<p><span style="font-size: 26px;"><strong>ವಿಜಾಪುರ:</strong> ಇಲ್ಲಿಯ ಐತಿಹಾಸಿಕ ಗಗನ ಮಹಲ್ ಪಕ್ಕದ ಉದ್ಯಾನ `ಹಂದಿ ಗಾರ್ಡನ್' ಎಂದೇ ಪ್ರಸಿದ್ಧಿ. ಇಲ್ಲಿ ಮಂದಿಗಿಂತ ಹಂದಿಗಳೇ ಹೆಚ್ಚಾಗಿರುವುದು ಮತ್ತು ಈ ಉದ್ಯಾನವನ ಹಂದಿಗಳಿಗೇ ಮೀಸಲಾಗಿರುವುದು ಈ ಹೆಸರು ಬರಲು ಕಾರಣ!</span><br /> <br /> ಜನ ನಿಬಿಡ ಬಸವೇಶ್ವರ ಚೌಕ್ ಮತ್ತು ಅಂಬೇಡ್ಕರ ಚೌಕ್ ರಸ್ತೆಯ ಪಕ್ಕದಲ್ಲಿ, ಅದರಲ್ಲೂ ವಿಶೇಷವಾಗಿ ಜಿಲ್ಲಾಧಿಕಾರಿಗಳ ನಿವಾಸದ ಎದುರೇ ಈ ಉದ್ಯಾನವಿದೆ. ಇಲ್ಲೊಂದು ಪ್ರಸಿದ್ಧ ಪುರಾತನ ನರಸಿಂಹ ಮಂದಿರ ವಿದೆ. ಸುತ್ತಲೂ ಐತಿಹಾಸಿಕ ಸ್ಮಾರಕಗಳು, ವಿಶಿಷ್ಟವಾದ ಗೋಡೆ ಇದೆ.<br /> <br /> ಈ ಕಂದಕದಲ್ಲಿಯ ನೀರು ಬತ್ತುವು ದಿಲ್ಲ. ಅದರಲ್ಲಿ ಈಗ ಚರಂಡಿ ನೀರು ಸೇರಿ ಞಕೊಳ್ಳುತ್ತಿದ್ದು, ಜನ ಕಸವನ್ನು ಅದರಲ್ಲಿಯೇ ಎಸೆಯುವುದರಿಂದ ಅದು ಕೊಳಚೆಯಾಗಿ ಮಾರ್ಪಟ್ಟಿದೆ. ಜನ ಮಲ-ಮೂತ್ರ ವಿಸರ್ಜನೆ ಮಾಡು ತ್ತಿರುವುದರಿಂದ ಇಡೀ ಪ್ರದೇಶ ದುರ್ವಾಸನೆಯಿಂದ ಕೂಡಿರುತ್ತದೆ.<br /> <br /> `ಈ ಉದ್ಯಾನ ವನ ಅಭಿವೃದ್ಧಿ ಪಡಿಸಬೇಕು. ಕಂದಕ ಶುಚಿಗೊಳಿಸಿ ಬೋಟಿಂಗ್ ವ್ಯವಸ್ಥೆ ಮಾಡಿ ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕು' ಎಂಬ ದಶಕಗಳ ಬೇಡಿಕೆಗೆ ಯಾವುದೇ ಸ್ಪಂದನೆ ದೊರೆತಿಲ್ಲ.<br /> <br /> `ಹೃದಯ ಭಾಗದಲ್ಲಿರುವ ಈ ಉದ್ಯಾನ ಸುಂದರವಾಗಿ ಅಭಿವೃದ್ಧಿ ಪಡಿಸಿದರೆ ನಗರದ ಸೌಂದರ್ಯ ಮತ್ತಷ್ಟು ಹೆಚ್ಚಲಿದೆ. ಇಲ್ಲಿ `ಸ್ಟ್ಯಾಚು ಪಾರ್ಕ್' ನಿರ್ಮಿಸಲಾಗುವುದು. ನಗರದಲ್ಲಿರುವ ಎಲ್ಲ ಮಹಾತ್ಮರ ಪುತ್ಥಳಿಗಳನ್ನು