<p><strong>ಬೆಂಗಳೂರು:</strong> ವಿಜಾಪುರ ಜಿಲ್ಲೆಯ ಇಂಡಿಯ ಅಂಜುಮನ್- ಎ- ಇಸ್ಲಾಮಿಯಾ ಸಂಸ್ಥೆಗೆ ಚುನಾವಣೆ ನಡೆಸಿ, ಫಲಿತಾಂಶ ಪ್ರಕಟಿಸಲು ಹೈಕೋರ್ಟ್ ಜುಲೈ 15ರ ಗಡುವು ನೀಡಿದೆ. ಮೇ 31ರ ಒಳಗೆ ಮತದಾರರ ಪಟ್ಟಿ ತಯಾರಿಸುವಂತೆ, ಆ ನಂತರದ ಒಂದು ವಾರದಲ್ಲಿ ಚುನಾವಣಾ ವೇಳಾಪಟ್ಟಿ ಹೊರಡಿಸುವಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ಎ.ಎಸ್. ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.<br /> <br /> ಅಂತೆಯೇ, ‘ಅಂಜುಮನ್- ಎ- ಇಸ್ಲಾಮಿಯಾ ಸಮಿತಿ’ ಎಂಬ ಹೆಸರಿನ ಬದಲು ಈ ಸಂಸ್ಥೆಗೆ ‘ಅಂಜುಮನ್- ಎ- ಇಸ್ಲಾಮಿಯಾ, ಇಂಡಿ’ ಎಂದು ಬದಲಾಯಿಸಲು ನ್ಯಾಯಮೂರ್ತಿ ಗಳು ಅರ್ಜಿ ದಾರರಿಗೆ ಅನುಮತಿ ನೀಡಿದ್ದಾರೆ. <br /> <br /> ಹೆಸರು ಬದಲಾವಣೆ, ಶೀಘ್ರ ಚುನಾವಣೆ ಇತ್ಯಾದಿ ಕೋರಿಕೆ ಇಟ್ಟು ಸಲ್ಲಿಸಲಾದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಗಳು ನಡೆಸಿದರು. ಕೋರ್ಟ್ ನೀಡಿರುವ ಗಡುವಿನ ಒಳಗೆ ಚುನಾವಣೆ ನಡೆದಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು. ಒಂದು ವೇಳೆ ಚುನಾವಣೆ ಈ ಅವಧಿಯಲ್ಲಿ ನಡೆಯದೇ ಹೋದರೆ, ಅರ್ಜಿಯ ವಿಚಾರಣೆಯನ್ನು ಮುಂದುವರಿಸಿ, ಈ ಕುರಿತು ಸೂಕ್ತ ಕ್ರಮ ತೆಗೆದು ಕೊಳ್ಳಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದಾರೆ.<br /> <br /> ಇದೇ ರೀತಿ, ಸಂಸ್ಥೆಯಲ್ಲಿ ಹಿಂದಿನ ಆಡಳಿತ ಮಂಡಳಿ ಅವ್ಯವಹಾರ ನಡೆಸಿರುವ ಬಗ್ಗೆ ತನಿಖೆಗೆ ಕೋರಿ ಸಲ್ಲಿಸಿರುವ ಇನ್ನೊಂದು ಅರ್ಜಿಯನ್ನು ಪೀಠ ಇತ್ಯರ್ಥಗೊಳಿಸಿದೆ.ಹೊಸ ಆಡಳಿತ ಮಂಡಳಿ ಮುಂದೆ ಈ ಕುರಿತು ಮನವಿ ಸಲ್ಲಿಸಿ, ವಿವಾದ ಬಗೆಹರಿಸಿ ಕೊಳ್ಳುವಂತೆ ನ್ಯಾಯ ಮೂರ್ತಿಗಳು ನಿರ್ದೇಶಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವಿಜಾಪುರ ಜಿಲ್ಲೆಯ ಇಂಡಿಯ ಅಂಜುಮನ್- ಎ- ಇಸ್ಲಾಮಿಯಾ ಸಂಸ್ಥೆಗೆ ಚುನಾವಣೆ ನಡೆಸಿ, ಫಲಿತಾಂಶ ಪ್ರಕಟಿಸಲು ಹೈಕೋರ್ಟ್ ಜುಲೈ 15ರ ಗಡುವು ನೀಡಿದೆ. ಮೇ 31ರ ಒಳಗೆ ಮತದಾರರ ಪಟ್ಟಿ ತಯಾರಿಸುವಂತೆ, ಆ ನಂತರದ ಒಂದು ವಾರದಲ್ಲಿ ಚುನಾವಣಾ ವೇಳಾಪಟ್ಟಿ ಹೊರಡಿಸುವಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ಎ.ಎಸ್. ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.<br /> <br /> ಅಂತೆಯೇ, ‘ಅಂಜುಮನ್- ಎ- ಇಸ್ಲಾಮಿಯಾ ಸಮಿತಿ’ ಎಂಬ ಹೆಸರಿನ ಬದಲು ಈ ಸಂಸ್ಥೆಗೆ ‘ಅಂಜುಮನ್- ಎ- ಇಸ್ಲಾಮಿಯಾ, ಇಂಡಿ’ ಎಂದು ಬದಲಾಯಿಸಲು ನ್ಯಾಯಮೂರ್ತಿ ಗಳು ಅರ್ಜಿ ದಾರರಿಗೆ ಅನುಮತಿ ನೀಡಿದ್ದಾರೆ. <br /> <br /> ಹೆಸರು ಬದಲಾವಣೆ, ಶೀಘ್ರ ಚುನಾವಣೆ ಇತ್ಯಾದಿ ಕೋರಿಕೆ ಇಟ್ಟು ಸಲ್ಲಿಸಲಾದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಗಳು ನಡೆಸಿದರು. ಕೋರ್ಟ್ ನೀಡಿರುವ ಗಡುವಿನ ಒಳಗೆ ಚುನಾವಣೆ ನಡೆದಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು. ಒಂದು ವೇಳೆ ಚುನಾವಣೆ ಈ ಅವಧಿಯಲ್ಲಿ ನಡೆಯದೇ ಹೋದರೆ, ಅರ್ಜಿಯ ವಿಚಾರಣೆಯನ್ನು ಮುಂದುವರಿಸಿ, ಈ ಕುರಿತು ಸೂಕ್ತ ಕ್ರಮ ತೆಗೆದು ಕೊಳ್ಳಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದಾರೆ.<br /> <br /> ಇದೇ ರೀತಿ, ಸಂಸ್ಥೆಯಲ್ಲಿ ಹಿಂದಿನ ಆಡಳಿತ ಮಂಡಳಿ ಅವ್ಯವಹಾರ ನಡೆಸಿರುವ ಬಗ್ಗೆ ತನಿಖೆಗೆ ಕೋರಿ ಸಲ್ಲಿಸಿರುವ ಇನ್ನೊಂದು ಅರ್ಜಿಯನ್ನು ಪೀಠ ಇತ್ಯರ್ಥಗೊಳಿಸಿದೆ.ಹೊಸ ಆಡಳಿತ ಮಂಡಳಿ ಮುಂದೆ ಈ ಕುರಿತು ಮನವಿ ಸಲ್ಲಿಸಿ, ವಿವಾದ ಬಗೆಹರಿಸಿ ಕೊಳ್ಳುವಂತೆ ನ್ಯಾಯ ಮೂರ್ತಿಗಳು ನಿರ್ದೇಶಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>