<p><strong>ಸಿಂದಗಿ:</strong> `ಜಾತಿ ಜಾಗೃತಿ ಸಮಾವೇಶಗಳು ಆಗಾಗ್ಗೆ ನಡೆಯುತ್ತಲೇ ಇರಬೇಕು. ಆದರೆ ಈ ಸಮಾವೇಶಗಳು ಅನ್ಯ ಸಮುದಾಯಕ್ಕೆ ನೋವುಂಟು ಮಾಡದಂತಿರಬೇಕು~ ಎಂದು ಶಾಸಕ ರಮೇಶ ಭೂಸನೂರ ಸಲಹೆ ನೀಡಿದರು.<br /> <br /> ಪಟ್ಟಣದಲ್ಲಿ ಬಸ್ ನಿಲ್ದಾಣದ ಎದುರಿನ ಶಾಲಾ ಮೈದಾನದಲ್ಲಿ ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ದಲಿತ ಹಿತರಕ್ಷಣಾ ಹೋರಾಟ ಸಮಿತಿ ಹಮ್ಮಿಕೊಂಡಿದ್ದ `ಮಾದಿಗರ ಮಹಾ ಜನ ಜಾಗೃತಿ ಸಮಾವೇಶ~ವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಬಿಜೆಪಿ ಸರ್ಕಾರ ಏನೆಲ್ಲ ಸರ್ಕಾರಿ ಯೋಜನೆಗಳನ್ನು ದಲಿತರ ಮನೆ ಬಾಗಿಲಿಗೆ ಮುಟ್ಟಿಸಿದ ಏಕಮೇವ ಸರ್ಕಾರ ಎಂದು ಸಮರ್ಥಿಸಿಕೊಂಡರು.<br /> <br /> 30 ಜಿಲ್ಲೆಯಲ್ಲಿ ಅಂಬೇಡ್ಕರ್ ಭವನ, ಜಗಜೀವನರಾನ ಭವನ, ಸೇವಾಲಾಲ ಭವನ, ವಾಲ್ಮೀಕಿ ಭವನಗಳ ನಿರ್ಮಾಣಕ್ಕಾಗಿ ಒಂದು ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ. ಅಲ್ಲದೇ ದಲಿತ ಸಣ್ಣ ರೈತರಿಗಾಗಿ ಉಚಿತವಾಗಿ ನೀರಾವರಿ ಸೌಲಭ್ಯ ಒದಗಿಸಿಕೊಟ್ಟಿದೆ ಎಂದು ತಿಳಿಸಿದರು.<br /> <br /> ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ದೇಶವನ್ನು ಗೌರವಿಸುವ ಜನ ದೇಶದ ಕಾನೂನನ್ನು ಗೌರವಿಸದಿರುವುದು ಅತ್ಯಂತ ದುರಂತವೇ ಸರಿ ಎಂದು ವಿಷಾದಿಸಿದರು.<br /> <br /> ಪಟ್ಟಣದಲ್ಲಿ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರೂ. 25 ಲಕ್ಷ ಅನುದಾನ ಬಿಡುಗಡೆಗೊಳಿಸಲು ಶ್ರಮಿಸಿದ ಶಾಸಕ ರಮೇಶ ಭೂಸನೂರ ಅವರನ್ನು ಅಭಿನಂದಿಸುವುದಾಗಿ ಹೇಳಿದರು.<br /> <br /> ಜಿ.ಪಂ. ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ ಅಧ್ಯಕ್ಷತೆ ವಹಿಸಿದ್ದರು. ಮುರಗೆಪ್ಪಗೌಡ ರದ್ದೇವಾಡಗಿ, ದಲಿತ ಮುಖಂಡರಾದ ತಿಪ್ಪಣ್ಣ ಮಾದರ, ಸಮಾವೇಶದ ರೂವಾರಿ ಮಲ್ಲೇಶಿ ಕೆರೂರ, ಅರ್ಜುನ ಗುಡಿಮನಿ, ಎಸ್.ಎಂ. ನಾಯ್ಕೋಡಿ, ರಾಜೂ ಮಾದರ ಮಾತನಾಡಿದರು.<br /> <br /> ಪುರಸಭೆ ಅಧ್ಯಕ್ಷ ಸುಶಾಂತ ಪೂಜಾರಿ, ಜಿ.ಪಂ. ಸದಸ್ಯ ಯಲ್ಲಪ್ಪ ಹಾದಿಮನಿ, ಈರಗಂಟೆಪ್ಪ ಮಾಗಣಗೇರಿ, ಶ್ರೀಕಾಂತ ಸೋಮಜಾಳ, ಶಿವಾನಂದ ಮಾರ್ಸನಳ್ಳಿ, ಶಂಕ್ರಪ್ಪ ಮಡ್ನಳ್ಳಿ ವೇದಿಕೆಯಲ್ಲಿದ್ದರು. <br /> <br /> ಅವ್ಯವಸ್ಥೆಯ ಆಗರವಾದ ಸಮಾವೇಶ: ಸಮಾವೇಶ ಮುಂಜಾನೆ 10-30 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ ಶುರು ಆಗಿದ್ದು ಸಂಜೆ 4 ಗಂಟೆಗೆ. ಸಮಾವೇಶದಲ್ಲಿ ಗುಂಡಣ್ಣ(ಕುಡುಕರು)ಗಳ ಹಾವಳಿ ವಿಪರೀತವಾಗಿತ್ತು. ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿದ್ದ ಪ್ರಮುಖರೇ ಬಂದಿರಲಿಲ್ಲ.