ಈ ಉದ್ಯಾನ ವನಕ್ಕೆ ಸ್ಥಳಾಂತರಿಸುವುದು. ದಿನದ 24 ಗಂಟೆಗಳ ಕಾಲವೂ ಆ ಪುತ್ಥಳಿಗಳಿಗೆ ವಿದ್ಯುತ್ ಪೂರೈಕೆ ಮತ್ತು ಭದ್ರತೆ ಒದಗಿಸಲಾಗುವುದು' ಎಂದು ಹಿಂದಿನ ಜಿಲ್ಲಾಧಿಕಾರಿ ಶಾಂತರಾಜು ಹೇಳಿದ್ದರು ಎಂದು ಜನ ಸ್ಮರಿಸುತ್ತಿದ್ದಾರೆ.<br /> ಆದರೆ, ಜಿಲ್ಲಾಧಿಕಾರಿಗಳ ಈ ಪ್ರಸ್ತಾವ ಅವರ ವರ್ಗಾವಣೆಯೊಂದಿಗೆ ಮರೆಯಾಗಿ ಬಿಟ್ಟಿದೆ ಎಂಬ ಮಾತೂ ಕೇಳಿ ಬರುತ್ತಿವೆ.<br /> <br /> `ವಿಜಾಪುರ ನಗರದ ಜನಸಂಖ್ಯೆ 3.25 ಲಕ್ಷ ಮಿಕ್ಕಿದೆ. ಸದ್ಯವೇ ಇದು ಮಹಾನಗರ ಪಾಲಿಕೆಯ ಸ್ಥಾನಮಾನ ಪಡೆಯಲಿದೆ. ಇಡೀ ನಗರದಲ್ಲಿ ಹುಡುಕಿದರೂ ನಗರಸಭೆಯ ಒಂದೇ ಒಂದು ಸುಸಜ್ಜಿತ ಉದ್ಯಾನ ಇಲ್ಲ' ಎಂಬುದು ಜನತೆಯ ಬೇಸರ.<br /> <br /> `ಗಗನ ಮಹಲ್ ಉದ್ಯಾನಕ್ಕೆ ಹೊಂದಿಕೊಂಡಿರುವ ಕಂದಕ ಪಾಳು ಬಿದ್ದಿದೆ. ಈ ಪ್ರದೇಶ ಅನೈತಿಕ, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಮಹಾರಾಷ್ಟ್ರದ ಸೋಲಾಪುರದಲ್ಲಿ ಕೋಟೆ ಹೊರಗಿನ ಕಂದಕವನ್ನು ಅಲ್ಲಿಯ ಮಹಾನಗರ ಪಾಲಿಕೆ ಅಭಿವೃದ್ಧಿ ಪಡಿಸಿದೆ. ಅದಕ್ಕೆ ಪ್ರವೇಶ ಶುಲ್ಕವನ್ನು ವಿಧಿಸುತ್ತಿದೆ.<br /> <br /> ಅದೇ ಮಾದರಿಯಲ್ಲಿ ಪುರಾತತ್ವ ಇಲಾಖೆ, ಜಿಲ್ಲಾ ಆಡಳಿತ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರಗಳು ಈ ಹಂದಿ ಗಾರ್ಡನ್ನ್ನು ಅಭಿವೃದ್ಧಿ ಪಡಿಸಬೇಕು' ಎನ್ನುತ್ತಾರೆ ಇಲ್ಲಿಯ ಕೆ.