬಿಳೇಭಾವಿ, ಬಸವರಾಜ ಹಾವರಗಿ ಇದ್ದರು. ಸುರೇಶ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಕರಿಭಾವಿ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಲತವಾಡ</strong>: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗದ ನಾಲತವಾಡದ ಗೆಳೆಯರ ಬಳಗದ ವತಿಯಿಂದ ನಿವೃತ್ತರಾದ ಚಾಲಕ ಹಾಗೂ ನಿರ್ವಾಹಕರು, ಪದೋನ್ನತಿ ಪಡೆದ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.</p>.<p>ನಿವೃತ್ತ ನಿರ್ವಾಹಕ ಮುತ್ತು ಸ್ಥಾವರಮಠ ಮಾತನಾಡಿ, ‘ಪಟ್ಟಣದ ಜನತೆ ಹಲವಾರು ವರ್ಷಗಳಿಂದ ಮಿನಿ ಬಸ್ ಡಿಪೊ ಸ್ಥಾಪನೆಯ ನಿರೀಕ್ಷೆಯಲ್ಲಿದ್ದಾರೆ. ಶಾಸಕರು ಮತ್ತು ಸಂಬಂಧಿತ ಅಧಿಕಾರಿಗಳಿಗೆ ಈ ಕುರಿತು ಹಲವು ಮನವಿ ಸಲ್ಲಿಸಲಾಗಿದೆ. ಪಟ್ಟಣ ಜಿಲ್ಲೆಯ ಕೊನೆಯ ಭಾಗದಲ್ಲಿರುವುದರಿಂದ ಇಲ್ಲಿಗೆ ಸಾರಿಗೆ ಸೌಲಭ್ಯ ಅಗತ್ಯವಾಗಿದೆ. ಯಾದಗಿರಿ, ರಾಯಚೂರು ಜಿಲ್ಲೆಗಳ ಸಂಪರ್ಕದ ದೃಷ್ಟಿಯಿಂದ ನಾಲತವಾಡ ಕೇಂದ್ರ ಸ್ಥಾನ ಹೊಂದಿದ್ದು, ಮಿನಿ ಡಿಪೊ ಪ್ರಾರಂಭ ಮಾಡಬೇಕು’ ಎಂದು ಹೇಳಿದರು.</p>.<p>ಸನ್ಮಾನ: ನಿವೃತ್ತರಾದ ಸಾರಿಗೆ ಸಿಬ್ಬಂದಿ ವೈ.ಬಿ.ಹಟ್ಟಿ, ಎಂ.ಎಸ್.ಹೋಗಾರ, ಕೆ.ಐ.ಅವಟಿ, ಬೈಲಪ್ಪ ಹಿಂದಿನಮನಿ ಹಾಗೂ ಸೇವೆಯಿಂದ ಪದೋನ್ನತಿ ಹೊಂದಿದ ರಾಚಯ್ಯ ಕಪ್ಪರದ, ಚಂದ್ರಶೇಖರ ವಾಲಿಶಟ್ಟಿ, ಡಿ.ಜಿ.ಡಂಬಳ ಅವರನ್ನು ಸನ್ಮಾನಿಸಲಾಯಿತು.</p>.<p>ಮುಖ್ಯ ಅಥಿತಿಗಳಾಗಿ ನಂದಪ್ಪ ಗಂಗನಗೌಡರ, ಶರಣಪ್ಪ ಬಿದರಕುಂದಿ, ಗಿರೀಶ ಕ್ಷತ್ರಿ, ಡಿ.ಎಸ್. ಬಿಳೇಭಾವಿ, ಬಸವರಾಜ ಹಾವರಗಿ ಇದ್ದರು. ಸುರೇಶ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಕರಿಭಾವಿ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>