‘ನನ್ನ ಕ್ಷೇತ್ರಕ್ಕೆ ನೀಡಿದ ಅನುದಾನ ಹಿಂಪಡೆದ ಕಾರಣ ನಗರದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಸದ್ಯ ಉತ್ತರ ಕರ್ನಾಟಕವರು ದಕ್ಷಿಣ ಕರ್ನಾಟಕದವರ ಮನೆ ಬಾಗಿಲು ಕಾಯುವ ಸ್ಥಿತಿ ಇದೆ. ಆದರೆ, ನಾನೇನು ಅಂಜುವುದಿಲ್ಲ, ಬೆಂಗಳೂರಿನವರೇ ನನ್ನ ಮನೆ ಬಾಗಿಲಿಗೆ ಬಂದು ನಿಲ್ಲುವಂತೆ ಮಾಡುತ್ತೇನೆ. ಅನುದಾನ ತಂದೇ ತರುತ್ತೇನೆ, ನಗರವನ್ನು ಅಭಿವೃದ್ಧಿ ಮಾಡಿಯೇ ತೀರುತ್ತೇನೆ, ಕಾದು ನೋಡಿ’ ಎಂದು ಸವಾಲು ಎಸೆದರು.