<p><strong>ವಿಜಯಪುರ:</strong> ವಿಜಯಪುರ ನಗರಕ್ಕೆ ಯಾವುದೇ ಹೊಸ ಯೋಜನೆಗಳಿಲ್ಲದ ಹಾಗೂ ಜನರಿಗೆ ಹೊರೆಯೂ ಆಗದ 2026–27ನೇ ಸಾಲಿನ ಬಜೆಟ್ ಅನ್ನು ಮೇಯರ್ ಎಂ.ಎಸ್.ಕರಡಿ ಶುಕ್ರವಾರ ಮಂಡಿಸಿದರು.</p>.<p>ಪಾಲಿಕೆಗೆ ವಿವಿಧ ಮೂಲಗಳಿಂದ ಅಂದಾಜು ₹265.20 ಕೋಟಿ ಆದಾಯ ಸಂಗ್ರಹಿಸಿ, ಅದರಿಂದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ₹265.08 ಕೋಟಿ ವೆಚ್ಚ ಮಾಡುವುದಾಗಿ ಲೆಕ್ಕ ನೀಡಿದ ಮೇಯರ್ ಕರಡಿಯವರು, ‘ಹಾಸಿಗೆ ಇದ್ದಷ್ಟೇ ಕಾಲು ಚಾಚು’ ಎಂಬ ಗಾದೆ ಮಾತಿನಂತೆ ಸೀಮಿತ ಆದಾಯದಲ್ಲಿ ಖರ್ಚನ್ನು ಕಳೆದು ₹12 ಲಕ್ಷ ಉಳಿತಾಯ ಮಾಡಿರುವುದಕ್ಕೆ ಆಡಳಿತರೂಢ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಅಭಿನಂದಿಸಿದರು.</p>.<h2>ಬಜೆಟ್ ಮುಖ್ಯಾಂಶಗಳು:</h2>.<p>ಪಾಲಿಕೆಯ ವ್ಯಾಪ್ತಿಯಲ್ಲಿ ಒಳಚರಂಡಿ ತುರ್ತು ನಿರ್ವಹಣೆಗಾಗಿ ಪ್ರತಿ ವಾರ್ಡ್ಗೆ ₹10 ಲಕ್ಷ, ಪ್ರತಿ ವಾರ್ಡ್ಗಳಿಗೆ ಮೂಲಸೌಕರ್ಯ ಒದಗಿಸಲು ತಲಾ ₹20 ಲಕ್ಷ, ನಗರದಲ್ಲಿರುವ ಸ್ಮಶಾನಗಳ ಅಭಿವೃದ್ಧಿ ಮತ್ತು ಮೂಲಸೌಕರ್ಯಕ್ಕೆ ಒಟ್ಟು ₹50 ಲಕ್ಷ, ಸುಸಜ್ಜಿತವಾದ ಫುಡ್ ಕೋರ್ಟ್ ನಿರ್ಮಾಣಕ್ಕೆ ₹50 ಲಕ್ಷ ಮೀಸಲಿಟ್ಟಿರುವುದಾಗಿ ಹೇಳಿದರು.</p>.<p>ಸಂಚಾರ ದೃಷ್ಟಿಯಿಂದ ಬಹಳ ಅಗತ್ಯವಾಗಿದ್ದ ಶಿವಾಜಿ ವೃತ್ತದಿಂದ ಗೋದಾವರಿ ಹೋಟೆಲ್ ವರೆಗೆ ರಸ್ತೆ ವಿಸ್ತರಣೆ, ಅಭಿವೃದ್ಧಿ ಹಾಗೂ ಸೌಂದರ್ಯೀಕರಣವನ್ನು ₹3 ಕೋಟಿ ವಿಶೇಷ ಅನುದಾನದಲ್ಲಿ ಮಾಡುವುದಾಗಿ ತಿಳಿಸಿದರು.</p>.<p>ಸಾರ್ವಜನಿಕರ ಅನುಕೂಲಕ್ಕಾಗಿ ಎರಡು ಸುಸಜ್ಜಿತ ಮುಕ್ತಿ ವಾಹನಗಳನ್ನು ₹50 ಲಕ್ಷದಲ್ಲಿ ಖರೀದಿಸಲಾಗುವುದು, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಹಾಗೂ ಉದ್ಯೋಗಕ್ಕಾಗಿ ₹20 ಲಕ್ಷ ಸಹಾಯಧನ ನೀಡಲಾಗುವುದು ಎಂದರು.</p>.