<p><strong>ವಿಜಯಪುರ:</strong> ‘ಹಿಂದೂ ದೇವರಿಗೆ ಅಪಮಾನ, ಅಗೌರವ ತೋರುವ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಸಾಣೆಹಳ್ಳಿ ಶ್ರೀಗಳನ್ನು ಮೊದಲು ಜೈಲಿಗೆ ಹಾಕಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.</p>.<p>ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿಜಗುಣಾನಂದ ಸ್ವಾಮೀಜಿ ಹಿಂದೂ ದೇವತೆಗಳ ಬಗ್ಗೆ ನಾಲಿಗೆ ಹರಿಬಿಡುತ್ತಾರೆ. ಲಕ್ಷ್ಮಿದೇವಿಗೆ ಅಗೌರವದ ಮಾತು ಆಡಿದ್ದಾರೆ. ಹಿಂದೆ ಇಳಕಲ್ ಸ್ವಾಮೀಜಿ ಸಹ ಹೀಗೇ ಮಾತನಾಡಿದ್ದರು’ ಎಂದು ಹೇಳಿದರು.</p>.<p>‘ಕನೇರಿ ಶ್ರೀ ಕ್ಷಮೆ ಕೇಳುವುದಿಲ್ಲ. ಅವರಿಗೆ ನಿರ್ಬಂಧ ವಿಧಿಸಿರುವ ವಿಷಯವನ್ನು ಕೋರ್ಟ್ನಲ್ಲಿ ಪುನಃ ಪ್ರಶ್ನಿಸಿ ಅದರಲ್ಲಿ ಗೆಲುವು ಸಾಧಿಸುತ್ತೇವೆ. ಗೆಲುವು ಪಡೆದುಕೊಂಡೇ ಮೆರವಣಿಗೆಯೊಂದಿಗೆ ಅವರನ್ನು ವಿಜಯಪುರಕ್ಕೆ ಕರೆ ತರಲಾಗುವುದು’ ಎಂದರು.</p>.<p>‘ಧರ್ಮ ಒಡೆಯುವ ಹಾಗೂ ಕನೇರಿ ಶ್ರೀಗಳಿಗೆ ಅಗೌರವ ತೋರುತ್ತಿರುವ ಈ ನಿಮ್ಮ ನಾಟಕ ಕಂಪನಿ ಬಂದ್ ಮಾಡಿ, ಸುಮ್ಮನೆ ಇರಬೇಕು’ ಎಂದು ಅವರು ಇದೇ ಸಂದರ್ಭದಲ್ಲಿ ಸಚಿವ ಎಂ.ಬಿ.ಪಾಟೀಲ ಅವರಿಗೆ ಎಚ್ಚರಿಕೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ‘ಹಿಂದೂ ದೇವರಿಗೆ ಅಪಮಾನ, ಅಗೌರವ ತೋರುವ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಸಾಣೆಹಳ್ಳಿ ಶ್ರೀಗಳನ್ನು ಮೊದಲು ಜೈಲಿಗೆ ಹಾಕಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.</p>.<p>ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿಜಗುಣಾನಂದ ಸ್ವಾಮೀಜಿ ಹಿಂದೂ ದೇವತೆಗಳ ಬಗ್ಗೆ ನಾಲಿಗೆ ಹರಿಬಿಡುತ್ತಾರೆ. ಲಕ್ಷ್ಮಿದೇವಿಗೆ ಅಗೌರವದ ಮಾತು ಆಡಿದ್ದಾರೆ. ಹಿಂದೆ ಇಳಕಲ್ ಸ್ವಾಮೀಜಿ ಸಹ ಹೀಗೇ ಮಾತನಾಡಿದ್ದರು’ ಎಂದು ಹೇಳಿದರು.</p>.<p>‘ಕನೇರಿ ಶ್ರೀ ಕ್ಷಮೆ ಕೇಳುವುದಿಲ್ಲ. ಅವರಿಗೆ ನಿರ್ಬಂಧ ವಿಧಿಸಿರುವ ವಿಷಯವನ್ನು ಕೋರ್ಟ್ನಲ್ಲಿ ಪುನಃ ಪ್ರಶ್ನಿಸಿ ಅದರಲ್ಲಿ ಗೆಲುವು ಸಾಧಿಸುತ್ತೇವೆ. ಗೆಲುವು ಪಡೆದುಕೊಂಡೇ ಮೆರವಣಿಗೆಯೊಂದಿಗೆ ಅವರನ್ನು ವಿಜಯಪುರಕ್ಕೆ ಕರೆ ತರಲಾಗುವುದು’ ಎಂದರು.</p>.<p>‘ಧರ್ಮ ಒಡೆಯುವ ಹಾಗೂ ಕನೇರಿ ಶ್ರೀಗಳಿಗೆ ಅಗೌರವ ತೋರುತ್ತಿರುವ ಈ ನಿಮ್ಮ ನಾಟಕ ಕಂಪನಿ ಬಂದ್ ಮಾಡಿ, ಸುಮ್ಮನೆ ಇರಬೇಕು’ ಎಂದು ಅವರು ಇದೇ ಸಂದರ್ಭದಲ್ಲಿ ಸಚಿವ ಎಂ.ಬಿ.ಪಾಟೀಲ ಅವರಿಗೆ ಎಚ್ಚರಿಕೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>