ಗಣಿ ಗ್ರಾಮದ ಪಾರ್ವತವ್ವ ತಳವಾರ ಮತ್ತು ಸೋಮನಿಂಗಪ್ಪ ಕುಂಬಾರ ಎಂಬುವವರನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿ ಕಾಲುವೆಯಲ್ಲಿ ಎಸೆದು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಮಹಿಳೆಯ ಮಗ ಲಕ್ಷ್ಮಣ ತಳವಾರ ಹಾಗೂ ಕೊಲೆಗೆ ಸಹಕರಿಸಿದ ಆರೋಪಿ ಲಕ್ಷ್ಮಣನ ಸ್ನೇಹಿತರಾದ ಶಶಿಕುಮಾರ ಮಣಗೂರ ಮತ್ತು ಬಸವರಾಜ ಹಡಪದ ಅವರನ್ನು ಪೊಲೀಸರು ಬಂಧಿಸಿದ್ದಾರೆ.