<p>ಅಂಗವಿಕಲರ ಅಭಿವೃದ್ಧಿಗಾಗಿ ಶೇ 5 ಯೋಜನೆಯಡಿ ಕ್ರೀಡೆಗಾಗಿ 2 ಮೂವಿಂಗ್ ಪೋಲ್ಸ್, 2 ನೆಟ್, ಕ್ರಿಕೆಟ್ ಪಿಚ್ ಟೇಬಲ್ ಹಾಗೂ ಇತರೆ ಅವಶ್ಯಕ ಸಾಮಗ್ರಿಗಳನ್ನು ವಿತರಿಸಲು ₹10 ಲಕ್ಷ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದರು.</p>.<p>ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಹಾಗೂ ಪಾಲನೆಗಾಗಿ ₹62 ಲಕ್ಷದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲಾಗುವುದು ಎಂದರು.</p>.<p>₹7 ಕೋಟಿ ವೆಚ್ಚದಲ್ಲಿ ಬೇಗಂ ತಲಾಬ್ ಕೆರೆ ಮತ್ತು ₹13 ಕೋಟಿ ವೆಚ್ಚದಲ್ಲಿ ಭೂತನಾಳ ಕೆರೆಯ ಸೌಂದರ್ಯೀಕರಣ, ಉದ್ಯಾನ, ವಾಕಿಂಗ್ ಟ್ರ್ಯಾಕ್ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.</p>.<p>16ನೇ ಹಣಕಾಸು ಯೋಜನೆಯಡಿ ₹2.60 ಕೋಟಿ ವೆಚ್ಚದಲ್ಲಿ 20 ಘನತ್ಯಾಜ್ಯ ವಿಲೇವಾರಿ ವಾಹನಗಳನ್ನು ಖರೀದಿಸಲಾಗುವುದು ಹಾಗೂ ₹60 ಲಕ್ಷದಲ್ಲಿ 8ನೇ ವಾರ್ಡಿನ ಉದ್ಯಾನವನ್ನು ಅಭಿವೃದ್ಧಿ ಪಡಿಸುವುದಾಗಿ ಹೇಳಿದರು.</p>.<p>ಸ್ವಚ್ಛ ಭಾರತ ಯೋಜನೆಯಲ್ಲಿ ಪಾಲಿಕೆ ಸ್ಟಾರ್ ರೇಟಿಂಗ್ ಹೆಚ್ಚಿಸುವ ದೃಷ್ಟಿಯಿಂದ ₹ 40 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಗುವುದು ಎಂದರು.</p>.<p>ನಗರದ ಪೌರಕಾರ್ಮಿಕರು ಮತ್ತು ಇತರೆ ಕಾರ್ಮಿಕರಿಗೆ ಪ್ರತಿದಿನ ಉಪಾಹಾರ ಪೂರೈಸುವ ಕಾರ್ಯಕ್ರಮಕ್ಕೆ ₹1.20 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.</p>.<div><blockquote>ಮೇಯರ್ ಎಂ.ಎಸ್. ಕರಡಿ ಮಂಡಿಸಿರುವ ಬಜೆಟ್ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಒಳಗೊಂಡಿಲ್ಲ. ಹೊಸತೂ ಇಲ್ಲ ಸಮಧಾನಕರವಾದ ಬಜೆಟ್ ಅಲ್ಲ</blockquote><span class="attribution">ದಿನೇಶ ಹಳ್ಳಿ ಕಾಂಗ್ರೆಸ್ ಸದಸ್ಯ ಮಹಾನಗರ ಪಾಲಿಕೆ ವಿಜಯಪುರ</span></div>.<div><blockquote>ಮಹಾನಗರ ಪಾಲಿಕೆ ಪ್ರತಿ ವಾರ್ಡ್ಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನ ಏತಕ್ಕೂ ಸಾಲದು. ಪ್ರತಿ ವಾರ್ಡ್ಗೆ ಕನಿಷ್ಠ ₹ 50 ಲಕ್ಷ ಮೀಸಲಿಡಬೇಕು</blockquote><span class="attribution"> ಅಶೋಕ ನ್ಯಾಮಗೊಂಡ ಸದಸ್ಯ ಮಹಾನಗರ ಪಾಲಿಕೆ</span></div>.