<p>ತಾಳಿಕೋಟೆ: ವೆಜಾಮಠ, ಎಜಾಮಾರ, ವಿಜಾಮರ ಯುತ್ತೆಬಿರಾಳ, ಇವು ಜಗತ್ತಿನಲ್ಲಿ ಎಲ್ಲಿವೆ ಎಂದು ತೋರಿಸಿಕೊಟ್ಟವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ಘೋಷಣೆಯಾಗಿದೆ.<br /> <br /> ನಿಲ್ಲಿ! ಖುಷಿಯಿಂದ ಪ್ರಪಂಚದ ನಕ್ಷೆ ಹಿಡಿದು ಹುಡುಕಲು ಹೊರಟಿರಾ, ಇಲ್ಲಾ ಗೂಗಲ್ ಮ್ಯಾಪ್ನಲ್ಲಿ ಪ್ರಯತ್ನಿಸಬೇಕೆಂದಿರಾ?<br /> <br /> ನಿಮಗೆ ಸಾಧ್ಯವಿಲ್ಲ! ಇವು ಬ್ರಹ್ಮಾಂಡದಲ್ಲಿ ಎಲ್ಲಿಯೂ ಇಲ್ಲ. ಹೀಗಾಗಿ ನಿಮಗೆ ನಿರಾಶೆ ಖಂಡಿತ. ಬಹುಮಾನಕ್ಕೂ ಕೊಕ್ಕೆ.<br /> <br /> ಏಕೆಂದರೆ ಇವು ಕನ್ನಡದ ಬರವಣಿಗೆಯಲ್ಲಿ ನಡೆದ ಕಗ್ಗೊಲೆಯಿಂದ ಆದ ಸ್ಥಿತಿ. ಹೀಗಾಗಿ ನಾವು ಇದನ್ನು ಕನ್ನಡ ಕನ್ನಡ ಹಾ(ಸ್ಯವೀ)ಸವಿಗನ್ನಡ, ಕನ್ನಡದಲಿ ಕ(ಪಿ)ವಿ ಬರೆಯುವನು ಎಂದು ರಾಷ್ಟ್ರಕವಿ ಕುವೆಂಪು ಅವರಲ್ಲಿ ಕ್ಷಮೆ ಕೋರಿ ಹಾಡುವಂತಾಗಿದೆ. <br /> <br /> ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆಯಡಿ ವಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಹಡಗಿನಾಳ ರಸ್ತೆ ನಿರ್ಮಾಣ ಕುರಿತು ಹಾಕಿರುವ ಎರಡು ಫಲಕಗಳಲ್ಲಿ ಇಷ್ಟು ದೊಡ್ಡ ತಪ್ಪುಗಳನ್ನು ಮಾಡಲಾಗಿದೆ. <br /> <br /> ವಿಜಾಪುರ ಜಿಲ್ಲೆಯನ್ನು `ವೆಜಾಮಠ, ಎಜಾಮಾರ, ವಿಜಾಮರ~ಗಳೆಂದು ಬದಲಾಗಿದ್ದರೆ, ಮುದ್ದೇಬಿಹಾಳ ತಾಲ್ಲೂಕು `ಯುತ್ತೆಬಿರಾಳ~ ಆಗಿದೆ. ಹಡಗಿನಾಳ ಗ್ರಾಮ `ಹವಗಿನಾಳ ಹಾಗೂ ತಾಡಗಿನಾಳ~ ಎಂದು ಕರೆಸಿಕೊಂಡಿವೆ. <br /> <br /> ಒಂದು ಫಲಕದಲ್ಲಿ ಪ್ರಾರಂಭದಿಂದಲೇ ಕನ್ನಡ ನುಡಿಯ ಕೊಲೆ ಆಗಿದೆ. ಇಲ್ಲಿ ಕಂಸದಲ್ಲಿ ಸರಿಯಾದ ಪದವನ್ನು ಬರೆದಿದೆ. ವ್ರಧಾನ (ಪ್ರಧಾನ), ಸಡಕ (ಸಡಕ್), ಯೋಜನ (ಯೋಜನೆ)<br /> ಕಲಸದ (ಕೆಲಸದ), ಎಜಾಮಾರ (ವಿಜಾಪುರ), ಯುತ್ತೆಬಿರಾಳ (ಮುದ್ದೇಬಿಹಾಳ), ತಾಊಕಿನ (ತಾಲೂಕಿನ), ಹವಗಿನಾಳ (ಹಡಗಿನಾಳ), ದಿಂದಟೆ-01ವರಗೆಗೊಂಡ (ಇದು ಏನೆಂದು ನಮಗೂ ಅರ್ಥವಾಗಿಲ್ಲ), ಸುದಾರಣೆ (ಸುಧಾರಣೆ), ವ್ಯಾಕೇಜ(ಪ್ಯಾಕೇಜ್), ಇನ್ (ಎನ್), ರಸೆಯ (ರಸ್ತೆಯ), ಪೋಲಿಸ್ಪಾಟಿಲ (ಪೊಲೀಸ್ಪಾಟೀಲ), ಎಲಾಖೆ (ಇಲಾಖೆ), ನೆರ್ವಾಹಕ (ನಿರ್ವಾಹಕ), ವಿಬಾಗ (ವಿಭಾಗ), ವಿಜಾಮಾರ (ವಿಜಾಪುರ) ಎಂದು ಬರೆಯಲಾಗಿದೆ. <br /> <br /> ಇನ್ನು ಇನ್ನೊಂದು ಫಲಕದಲ್ಲಿ ವೆಜಾಮಠ (ವಿಜಾಪುರ), ಹಸರು (ಹೆಸರು), ತಾಡಗಿನಾಳ (ಹಡಗಿನಾಳ), ತರಗೆ (ವರೆಗೆ), ಅಂಡಜು (ಅಂದಾಜು). ಎಂದು ಮುದ್ರಿಸಲಾಗಿದೆ.<br /> <br /> ಕರ್ನಾಟಕದಲ್ಲಿ ಕನ್ನಡದ ಬಗ್ಗೆ ಸರ್ಕಾರದ ಇಲಾಖೆಗಳಿಂದಲೇ ತಪ್ಪು-ತಪ್ಪಾಗಿ ಮುದ್ರಿಸಿದರೆ ಹೇಗೆ ಯಾರಿಗೆ ದೂರುವುದು. ಮುಂದಾದರೂ ಹೀಗಾಗದಂತೆ ಮುಂಜಾಗ್ರತೆ ವಹಿಸಬೇಕು. ಪ್ರಸ್ತುತ ಕಾಗುಣಿತ ದೋಷವಿಲ್ಲದ ಫಲಕ ಹಾಕಿ ಎಂಬುದು ಕನ್ನಡ ಪ್ರೇಮಿಗಳ ಬೇಡಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಾಳಿಕೋಟೆ: ವೆಜಾಮಠ, ಎಜಾಮಾರ, ವಿಜಾಮರ ಯುತ್ತೆಬಿರಾಳ, ಇವು ಜಗತ್ತಿನಲ್ಲಿ ಎಲ್ಲಿವೆ ಎಂದು ತೋರಿಸಿಕೊಟ್ಟವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ಘೋಷಣೆಯಾಗಿದೆ.<br /> <br /> ನಿಲ್ಲಿ! ಖುಷಿಯಿಂದ ಪ್ರಪಂಚದ ನಕ್ಷೆ ಹಿಡಿದು ಹುಡುಕಲು ಹೊರಟಿರಾ, ಇಲ್ಲಾ ಗೂಗಲ್ ಮ್ಯಾಪ್ನಲ್ಲಿ ಪ್ರಯತ್ನಿಸಬೇಕೆಂದಿರಾ?<br /> <br /> ನಿಮಗೆ ಸಾಧ್ಯವಿಲ್ಲ! ಇವು ಬ್ರಹ್ಮಾಂಡದಲ್ಲಿ ಎಲ್ಲಿಯೂ ಇಲ್ಲ. ಹೀಗಾಗಿ ನಿಮಗೆ ನಿರಾಶೆ ಖಂಡಿತ. ಬಹುಮಾನಕ್ಕೂ ಕೊಕ್ಕೆ.<br /> <br /> ಏಕೆಂದರೆ ಇವು ಕನ್ನಡದ ಬರವಣಿಗೆಯಲ್ಲಿ ನಡೆದ ಕಗ್ಗೊಲೆಯಿಂದ ಆದ ಸ್ಥಿತಿ. ಹೀಗಾಗಿ ನಾವು ಇದನ್ನು ಕನ್ನಡ ಕನ್ನಡ ಹಾ(ಸ್ಯವೀ)ಸವಿಗನ್ನಡ, ಕನ್ನಡದಲಿ ಕ(ಪಿ)ವಿ ಬರೆಯುವನು ಎಂದು ರಾಷ್ಟ್ರಕವಿ ಕುವೆಂಪು ಅವರಲ್ಲಿ ಕ್ಷಮೆ ಕೋರಿ ಹಾಡುವಂತಾಗಿದೆ. <br /> <br /> ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆಯಡಿ ವಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಹಡಗಿನಾಳ ರಸ್ತೆ ನಿರ್ಮಾಣ ಕುರಿತು ಹಾಕಿರುವ ಎರಡು ಫಲಕಗಳಲ್ಲಿ ಇಷ್ಟು ದೊಡ್ಡ ತಪ್ಪುಗಳನ್ನು ಮಾಡಲಾಗಿದೆ. <br /> <br /> ವಿಜಾಪುರ ಜಿಲ್ಲೆಯನ್ನು `ವೆಜಾಮಠ, ಎಜಾಮಾರ, ವಿಜಾಮರ~ಗಳೆಂದು ಬದಲಾಗಿದ್ದರೆ, ಮುದ್ದೇಬಿಹಾಳ ತಾಲ್ಲೂಕು `ಯುತ್ತೆಬಿರಾಳ~ ಆಗಿದೆ. ಹಡಗಿನಾಳ ಗ್ರಾಮ `ಹವಗಿನಾಳ ಹಾಗೂ ತಾಡಗಿನಾಳ~ ಎಂದು ಕರೆಸಿಕೊಂಡಿವೆ. <br /> <br /> ಒಂದು ಫಲಕದಲ್ಲಿ ಪ್ರಾರಂಭದಿಂದಲೇ ಕನ್ನಡ ನುಡಿಯ ಕೊಲೆ ಆಗಿದೆ. ಇಲ್ಲಿ ಕಂಸದಲ್ಲಿ ಸರಿಯಾದ ಪದವನ್ನು ಬರೆದಿದೆ. ವ್ರಧಾನ (ಪ್ರಧಾನ), ಸಡಕ (ಸಡಕ್), ಯೋಜನ (ಯೋಜನೆ)<br /> ಕಲಸದ (ಕೆಲಸದ), ಎಜಾಮಾರ (ವಿಜಾಪುರ), ಯುತ್ತೆಬಿರಾಳ (ಮುದ್ದೇಬಿಹಾಳ), ತಾಊಕಿನ (ತಾಲೂಕಿನ), ಹವಗಿನಾಳ (ಹಡಗಿನಾಳ), ದಿಂದಟೆ-01ವರಗೆಗೊಂಡ (ಇದು ಏನೆಂದು ನಮಗೂ ಅರ್ಥವಾಗಿಲ್ಲ), ಸುದಾರಣೆ (ಸುಧಾರಣೆ), ವ್ಯಾಕೇಜ(ಪ್ಯಾಕೇಜ್), ಇನ್ (ಎನ್), ರಸೆಯ (ರಸ್ತೆಯ), ಪೋಲಿಸ್ಪಾಟಿಲ (ಪೊಲೀಸ್ಪಾಟೀಲ), ಎಲಾಖೆ (ಇಲಾಖೆ), ನೆರ್ವಾಹಕ (ನಿರ್ವಾಹಕ), ವಿಬಾಗ (ವಿಭಾಗ), ವಿಜಾಮಾರ (ವಿಜಾಪುರ) ಎಂದು ಬರೆಯಲಾಗಿದೆ. <br /> <br /> ಇನ್ನು ಇನ್ನೊಂದು ಫಲಕದಲ್ಲಿ ವೆಜಾಮಠ (ವಿಜಾಪುರ), ಹಸರು (ಹೆಸರು), ತಾಡಗಿನಾಳ (ಹಡಗಿನಾಳ), ತರಗೆ (ವರೆಗೆ), ಅಂಡಜು (ಅಂದಾಜು). ಎಂದು ಮುದ್ರಿಸಲಾಗಿದೆ.<br /> <br /> ಕರ್ನಾಟಕದಲ್ಲಿ ಕನ್ನಡದ ಬಗ್ಗೆ ಸರ್ಕಾರದ ಇಲಾಖೆಗಳಿಂದಲೇ ತಪ್ಪು-ತಪ್ಪಾಗಿ ಮುದ್ರಿಸಿದರೆ ಹೇಗೆ ಯಾರಿಗೆ ದೂರುವುದು. ಮುಂದಾದರೂ ಹೀಗಾಗದಂತೆ ಮುಂಜಾಗ್ರತೆ ವಹಿಸಬೇಕು. ಪ್ರಸ್ತುತ ಕಾಗುಣಿತ ದೋಷವಿಲ್ಲದ ಫಲಕ ಹಾಕಿ ಎಂಬುದು ಕನ್ನಡ ಪ್ರೇಮಿಗಳ ಬೇಡಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>