<p>ರಾಯಚೂರು ಜಿಲ್ಲೆಗೆ ಐತಿಹಾಸಿಕ, ಸಾಹಿತಿಕ, ಭೌಗೋಳಿಕ, ಧಾರ್ಮಿಕ ಹಾಗೂ ಮೌಖಿಕ ಪರಂಪರೆ ಇದೆ. ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದ್ದರಿಂದ ಇಲ್ಲಿ ಅನೇಕ ಕೋಟೆ-ಕೊತ್ತಲಗಳು ರಾಯಚೂರು, ದೇವದುರ್ಗ, ಮುದಗಲ್, ಜಲದುರ್ಗ ಮುಂತಾದಡೆ ಕಂಡುಬರುತ್ತವೆ. ದೇವಸುಗೂರಿನ ಸೂಗೂರೇಶ್ವರ, ಗಬ್ಬೂರಿನ ಬೂದಿಬಸವೇಶ್ವರ, ಗುರಗುಂಟಿ ಅಮರೇಶ್ವರ, ಸಂತೆಕೆಲ್ಲೂರಿನ ಘನಮಠ, ಕೂಡಲೂರು ಬಸವಲಿಂಗ, ಸಜ್ಜಲಗುಡ್ಡದ ಶರಣಮ್ಮ, ಅಂಕಲಗಿ ಮಠದ ನಿರುಪಾಧಿಶ್ವರ ಜತೆಗೆ ಗಡಿಯಲ್ಲಿನ ಮಂತ್ರಾಲಯ ಮುಂತಾದವು ಜಿಲ್ಲೆಯ ಜನತೆಯ ಧಾರ್ಮಿಕ-ಸಾಂಸ್ಕೃತಿಕ ಬುದುಕಿನ ಜಾಗೃತ ಸ್ಥಳಗಳಾಗಿವೆ.</p><p>ಇವುಗಳನ್ನಾಶ್ರಯಿಸಿ ಜನಪದ ವೃತ್ತಿಕಲೆಗಳು,ಪ್ರದರ್ಶನ ಕಲೆಗಳು ಬೆಳೆದು ಬಂದಿವೆ. ಇಲ್ಲಿನ ಕವಿಗಳ ಕಾವ್ಯಕ್ಕೆ ಇಲ್ಲಿನ ದೇವ-ದೇವಾಲಯಗಳು ಆರಾಧ್ಯ ದೈವಗಳಾಗಿವೆ. ಇವರ ಕುರಿತು ಬರೆದ ಪದ್ಯಗಳು, ಪುರಾಣಗಳು, ಬಯಲಾಟಗಳು ಹೇರಳವಾಗಿ ದೊರೆಯುತ್ತವೆ. ಜಿಲ್ಲೆಯಲ್ಲಿ ಹಲವು ಭಾಷೆಗಳನ್ನಾಡುವವರು ಅಧಿಕ ಸಂಖ್ಯೆಯಲ್ಲಿದ್ದಾರೆ.</p>. <p>ಗಡಿನಾಡಿನಲ್ಲಿ ತೆಲುಗಿನ ಪ್ರಭಾವ ಹೆಚ್ಚಿದೆ. ಅಪರಾಳ ತಮ್ಮಣ್ಣನ ಶ್ರೀಕೃಷ್ಣ ಪಾರಿಜಾ, ಜೂಡಲೂರ ಬಸವಲಿಂಗ, ಘನಮಠಾರ್ಯ, ನೀರಲಕೇರಿ ಶರಣರ ಪದ್ಯಗಳಲ್ಲಿ ಅಲ್ಲಲ್ಲಿ ತೆಲುಗು ಪದಗಳ ಬಳಕೆಯಾಗಿವೆ. ವೇಷಗಾರರು, ಕೌತಿತ್ತಿನವರು, ಮೋಡಿಕಾರರು ತೆಲುಗಿನ ಮೂಲದವರಾಗಿದ್ದಾರೆ.</p><p>ರಾಯಚೂರಿನ ಮಡ್ಡಿಮೇಟೆ, ಚಿಕ್ಕಸುಗೂರು, ದೇವಸುಗೂರು, ಗುರಗುಂಟಿ, ಗಬ್ಬೂರು, ಸಂತೆಕೆಲ್ಲೂರು, ಅಪರಾಳ, ನೀರಲಕೇರಿ, ಕೂಡಲೂರು, ಮಾನ್ವಿ, ಮುದಗಲ್, ಆಮದಿಹಾಳ, ಈಚನಾಳ, ಲಿಂಗಸುಗೂರು, ಹಸಮಕಲ್, ಮುಂತಾದವುಗಳನ್ನು ಜಿಲ್ಲಿಯ ಜನಪದ ಕೇಂದ್ರ ಸ್ಥಳಗಳಾಗಿವೆ.</p><p>ಕೂಡಲೂರು ಬಸಲಿಂಗ, ಅಪರಾಳ ತಮ್ಮಣ್ಣ, ನೀರಲಕೇರಿ ಬಸವಲಿಂಗ, ಸಂತೆಕೆಲ್ಲೂರಿನ ನಾಗಭೂಷಣ ಮೊದಲಾದವರ ತತ್ವಪದಗಳು, ಶ್ರೀಕೃಷ್ಣ ಪಾರಿಜಾತ, ಕೃಷಿಜ್ಞಾನ ಪ್ರದೀಪಿಕೆ, ಬಸವಗೀತ, ಕಲ್ಯಾಣಗೀತ, ತಾಯಿಯ ಹಾಡು ಕೃತಿಗಳು ಜಾನಪದ ಸಾಹಿತ್ಯಕ್ಕೆ ಮುಕುಟ ಪ್ರಾಯವಾಗಿವೆ.</p>. <p>ಜಿಲ್ಲೆಯ ಜಾನಪದ ಸಾಹಿತ್ಯ ಕ್ಷೇತ್ರ ಬೆಳೆಸುವಲ್ಲಿ ಗಬ್ಬೂರು ಹಂಪಣ್ಣ, ಗುರಣ್ಣ, ಬಳಗನೂರ ಮರಿಸ್ವಾಮಿ, ಮಾನ್ವಿ ಗುಂಡಚಾರಿ, ಮದರಕಲ್ಲು ನಾಗಯ್ಯ, ಚಿಕ್ಕಸುಗೂರಿನ ನೀಲಕಂಠ ಶಾಸ್ತ್ರಿ, ರಾಯಚೂರಿನ ಶಾಂತರಸ, ರಾಜಶ್ರೀ ಇಲ್ಲೂರ, ದೇವದುರ್ಗದ ಲಿಂಗಣ್ಣ ಗಾಣದಾಳ, ಲಿಂಗಸುಗೂರಿನ ಚಿ.ಬಿ. ಚಿಲ್ಕರಾಗಿ, ಶಶಿಕಾಂತ, ಹುಲಗಪ್ಪ ಬುದ್ದಿನ್ನಿ, ಶರಣಪ್ಪ ಆನೆಹೊಸೂರು, ದಸಗಿರಿಸಾಬ ದಿನ್ನಿ ಮುಂತಾದವರು ಮುಖ್ಯರು. </p><p>ಜಿಲ್ಲೆಯಲ್ಲಿ ಬಹುಪಾಲು ಲೇಖಕರು ತತ್ವಪದ , ಲಾವಣಿ ಮತ್ತು ದೊಡ್ಡಾಟಗಳು ರಚಿಸಿದ್ದಾರೆ. ಜಿಲ್ಲೆ ಜನಪದ ಕಲೆಗಳ ಆಗರವೆನಿಸಿದೆ. ಗೀಗೀ-ಲಾವಣಿ, ಡೊಳ್ಳು, ಹಂತಿ, ಭಜನೆ, ಚೌಡಕಿ, ಶಹನಾಯಿ, ಕಣಿಹಲಗೆ, ವೀರಗಾಸೆ, ಸುಡುಗಾಡಸಿದ್ದರ, ಹಗಲುವೇಷಗಾರರು, ತೊಗಲುಬೊಂಬೆಯಾಟ, ಹುಲಿವೇಷ, ದೊಡ್ಡಾಟ, ಮೋಡಿಯಾಟ, ಕೋಲಾಟ, ಜೋಗುತಿ ಕುಣಿತ, ಕಂಸಾಳೆ, ಬುರಾಕತೆ ಮುಂತಾದ ಕಲಾಮೇಳಗಳು ಜನತೆಯ ಮಧ್ಯದಲ್ಲಿವೆ.