<div><blockquote>ವಾಸ್ತವ ಬಜೆಟ್ ಇದಾಗಿದೆ. ಆದರೆ ಆಸ್ತಿ ತೆರಿಗೆ ಜಾಹೀರಾತು ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಪಾಲಿಕೆಯಲ್ಲಿ ಅನಗತ್ಯ ವಾಹನ ಬಳಕೆಗೆ ಕಡಿವಾಣ ಹಾಕಬೇಕು</blockquote><span class="attribution">ರಾಜು ಮಗ್ಗಿಮಠ ಬಿಜೆಪಿ ಸದಸ್ಯ</span></div>.<div><blockquote>ವಾಸ್ತವ ಬಜೆಟ್ ಇದಾಗಿದೆ. ಆದರೆ ಆಸ್ತಿ ತೆರಿಗೆ ಜಾಹೀರಾತು ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಪಾಲಿಕೆಯಲ್ಲಿ ಅನಗತ್ಯ ವಾಹನ ಬಳಕೆಗೆ ಕಡಿವಾಣ ಹಾಕಬೇಕು</blockquote><span class="attribution">ರಾಜು ಮಗ್ಗಿಮಠ ಬಿಜೆಪಿ ಸದಸ್ಯ</span></div>.<div><blockquote>ಬಜೆಟ್ ಕಾಗದಕ್ಕೆ ಸೀಮಿತವಾಗದೇ ಅನುಷ್ಠಾನಕ್ಕೆ ತರಲು ಆದ್ಯತೆ ನೀಡಬೇಕು. ನನೆಗುದಿಗೆ ಬಿದ್ದಿರುವ ಪಾಲಿಕೆ ವಾಣಿಜ್ಯ ಮಳಿಗೆಗಳ ಹರಾಜು ಹಾಕಬೇಕು </blockquote><span class="attribution">ಶಿವರುದ್ರ ಬಾಗಲಕೋಟೆ ಬಿಜೆಪಿ ಸದಸ್ಯ</span></div>.<div><blockquote>ಮೇಯರ್ ಕರಡಿಯವರು ಬಜೆಟ್ನಲ್ಲಿ ಯಾವುದೇ ತಾರತಮ್ಯ ಮಾಡದೇ ಪಕ್ಷಾತೀತವಾಗಿ ಎಲ್ಲ ವಾರ್ಡ್ಗಳಿಗೆ ಸರಿಸಮನಾಗಿ ಆದ್ಯತೆ ನೀಡಿದ್ದಾರೆ. </blockquote><span class="attribution">ಸಪ್ನಾ ಕಣಮುಚನಾಳ ಬಿಜೆಪಿ ಸದಸ್ಯೆ</span></div>.<div><blockquote>ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಹಳಷ್ಟು ಗಿಡಗಳನ್ನು ನೆಡಲಾಗಿದೆ. ಆದರೆ ನೀರಿಲ್ಲದೇ ಒಣಗುತ್ತಿವೆ. ನೀರೊದಗಿಸಲು ಅಗತ್ಯ ಟ್ಯಾಂಕರ್ ವ್ಯವಸ್ಥೆ ಮಾಡಬೇಕು </blockquote><span class="attribution">ಪ್ರೇಮಾನಂದ ಬಿರಾದಾರ ಪಾಲಿಕೆ ಸದಸ್ಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ವಿಜಯಪುರ ನಗರಕ್ಕೆ ಯಾವುದೇ ಹೊಸ ಯೋಜನೆಗಳಿಲ್ಲದ ಹಾಗೂ ಜನರಿಗೆ ಹೊರೆಯೂ ಆಗದ 2026–27ನೇ ಸಾಲಿನ ಬಜೆಟ್ ಅನ್ನು ಮೇಯರ್ ಎಂ.