<p><strong>ವಿಜಯಪುರ</strong>: ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದ ರಾಜ್ ಗುರು ಫುಡ್ ಗೋದಾಮಿನಲ್ಲಿ ಮೆಕ್ಕೆಜೋಳ ಸಂಸ್ಕರಣ ಘಟಕ ಕುಸಿದು, ಅದರ ಅಡಿಯಲ್ಲಿ ಸಿಲುಕಿ ಸಾವನಪ್ಪಿರುವ ಕಾರ್ಮಿಕರ ಹೊರತೆಗೆಯುವ ಕಾರ್ಯಾಚರಣೆ ಅಂತಿಮ ಹಂತ ತಲುಪಿದೆ.</p><p>ಪುಣೆಯಿಂದ ಬೆಳಿಗ್ಗೆ ಘಟನಾ ಸ್ಥಳಕ್ಕೆ ಬಂದಿರುವ 30 ಜನರಿರುವ ಎನ್ ಡಿಆರ್ ಎಫ್ ತಂಡ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ.</p><p>ಬೆಳಿಗ್ಗೆ 10 ಗಂಟೆ ಬಳಿಕ ಮತ್ತಿಬ್ಬರು ಕಾರ್ಮಿಕರ ಶವ ಹೊರತೆಗೆದರು.</p><p>ಬಿಹಾರದ ಕೃಷ್ಣ ಕುಮಾರ್(28) ಮತ್ತು ಗುಲಾಲ್ ಚಂದ್ ಮುಖಿಯಾ(40)ಎಂದು ಗುರುತಿಸಲಾಗಿದೆ.</p><p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮಾತನಾಡಿ, ಈಗಾಗಲೇ ಏಳು ಕಾರ್ಮಿಕರ ಶವವನ್ನು ಹೊರತರಲಾಗಿದೆ. ಬಹುತೇಕ ಕಾರ್ಯಾಚರಣೆ ಮುಗಿದಿದೆ ಎಂದರು.</p><p>ದುರ್ಘಟನೆಗೆ ಕಾರಣರಾದ ಗೋದಾಮಿನ ಮಾಲೀಕ ಮತ್ತು</p><p>ಸೂಪರ್ ವೈಸರ್ ವಿರುದ್ಧ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ. ಆರೋಪಗಳನ್ನು ಶೀಘ್ರ ವಶಕ್ಕೆ ಪಡೆಯಲಾಗುವುದು ಎಂದರು.</p>.ಮೆಕ್ಕೆಜೋಳ ಗೋದಾಮು ಅವಘಡ: 5 ಮೃತದೇಹ ಪತ್ತೆ– ಮುಂದುವರಿದ ಕಾರ್ಯಾಚರಣೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದ ರಾಜ್ ಗುರು ಫುಡ್ ಗೋದಾಮಿನಲ್ಲಿ ಮೆಕ್ಕೆಜೋಳ ಸಂಸ್ಕರಣ ಘಟಕ ಕುಸಿದು, ಅದರ ಅಡಿಯಲ್ಲಿ ಸಿಲುಕಿ ಸಾವನಪ್ಪಿರುವ ಕಾರ್ಮಿಕರ ಹೊರತೆಗೆಯುವ ಕಾರ್ಯಾಚರಣೆ ಅಂತಿಮ ಹಂತ ತಲುಪಿದೆ.</p><p>ಪುಣೆಯಿಂದ ಬೆಳಿಗ್ಗೆ ಘಟನಾ ಸ್ಥಳಕ್ಕೆ ಬಂದಿರುವ 30 ಜನರಿರುವ ಎನ್ ಡಿಆರ್ ಎಫ್ ತಂಡ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ.</p><p>ಬೆಳಿಗ್ಗೆ 10 ಗಂಟೆ ಬಳಿಕ ಮತ್ತಿಬ್ಬರು ಕಾರ್ಮಿಕರ ಶವ ಹೊರತೆಗೆದರು.</p><p>ಬಿಹಾರದ ಕೃಷ್ಣ ಕುಮಾರ್(28) ಮತ್ತು ಗುಲಾಲ್ ಚಂದ್ ಮುಖಿಯಾ(40)ಎಂದು ಗುರುತಿಸಲಾಗಿದೆ.</p><p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮಾತನಾಡಿ, ಈಗಾಗಲೇ ಏಳು ಕಾರ್ಮಿಕರ ಶವವನ್ನು ಹೊರತರಲಾಗಿದೆ. ಬಹುತೇಕ ಕಾರ್ಯಾಚರಣೆ ಮುಗಿದಿದೆ ಎಂದರು.</p><p>ದುರ್ಘಟನೆಗೆ ಕಾರಣರಾದ ಗೋದಾಮಿನ ಮಾಲೀಕ ಮತ್ತು</p><p>ಸೂಪರ್ ವೈಸರ್ ವಿರುದ್ಧ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ. ಆರೋಪಗಳನ್ನು ಶೀಘ್ರ ವಶಕ್ಕೆ ಪಡೆಯಲಾಗುವುದು ಎಂದರು.</p>.ಮೆಕ್ಕೆಜೋಳ ಗೋದಾಮು ಅವಘಡ: 5 ಮೃತದೇಹ ಪತ್ತೆ– ಮುಂದುವರಿದ ಕಾರ್ಯಾಚರಣೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>