</p><p>ರಾಯಚೂರಿನ ಫಕೀರಪ್ಪ, ದೇವದುರ್ಗದ ಕಾಳಮ್ಮ ಚಲವಾದಿ, ದಂಡಮ್ಮ ಅಕ್ಕರಕಿ, ಸೋಮಲಿಂಗಪ್ಪ, ಕುರಡಿ ಕೃಷ್ಣಪ್ಪ, ಮುದಗಲ್ ಮೆಹಬೂಬ, ಆಮದಿಹಾಳದ ಲಂಕೆಪ್ಪ ಭಜಂತ್ರಿ, ಕಮಲಮ್ಮ, ಸೇರಿದಂತೆ ಇನ್ನಿತರರು ಜಾನಪದ ಅಕಾಡಮಿ, ಜಾನಪದ ಪರಿಷತ್ತುಗಳ ಪ್ರಶಸ್ತಿ ಪಡೆದಿದ್ದಾರೆ.</p><p>ಸಿಂಧನೂರ ತಾಲ್ಲೂಕಿನ ಉಮಲೂಟಿಯ ಮಲ್ಲಿಕಾರ್ಜುನ ಬಡಿಗೇರ ಮತ್ತು ಸಂಗಡಿಗೆರೆ ಅವರ ಗೀಗೀ-ಲಾವಣಿ ಕಲಾ ಮೇಳ, ಲಿಂಗುಸುಗೂರ ತಾಲ್ಲೂಕಿನ ಖೈರವಾಡಗಿಯ ಗದ್ದೆಪ್ಪ ಗೌಂಡಿ ಸಂಗಡಿಗರು, ಆನೆಹೊಸೂರು, ಮುದಗಲ್ ಸೇರಿದಂತೆ ಇನ್ನಿತರ ಕಡೆ ಹೆಜ್ಜೆ ಹಾಕುವುದರಲ್ಲಿ ಪ್ರವೀಣರಿದ್ದಾರೆ.</p>. <p>ಮದಕಲ್ಲಿನ ಮಲ್ಲಪ್ಪ, ಗಣೇಕಲ್ಲನ ನಾಯ್ಕಪ್ಪ, ಲಿಂಗಸುಘುರಿನ ಒಡ್ಡರ ಮಹುಮಂತಪ್ಪ, ಸಂತೆಕೆಲ್ಲೂರಿ ಶಂಕರಪ್ಪ, ಮಡ್ಡಿಪೇಟೆ ಭೀಮರೆಡ್ಡಿ, ಆನೆಹೊಸೂರಿನ ಪಾಷ ಹೈದರಾಬಾದ್ ಮುಂದಾದವರು ರಿಯಾಯ್ತು ಹಾಡುಗಳನ್ನು ಸುಮಧುರವಾಗಿ ಹಾಡುತ್ತಾರೆ. ಏಗನೂರಿನ ಸಣ್ಣಯಲ್ಲಪ್ಪ ತಂಡಾ, ನೀರಮಾನ್ವಿಯ ಕನಕದಾಸ ಕಲಾ ತಂಡ ಡೊಳ್ಳಿನ ನೃತ್ಯ ಮಾಡುವಲ್ಲಿ ನಿಸ್ಸೀಮರು. ಸಂತಕೆಲ್ಲೂರ ಗ್ಯಾನಪ್ಪ, ಯರದೊಡ್ಡಿ ದ್ಯಾವಪ್ಪ, ಮಸ್ಕಿ ಬೀರಪ್ಪ, ಆನೆಹೊಸೂರು ಗದ್ದೆಪ್ಪ, ಕೆರಿಯಪ್ಪ ಮುಂತಾದವರು ರಸವತ್ತಾಗಿ ಡೊಳ್ಳಿನ ಹಾಡುಗಳನ್ನು ಹೇಳುತ್ತಾರೆ.