<br /> ದತ್ತು ಹೊಸಮನಿ ಸ್ವಾಗತಿಸಿದರು. ಸಾಯಿಕುಮಾರ ಬಿಸನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ:</strong> `ಜಾತಿ ಜಾಗೃತಿ ಸಮಾವೇಶಗಳು ಆಗಾಗ್ಗೆ ನಡೆಯುತ್ತಲೇ ಇರಬೇಕು. ಆದರೆ ಈ ಸಮಾವೇಶಗಳು ಅನ್ಯ ಸಮುದಾಯಕ್ಕೆ ನೋವುಂಟು ಮಾಡದಂತಿರಬೇಕು~ ಎಂದು ಶಾಸಕ ರಮೇಶ ಭೂಸನೂರ ಸಲಹೆ ನೀಡಿದರು.<br /> <br /> ಪಟ್ಟಣದಲ್ಲಿ ಬಸ್ ನಿಲ್ದಾಣದ ಎದುರಿನ ಶಾಲಾ ಮೈದಾನದಲ್ಲಿ ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ದಲಿತ ಹಿತರಕ್ಷಣಾ ಹೋರಾಟ ಸಮಿತಿ ಹಮ್ಮಿಕೊಂಡಿದ್ದ `ಮಾದಿಗರ ಮಹಾ ಜನ ಜಾಗೃತಿ ಸಮಾವೇಶ~ವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಬಿಜೆಪಿ ಸರ್ಕಾರ ಏನೆಲ್ಲ ಸರ್ಕಾರಿ ಯೋಜನೆಗಳನ್ನು ದಲಿತರ ಮನೆ ಬಾಗಿಲಿಗೆ ಮುಟ್ಟಿಸಿದ ಏಕಮೇವ ಸರ್ಕಾರ ಎಂದು ಸಮರ್ಥಿಸಿಕೊಂಡರು.<br /> <br /> 30 ಜಿಲ್ಲೆಯಲ್ಲಿ ಅಂಬೇಡ್ಕರ್ ಭವನ, ಜಗಜೀವನರಾನ ಭವನ, ಸೇವಾಲಾಲ ಭವನ, ವಾಲ್ಮೀಕಿ ಭವನಗಳ ನಿರ್ಮಾಣಕ್ಕಾಗಿ ಒಂದು ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ. ಅಲ್ಲದೇ ದಲಿತ ಸಣ್ಣ ರೈತರಿಗಾಗಿ ಉಚಿತವಾಗಿ ನೀರಾವರಿ ಸೌಲಭ್ಯ ಒದಗಿಸಿಕೊಟ್ಟಿದೆ ಎಂದು ತಿಳಿಸಿದರು.<br /> <br /> ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ದೇಶವನ್ನು ಗೌರವಿಸುವ ಜನ ದೇಶದ ಕಾನೂನನ್ನು ಗೌರವಿಸದಿರುವುದು ಅತ್ಯಂತ ದುರಂತವೇ ಸರಿ ಎಂದು ವಿಷಾದಿಸಿದರು.<br /> <br /> ಪಟ್ಟಣದಲ್ಲಿ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರೂ. 25 ಲಕ್ಷ ಅನುದಾನ ಬಿಡುಗಡೆಗೊಳಿಸಲು ಶ್ರಮಿಸಿದ ಶಾಸಕ ರಮೇಶ ಭೂಸನೂರ ಅವರನ್ನು ಅಭಿನಂದಿಸುವುದಾಗಿ ಹೇಳಿದರು.<br /> <br /> ಜಿ.ಪಂ. ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ ಅಧ್ಯಕ್ಷತೆ ವಹಿಸಿದ್ದರು. ಮುರಗೆಪ್ಪಗೌಡ ರದ್ದೇವಾಡಗಿ, ದಲಿತ ಮುಖಂಡರಾದ ತಿಪ್ಪಣ್ಣ ಮಾದರ, ಸಮಾವೇಶದ ರೂವಾರಿ ಮಲ್ಲೇಶಿ ಕೆರೂರ, ಅರ್ಜುನ ಗುಡಿಮನಿ, ಎಸ್.ಎಂ. ನಾಯ್ಕೋಡಿ, ರಾಜೂ ಮಾದರ ಮಾತನಾಡಿದರು.<br /> <br /> ಪುರಸಭೆ ಅಧ್ಯಕ್ಷ ಸುಶಾಂತ ಪೂಜಾರಿ, ಜಿ.ಪಂ. ಸದಸ್ಯ ಯಲ್ಲಪ್ಪ ಹಾದಿಮನಿ, ಈರಗಂಟೆಪ್ಪ ಮಾಗಣಗೇರಿ, ಶ್ರೀಕಾಂತ ಸೋಮಜಾಳ, ಶಿವಾನಂದ ಮಾರ್ಸನಳ್ಳಿ, ಶಂಕ್ರಪ್ಪ ಮಡ್ನಳ್ಳಿ ವೇದಿಕೆಯಲ್ಲಿದ್ದರು. <br /> <br /> ಅವ್ಯವಸ್ಥೆಯ ಆಗರವಾದ ಸಮಾವೇಶ: ಸಮಾವೇಶ ಮುಂಜಾನೆ 10-30 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ ಶುರು ಆಗಿದ್ದು ಸಂಜೆ 4 ಗಂಟೆಗೆ. ಸಮಾವೇಶದಲ್ಲಿ ಗುಂಡಣ್ಣ(ಕುಡುಕರು)ಗಳ ಹಾವಳಿ ವಿಪರೀತವಾಗಿತ್ತು. ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿದ್ದ ಪ್ರಮುಖರೇ ಬಂದಿರಲಿಲ್ಲ.<br /> ದತ್ತು ಹೊಸಮನಿ ಸ್ವಾಗತಿಸಿದರು. ಸಾಯಿಕುಮಾರ ಬಿಸನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>