ಬೇಪಾರಿ. ಈ ಉದ್ಯಾನ ಅಭಿವೃದ್ಧಿ ಪಡಿಸಿ, ಬೋಟಿಂಗ್ ಸೌಲಭ್ಯ ಕಲ್ಪಿಸಿದರೆ ಅದು ಹೇಗೆ ಕಂಗೊಳಿಸಲಿದೆ ಎಂಬ ಕಾಲ್ಪನಿಕ ಚಿತ್ರವನ್ನೂ ಅವರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ವಿಜಾಪುರ:</strong> ಇಲ್ಲಿಯ ಐತಿಹಾಸಿಕ ಗಗನ ಮಹಲ್ ಪಕ್ಕದ ಉದ್ಯಾನ `ಹಂದಿ ಗಾರ್ಡನ್' ಎಂದೇ ಪ್ರಸಿದ್ಧಿ. ಇಲ್ಲಿ ಮಂದಿಗಿಂತ ಹಂದಿಗಳೇ ಹೆಚ್ಚಾಗಿರುವುದು ಮತ್ತು ಈ ಉದ್ಯಾನವನ ಹಂದಿಗಳಿಗೇ ಮೀಸಲಾಗಿರುವುದು ಈ ಹೆಸರು ಬರಲು ಕಾರಣ!</span><br /> <br /> ಜನ ನಿಬಿಡ ಬಸವೇಶ್ವರ ಚೌಕ್ ಮತ್ತು ಅಂಬೇಡ್ಕರ ಚೌಕ್ ರಸ್ತೆಯ ಪಕ್ಕದಲ್ಲಿ, ಅದರಲ್ಲೂ ವಿಶೇಷವಾಗಿ ಜಿಲ್ಲಾಧಿಕಾರಿಗಳ ನಿವಾಸದ ಎದುರೇ ಈ ಉದ್ಯಾನವಿದೆ. ಇಲ್ಲೊಂದು ಪ್ರಸಿದ್ಧ ಪುರಾತನ ನರಸಿಂಹ ಮಂದಿರ ವಿದೆ. ಸುತ್ತಲೂ ಐತಿಹಾಸಿಕ ಸ್ಮಾರಕಗಳು, ವಿಶಿಷ್ಟವಾದ ಗೋಡೆ ಇದೆ.<br /> <br /> ಈ ಕಂದಕದಲ್ಲಿಯ ನೀರು ಬತ್ತುವು ದಿಲ್ಲ. ಅದರಲ್ಲಿ ಈಗ ಚರಂಡಿ ನೀರು ಸೇರಿ ಞಕೊಳ್ಳುತ್ತಿದ್ದು, ಜನ ಕಸವನ್ನು ಅದರಲ್ಲಿಯೇ ಎಸೆಯುವುದರಿಂದ ಅದು ಕೊಳಚೆಯಾಗಿ ಮಾರ್ಪಟ್ಟಿದೆ. ಜನ ಮಲ-ಮೂತ್ರ ವಿಸರ್ಜನೆ ಮಾಡು ತ್ತಿರುವುದರಿಂದ ಇಡೀ ಪ್ರದೇಶ ದುರ್ವಾಸನೆಯಿಂದ ಕೂಡಿರುತ್ತದೆ.<br /> <br /> `ಈ ಉದ್ಯಾನ ವನ ಅಭಿವೃದ್ಧಿ ಪಡಿಸಬೇಕು. ಕಂದಕ ಶುಚಿಗೊಳಿಸಿ ಬೋಟಿಂಗ್ ವ್ಯವಸ್ಥೆ ಮಾಡಿ ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕು' ಎಂಬ ದಶಕಗಳ ಬೇಡಿಕೆಗೆ ಯಾವುದೇ ಸ್ಪಂದನೆ ದೊರೆತಿಲ್ಲ.<br /> <br /> `ಹೃದಯ ಭಾಗದಲ್ಲಿರುವ ಈ ಉದ್ಯಾನ ಸುಂದರವಾಗಿ ಅಭಿವೃದ್ಧಿ ಪಡಿಸಿದರೆ ನಗರದ ಸೌಂದರ್ಯ ಮತ್ತಷ್ಟು ಹೆಚ್ಚಲಿದೆ. ಇಲ್ಲಿ `ಸ್ಟ್ಯಾಚು ಪಾರ್ಕ್' ನಿರ್ಮಿಸಲಾಗುವುದು. ನಗರದಲ್ಲಿರುವ ಎಲ್ಲ ಮಹಾತ್ಮರ ಪುತ್ಥಳಿಗಳನ್ನು ಈ ಉದ್ಯಾನ ವನಕ್ಕೆ ಸ್ಥಳಾಂತರಿಸುವುದು. ದಿನದ 24 ಗಂಟೆಗಳ ಕಾಲವೂ ಆ ಪುತ್ಥಳಿಗಳಿಗೆ ವಿದ್ಯುತ್ ಪೂರೈಕೆ ಮತ್ತು ಭದ್ರತೆ ಒದಗಿಸಲಾಗುವುದು' ಎಂದು ಹಿಂದಿನ ಜಿಲ್ಲಾಧಿಕಾರಿ ಶಾಂತರಾಜು ಹೇಳಿದ್ದರು ಎಂದು ಜನ ಸ್ಮರಿಸುತ್ತಿದ್ದಾರೆ.<br /> ಆದರೆ, ಜಿಲ್ಲಾಧಿಕಾರಿಗಳ ಈ ಪ್ರಸ್ತಾವ ಅವರ ವರ್ಗಾವಣೆಯೊಂದಿಗೆ ಮರೆಯಾಗಿ ಬಿಟ್ಟಿದೆ ಎಂಬ ಮಾತೂ ಕೇಳಿ ಬರುತ್ತಿವೆ.<br /> <br /> `ವಿಜಾಪುರ ನಗರದ ಜನಸಂಖ್ಯೆ 3.25 ಲಕ್ಷ ಮಿಕ್ಕಿದೆ. ಸದ್ಯವೇ ಇದು ಮಹಾನಗರ ಪಾಲಿಕೆಯ ಸ್ಥಾನಮಾನ ಪಡೆಯಲಿದೆ. ಇಡೀ ನಗರದಲ್ಲಿ ಹುಡುಕಿದರೂ ನಗರಸಭೆಯ ಒಂದೇ ಒಂದು ಸುಸಜ್ಜಿತ ಉದ್ಯಾನ ಇಲ್ಲ' ಎಂಬುದು ಜನತೆಯ ಬೇಸರ.<br /> <br /> `ಗಗನ ಮಹಲ್ ಉದ್ಯಾನಕ್ಕೆ ಹೊಂದಿಕೊಂಡಿರುವ ಕಂದಕ ಪಾಳು ಬಿದ್ದಿದೆ. ಈ ಪ್ರದೇಶ ಅನೈತಿಕ, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಮಹಾರಾಷ್ಟ್ರದ ಸೋಲಾಪುರದಲ್ಲಿ ಕೋಟೆ ಹೊರಗಿನ ಕಂದಕವನ್ನು ಅಲ್ಲಿಯ ಮಹಾನಗರ ಪಾಲಿಕೆ ಅಭಿವೃದ್ಧಿ ಪಡಿಸಿದೆ. ಅದಕ್ಕೆ ಪ್ರವೇಶ ಶುಲ್ಕವನ್ನು ವಿಧಿಸುತ್ತಿದೆ.<br /> <br /> ಅದೇ ಮಾದರಿಯಲ್ಲಿ ಪುರಾತತ್ವ ಇಲಾಖೆ, ಜಿಲ್ಲಾ ಆಡಳಿತ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರಗಳು ಈ ಹಂದಿ ಗಾರ್ಡನ್ನ್ನು ಅಭಿವೃದ್ಧಿ ಪಡಿಸಬೇಕು' ಎನ್ನುತ್ತಾರೆ ಇಲ್ಲಿಯ ಕೆ.ಬೇಪಾರಿ. ಈ ಉದ್ಯಾನ ಅಭಿವೃದ್ಧಿ ಪಡಿಸಿ, ಬೋಟಿಂಗ್ ಸೌಲಭ್ಯ ಕಲ್ಪಿಸಿದರೆ ಅದು ಹೇಗೆ ಕಂಗೊಳಿಸಲಿದೆ ಎಂಬ ಕಾಲ್ಪನಿಕ ಚಿತ್ರವನ್ನೂ ಅವರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>