ಎಸ್.ಕರಡಿ ಶುಕ್ರವಾರ ಮಂಡಿಸಿದರು.</p>.<p>ಪಾಲಿಕೆಗೆ ವಿವಿಧ ಮೂಲಗಳಿಂದ ಅಂದಾಜು ₹265.20 ಕೋಟಿ ಆದಾಯ ಸಂಗ್ರಹಿಸಿ, ಅದರಿಂದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ₹265.08 ಕೋಟಿ ವೆಚ್ಚ ಮಾಡುವುದಾಗಿ ಲೆಕ್ಕ ನೀಡಿದ ಮೇಯರ್ ಕರಡಿಯವರು, ‘ಹಾಸಿಗೆ ಇದ್ದಷ್ಟೇ ಕಾಲು ಚಾಚು’ ಎಂಬ ಗಾದೆ ಮಾತಿನಂತೆ ಸೀಮಿತ ಆದಾಯದಲ್ಲಿ ಖರ್ಚನ್ನು ಕಳೆದು ₹12 ಲಕ್ಷ ಉಳಿತಾಯ ಮಾಡಿರುವುದಕ್ಕೆ ಆಡಳಿತರೂಢ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಅಭಿನಂದಿಸಿದರು.</p>.<h2>ಬಜೆಟ್ ಮುಖ್ಯಾಂಶಗಳು:</h2>.<p>ಪಾಲಿಕೆಯ ವ್ಯಾಪ್ತಿಯಲ್ಲಿ ಒಳಚರಂಡಿ ತುರ್ತು ನಿರ್ವಹಣೆಗಾಗಿ ಪ್ರತಿ ವಾರ್ಡ್ಗೆ ₹10 ಲಕ್ಷ, ಪ್ರತಿ ವಾರ್ಡ್ಗಳಿಗೆ ಮೂಲಸೌಕರ್ಯ ಒದಗಿಸಲು ತಲಾ ₹20 ಲಕ್ಷ, ನಗರದಲ್ಲಿರುವ ಸ್ಮಶಾನಗಳ ಅಭಿವೃದ್ಧಿ ಮತ್ತು ಮೂಲಸೌಕರ್ಯಕ್ಕೆ ಒಟ್ಟು ₹50 ಲಕ್ಷ, ಸುಸಜ್ಜಿತವಾದ ಫುಡ್ ಕೋರ್ಟ್ ನಿರ್ಮಾಣಕ್ಕೆ ₹50 ಲಕ್ಷ ಮೀಸಲಿಟ್ಟಿರುವುದಾಗಿ ಹೇಳಿದರು.</p>.<p>ಸಂಚಾರ ದೃಷ್ಟಿಯಿಂದ ಬಹಳ ಅಗತ್ಯವಾಗಿದ್ದ ಶಿವಾಜಿ ವೃತ್ತದಿಂದ ಗೋದಾವರಿ ಹೋಟೆಲ್ ವರೆಗೆ ರಸ್ತೆ ವಿಸ್ತರಣೆ, ಅಭಿವೃದ್ಧಿ ಹಾಗೂ ಸೌಂದರ್ಯೀಕರಣವನ್ನು ₹3 ಕೋಟಿ ವಿಶೇಷ ಅನುದಾನದಲ್ಲಿ ಮಾಡುವುದಾಗಿ ತಿಳಿಸಿದರು.</p>.<p>ಸಾರ್ವಜನಿಕರ ಅನುಕೂಲಕ್ಕಾಗಿ ಎರಡು ಸುಸಜ್ಜಿತ ಮುಕ್ತಿ ವಾಹನಗಳನ್ನು ₹50 ಲಕ್ಷದಲ್ಲಿ ಖರೀದಿಸಲಾಗುವುದು, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಹಾಗೂ ಉದ್ಯೋಗಕ್ಕಾಗಿ ₹20 ಲಕ್ಷ ಸಹಾಯಧನ ನೀಡಲಾಗುವುದು ಎಂದರು.</p>.<p>ಅಂಗವಿಕಲರ ಅಭಿವೃದ್ಧಿಗಾಗಿ ಶೇ 5 ಯೋಜನೆಯಡಿ ಕ್ರೀಡೆಗಾಗಿ 2 ಮೂವಿಂಗ್ ಪೋಲ್ಸ್, 2 ನೆಟ್, ಕ್ರಿಕೆಟ್ ಪಿಚ್ ಟೇಬಲ್ ಹಾಗೂ ಇತರೆ ಅವಶ್ಯಕ ಸಾಮಗ್ರಿಗಳನ್ನು ವಿತರಿಸಲು ₹10 ಲಕ್ಷ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದರು.