<p><strong>ವಿಜಯಪುರ: </strong>ಕೃಷಿ ಹೊಂಡಗಳ ಮಂಜೂರಾತಿ, ನಿರ್ಮಾಣ, ಪಂಪ್ಸೆಟ್ ಮತ್ತು ಪೈಪ್ಗಳ ವಿತರಣೆಗೆ ಸಂಬಂಧಿಸಿದಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಮಧ್ಯೆ ಜಟಾಪಟಿ ನಡೆಯಿತು.</p>.<p>ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೃಷಿ ಹೊಂಡಗಳ ಕುರಿತು ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.</p>.<p>ಸದಸ್ಯೆ ಭುವನೇಶ್ವರಿ ಬಗಲಿ ಮಾತನಾಡಿ, ‘ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಜುಲೈ ತಿಂಗಳಿನಲ್ಲಿ ಕೆಲವು ಮಾಹಿತಿ ಕೇಳಿದ್ದೇನೆ. ಇದುವರೆಗೂ ತಲುಪಿಸಿಲ್ಲ. ಹೀಗಾದರೆ ಹೇಗೆ, ಸದಸ್ಯರಿಗೆ ಗೌರವ ಇಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ನಿರ್ದೇಶಕ ಡಾ.ಶಿವಕುಮಾರ್, ‘ಇಲಾಖೆಯ ಲೆಕ್ಕ ಪರಿಶೋಧನೆ, ಬೆಳೆ ವಿಮೆ ಮಾಹಿತಿಯನ್ನು ಕ್ರೋಡೀಕರಿಸುತ್ತಿರುವ ಕಾರಣ ವಿಳಂಬವಾಗಿದೆ. ಸಂಜೆಯೊಳಗೆ ಮಾಹಿತಿ ನೀಡಲಾಗುವುದು’ ಎಂದರು.</p>.<p>ಇದಕ್ಕೆ ಒಪ್ಪದ ಭುವನೇಶ್ವರಿ, ‘ಕೇಳಿದ ಮಾಹಿತಿ ಕೊಡಲು ಇಷ್ಟುಸಮಯ ಬೇಕು ಅಂದರೆ ಹೇಗೆ,ಪ್ರತಿ ಬಾರಿಯೂ ನೀವು ಹೀಗೆಯೇಮಾಡುತ್ತೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಮಧ್ಯ ಪ್ರವೇಶಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದ ರೆಡ್ಡಿ, ‘ನೀವು ಕೇಳಿದ ಮಾಹಿತಿಯನ್ನು ಸಕಾಲಕ್ಕೆ ಕೊಡುವುದಿಲ್ಲ ಎಂಬುದು ನಿಮ್ಮ ಮೇಲಿನ ಮುಖ್ಯ ಆರೋಪವಾಗಿದೆ. ಎರಡು ದಿನದಲ್ಲಿ ಮಾಹಿತಿ ಕೊಡಬೇಕು’ ಎಂದು ಸೂಚಿಸಿದರು.</p>.<p>ಸದಸ್ಯ ಬಿ.ಆರ್.ಎಂಟಮಾನ ಮಾತನಾಡಿ, ‘ಕೃಷಿ ಹೊಂಡಗಳಿಗೆ ತಾಡಪತ್ರಿ, ಪಂಪ್ಸೆಟ್, ಪೈಪ್ಗಳನ್ನು ಕೊಟ್ಟಿಲ್ಲ. ನನ್ನ ಬಳಿ ಫಲಾನುಭವಿಯ ಮಾಹಿತಿ ಇದೆ. ಹೀಗಾದರೆ ಹೇಗೆ?’ ಎಂದು ಆಕ್ಷೇಪ ವ್ಯಕ್ತಪಡಿಸಿದರು.</p>.<p>ಸದಸ್ಯ ಮಹಾಂತಗೌಡ ಪಾಟೀಲ ಮಾತನಾಡಿ, ‘ನಿಮ್ಮ ಬಳಿಕೃಷಿ ಹೊಂಡದ ಮಾಹಿತಿಯೇ ಇಲ್ಲ. ಅಕ್ರಮ ಮತ್ತು ಸಕ್ರಮ ಹೊಂಡಗಳು ಎಷ್ಟಿವೆ ಹೇಳಿ’ ಎಂದು ಸವಾಲು ಹಾಕಿದರು.</p>.<p>ಇದಕ್ಕೆ ಉತ್ತರಿಸಿದ ಡಾ.ಶಿವಕುಮಾರ್, ‘2014–15ರಿಂದ ಇಲ್ಲಿಯವರೆಗೆ 13 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಮಳೆ ಆಗದ್ದರಿಂದ ಮತ್ತು ನೀರಿನ ಮೂಲ ಲಭ್ಯವಾಗದ ಕಾರಣ ರೈತರೇ ಒಪ್ಪಿಗೆ ಸೂಚಿಸಿ 249 ಕೃಷಿ ಹೊಂಡಗಳನ್ನು ಮುಚ್ಚಿಕೊಂಡಿದ್ದಾರೆ’ ಎಂದು ತಿಳಿಸಿದರು.</p>.