</p>.<p>ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಹಾಗೂ ಪಾಲನೆಗಾಗಿ ₹62 ಲಕ್ಷದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲಾಗುವುದು ಎಂದರು.</p>.<p>₹7 ಕೋಟಿ ವೆಚ್ಚದಲ್ಲಿ ಬೇಗಂ ತಲಾಬ್ ಕೆರೆ ಮತ್ತು ₹13 ಕೋಟಿ ವೆಚ್ಚದಲ್ಲಿ ಭೂತನಾಳ ಕೆರೆಯ ಸೌಂದರ್ಯೀಕರಣ, ಉದ್ಯಾನ, ವಾಕಿಂಗ್ ಟ್ರ್ಯಾಕ್ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.</p>.<p>16ನೇ ಹಣಕಾಸು ಯೋಜನೆಯಡಿ ₹2.60 ಕೋಟಿ ವೆಚ್ಚದಲ್ಲಿ 20 ಘನತ್ಯಾಜ್ಯ ವಿಲೇವಾರಿ ವಾಹನಗಳನ್ನು ಖರೀದಿಸಲಾಗುವುದು ಹಾಗೂ ₹60 ಲಕ್ಷದಲ್ಲಿ 8ನೇ ವಾರ್ಡಿನ ಉದ್ಯಾನವನ್ನು ಅಭಿವೃದ್ಧಿ ಪಡಿಸುವುದಾಗಿ ಹೇಳಿದರು.</p>.<p>ಸ್ವಚ್ಛ ಭಾರತ ಯೋಜನೆಯಲ್ಲಿ ಪಾಲಿಕೆ ಸ್ಟಾರ್ ರೇಟಿಂಗ್ ಹೆಚ್ಚಿಸುವ ದೃಷ್ಟಿಯಿಂದ ₹ 40 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಗುವುದು ಎಂದರು.</p>.<p>ನಗರದ ಪೌರಕಾರ್ಮಿಕರು ಮತ್ತು ಇತರೆ ಕಾರ್ಮಿಕರಿಗೆ ಪ್ರತಿದಿನ ಉಪಾಹಾರ ಪೂರೈಸುವ ಕಾರ್ಯಕ್ರಮಕ್ಕೆ ₹1.20 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.</p>.<div><blockquote>ಮೇಯರ್ ಎಂ.ಎಸ್. ಕರಡಿ ಮಂಡಿಸಿರುವ ಬಜೆಟ್ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಒಳಗೊಂಡಿಲ್ಲ. ಹೊಸತೂ ಇಲ್ಲ ಸಮಧಾನಕರವಾದ ಬಜೆಟ್ ಅಲ್ಲ</blockquote><span class="attribution">ದಿನೇಶ ಹಳ್ಳಿ ಕಾಂಗ್ರೆಸ್ ಸದಸ್ಯ ಮಹಾನಗರ ಪಾಲಿಕೆ ವಿಜಯಪುರ</span></div>.<div><blockquote>ಮಹಾನಗರ ಪಾಲಿಕೆ ಪ್ರತಿ ವಾರ್ಡ್ಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನ ಏತಕ್ಕೂ ಸಾಲದು. ಪ್ರತಿ ವಾರ್ಡ್ಗೆ ಕನಿಷ್ಠ ₹ 50 ಲಕ್ಷ ಮೀಸಲಿಡಬೇಕು</blockquote><span class="attribution"> ಅಶೋಕ ನ್ಯಾಮಗೊಂಡ ಸದಸ್ಯ ಮಹಾನಗರ ಪಾಲಿಕೆ</span></div>.