<p>ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಕೃಷಿ ಹೊಂಡಗಳ ಮಂಜೂರಾತಿ, ನಿರ್ಮಾಣ, ಪಂಪ್ಸೆಟ್ ಮತ್ತು ಪೈಪ್ಗಳ ವಿತರಣೆಗೆ ಸಂಬಂಧಿಸಿದಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಮಧ್ಯೆ ಜಟಾಪಟಿ ನಡೆಯಿತು.</p>.<p>ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೃಷಿ ಹೊಂಡಗಳ ಕುರಿತು ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.</p>.<p>ಸದಸ್ಯೆ ಭುವನೇಶ್ವರಿ ಬಗಲಿ ಮಾತನಾಡಿ, ‘ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಜುಲೈ ತಿಂಗಳಿನಲ್ಲಿ ಕೆಲವು ಮಾಹಿತಿ ಕೇಳಿದ್ದೇನೆ. ಇದುವರೆಗೂ ತಲುಪಿಸಿಲ್ಲ. ಹೀಗಾದರೆ ಹೇಗೆ, ಸದಸ್ಯರಿಗೆ ಗೌರವ ಇಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ನಿರ್ದೇಶಕ ಡಾ.ಶಿವಕುಮಾರ್, ‘ಇಲಾಖೆಯ ಲೆಕ್ಕ ಪರಿಶೋಧನೆ, ಬೆಳೆ ವಿಮೆ ಮಾಹಿತಿಯನ್ನು ಕ್ರೋಡೀಕರಿಸುತ್ತಿರುವ ಕಾರಣ ವಿಳಂಬವಾಗಿದೆ. ಸಂಜೆಯೊಳಗೆ ಮಾಹಿತಿ ನೀಡಲಾಗುವುದು’ ಎಂದರು.</p>.<p>ಇದಕ್ಕೆ ಒಪ್ಪದ ಭುವನೇಶ್ವರಿ, ‘ಕೇಳಿದ ಮಾಹಿತಿ ಕೊಡಲು ಇಷ್ಟುಸಮಯ ಬೇಕು ಅಂದರೆ ಹೇಗೆ,ಪ್ರತಿ ಬಾರಿಯೂ ನೀವು ಹೀಗೆಯೇಮಾಡುತ್ತೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಮಧ್ಯ ಪ್ರವೇಶಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದ ರೆಡ್ಡಿ, ‘ನೀವು ಕೇಳಿದ ಮಾಹಿತಿಯನ್ನು ಸಕಾಲಕ್ಕೆ ಕೊಡುವುದಿಲ್ಲ ಎಂಬುದು ನಿಮ್ಮ ಮೇಲಿನ ಮುಖ್ಯ ಆರೋಪವಾಗಿದೆ. ಎರಡು ದಿನದಲ್ಲಿ ಮಾಹಿತಿ ಕೊಡಬೇಕು’ ಎಂದು ಸೂಚಿಸಿದರು.</p>.<p>ಸದಸ್ಯ ಬಿ.ಆರ್.ಎಂಟಮಾನ ಮಾತನಾಡಿ, ‘ಕೃಷಿ ಹೊಂಡಗಳಿಗೆ ತಾಡಪತ್ರಿ, ಪಂಪ್ಸೆಟ್, ಪೈಪ್ಗಳನ್ನು ಕೊಟ್ಟಿಲ್ಲ. ನನ್ನ ಬಳಿ ಫಲಾನುಭವಿಯ ಮಾಹಿತಿ ಇದೆ. ಹೀಗಾದರೆ ಹೇಗೆ?’ ಎಂದು ಆಕ್ಷೇಪ ವ್ಯಕ್ತಪಡಿಸಿದರು.</p>.<p>ಸದಸ್ಯ ಮಹಾಂತಗೌಡ ಪಾಟೀಲ ಮಾತನಾಡಿ, ‘ನಿಮ್ಮ ಬಳಿಕೃಷಿ ಹೊಂಡದ ಮಾಹಿತಿಯೇ ಇಲ್ಲ. ಅಕ್ರಮ ಮತ್ತು ಸಕ್ರಮ ಹೊಂಡಗಳು ಎಷ್ಟಿವೆ ಹೇಳಿ’ ಎಂದು ಸವಾಲು ಹಾಕಿದರು.</p>.<p>ಇದಕ್ಕೆ ಉತ್ತರಿಸಿದ ಡಾ.ಶಿವಕುಮಾರ್, ‘2014–15ರಿಂದ ಇಲ್ಲಿಯವರೆಗೆ 13 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಮಳೆ ಆಗದ್ದರಿಂದ ಮತ್ತು ನೀರಿನ ಮೂಲ ಲಭ್ಯವಾಗದ ಕಾರಣ ರೈತರೇ ಒಪ್ಪಿಗೆ ಸೂಚಿಸಿ 249 ಕೃಷಿ ಹೊಂಡಗಳನ್ನು ಮುಚ್ಚಿಕೊಂಡಿದ್ದಾರೆ’ ಎಂದು ತಿಳಿಸಿದರು.</p>.<p>ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>