<div><blockquote>ವಾಸ್ತವ ಬಜೆಟ್ ಇದಾಗಿದೆ. ಆದರೆ ಆಸ್ತಿ ತೆರಿಗೆ ಜಾಹೀರಾತು ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಪಾಲಿಕೆಯಲ್ಲಿ ಅನಗತ್ಯ ವಾಹನ ಬಳಕೆಗೆ ಕಡಿವಾಣ ಹಾಕಬೇಕು</blockquote><span class="attribution">ರಾಜು ಮಗ್ಗಿಮಠ ಬಿಜೆಪಿ ಸದಸ್ಯ</span></div>.<div><blockquote>ವಾಸ್ತವ ಬಜೆಟ್ ಇದಾಗಿದೆ. ಆದರೆ ಆಸ್ತಿ ತೆರಿಗೆ ಜಾಹೀರಾತು ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಪಾಲಿಕೆಯಲ್ಲಿ ಅನಗತ್ಯ ವಾಹನ ಬಳಕೆಗೆ ಕಡಿವಾಣ ಹಾಕಬೇಕು</blockquote><span class="attribution">ರಾಜು ಮಗ್ಗಿಮಠ ಬಿಜೆಪಿ ಸದಸ್ಯ</span></div>.<div><blockquote>ಬಜೆಟ್ ಕಾಗದಕ್ಕೆ ಸೀಮಿತವಾಗದೇ ಅನುಷ್ಠಾನಕ್ಕೆ ತರಲು ಆದ್ಯತೆ ನೀಡಬೇಕು. ನನೆಗುದಿಗೆ ಬಿದ್ದಿರುವ ಪಾಲಿಕೆ ವಾಣಿಜ್ಯ ಮಳಿಗೆಗಳ ಹರಾಜು ಹಾಕಬೇಕು </blockquote><span class="attribution">ಶಿವರುದ್ರ ಬಾಗಲಕೋಟೆ ಬಿಜೆಪಿ ಸದಸ್ಯ</span></div>.<div><blockquote>ಮೇಯರ್ ಕರಡಿಯವರು ಬಜೆಟ್ನಲ್ಲಿ ಯಾವುದೇ ತಾರತಮ್ಯ ಮಾಡದೇ ಪಕ್ಷಾತೀತವಾಗಿ ಎಲ್ಲ ವಾರ್ಡ್ಗಳಿಗೆ ಸರಿಸಮನಾಗಿ ಆದ್ಯತೆ ನೀಡಿದ್ದಾರೆ. </blockquote><span class="attribution">ಸಪ್ನಾ ಕಣಮುಚನಾಳ ಬಿಜೆಪಿ ಸದಸ್ಯೆ</span></div>.<div><blockquote>ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಹಳಷ್ಟು ಗಿಡಗಳನ್ನು ನೆಡಲಾಗಿದೆ. ಆದರೆ ನೀರಿಲ್ಲದೇ ಒಣಗುತ್ತಿವೆ. ನೀರೊದಗಿಸಲು ಅಗತ್ಯ ಟ್ಯಾಂಕರ್ ವ್ಯವಸ್ಥೆ ಮಾಡಬೇಕು </blockquote><span class="attribution">ಪ್ರೇಮಾನಂದ ಬಿರಾದಾರ ಪಾಲಿಕೆ ಸದಸ್ಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>