</p><p>ಕರಡಿಗುಡ್ಡ ಶಂಕ್ರಪ್ಪ, ಗೆಜ್ಜಲಗಟ್ಟಿ ಮಲ್ಲಪ್ಪ ಗೊಂದಲ ಹಾಡುವದರಲ್ಲಿ ಹೆಸರಾದವರು. ಮಾನ್ವಿಯಲ್ಲಿ ಗೊಂದಲಿಗರ ಮೇಳಗಳಿದ್ದವು. ರಾಯಚೂರಿನ ಗಜಲಪ್ಪ, ನಗನೂರಿನ ಪರಶುರಾಮ ಚೌಡಕಿಯಲ್ಲಿ ಹೆಸರುವಾಸಿಯಾಗಿದ್ದಾರೆ. ಹಸಮಕಲ್ ಜಂಬಣ್ಣ, ಅಮರೇಶ ಸಂಗಡಿಗರ ಹಗಲು ವೇಷಗಾರ ವೃತ್ತಿಯಲ್ಲಿ ಪ್ರವೀಣರು. ಲಿಂಗಸುಗೂರು ತಾಲ್ಲೂಕಿನ ಆಮದಿಹಾಳ ಗ್ರಾಮದ ಲಂಕೆಪ್ಪ ಭಜಂತ್ರಿ, ದಿನ್ನಿ ನರಸಪ್ಪ ಹಲಗೆ ನುಡಿಸುವುದರಲ್ಲಿ ಶ್ರೇಷ್ಠರು. ರಾಯಚೂರಿನ ಮೂಕಯ್ಯ ಸ್ವಾಮಿ, ದಿನ್ನಿ ಚಿದಾನಂದ, ಸಿಂಧನೂರಿನ ನಾರಾಯಣಪ್ಪ ಮಾಶಿಮಡಿ ಮುಂತಾದವರು ಸುಪ್ರಸಿದ್ಧ ಭಜನಾ ಹಾಡುಗಾರರು. ತಲೆಖಾನ ಅಮೃತಾಬಾಯಿ, ಯರಮರಸ ಶಾಂತಾಬಾಯಿ, ಯರಗೇರಾ ಕಾಸೀಬಾಯಿ, ಗಬ್ಬೂರ ಲಕ್ಷ್ಮೀಬಾಯಿ, ಜವಳಗೇರಿಯ ಭಾಗ್ಯಮ್ಮ, ದೇವದುರ್ಗದ ಕಾಳಮ್ಮ, ದಂಡಮ್ಮ ಅಕ್ಕರಕಿ, ಕಸಬಾ ಲಿಂಗಸುಗೂರಿನ ಹಂಪಮ್ಮ, ನಾಗರಾಳದ ರಾಜೇಸಾಬ ಮುಂತಾದವರು ಗರತಿ, ಸಂಪ್ರದಾಯ ಹಾಡುಗಳನ್ನು ಸುಶಾವ್ಯವಾಗಿ ಹೇಳುತ್ತಾರೆ.</p>. <p>ದೇವಸುಗೂರಿನ ರಾಚಯ್ಯ ಸ್ವಾಮಿ ವೀರಗಾಸೆ ನೃತ್ಯ ಕಣ್ಣಿಗೆ ಕಟ್ಟುತ್ತಿದೆ. ಸಿಂಧನೂರಿನಲ್ಲಿ ವೀರಗಾಸೆ ಕಲಾ ಮೇಳಗಳಿವೆ. ಆನೆಹೊಸೂರು ಮಲ್ಲೇಶ ಕಟಗಿ, ರಾಯಚೂರಿನ ತಪ್ಪಯ್ಯ ಸಂಗಡಿಗರು ಕೋಲಿನ ಹಾಡುಗಳನ್ನು ಹೇಳುತ್ತ ಕೋಲಾಟ ಕಲೆ ತೋರಿಸುತ್ತಾರೆ. ಮಾನ್ವಿ ತಾಲ್ಲೂಕಿನ ಕುರಡಿ ಗ್ರಾಮದ ಕೃಷ್ಣಪ್ಪ ಸುಪ್ರಸಿದ್ಧ ತೊಗಲುಗೊಂಬೆಯಾಟ ಕಲಾವಿದನಾಗಿದ್ದಾನೆ.</p><p>ಸಿಂಧನೂರು ತಾಲ್ಲೂಕಿನಲ್ಲಿ ಕಲಾ ತಂಡವಿದೆ. ಮುದಗಲ್ ಮಹೆಬೂಬ ಕವ್ವಾಲಿ ಹಾಡು ಹೇಳುವದರಲ್ಲಿ ನಿಪುಣರು. ಗೆಜ್ಜಲಗಟ್ಟದ ಆದನಗೌಡ, ಪೋತ್ನಾಳ ಈರಪ್ಪ ಅಂಗಡಿ, ಸಿರವಾರ ಕರಿಯಪ್ಪ ಲಂದೆ, ಕಲ್ಲೂರು ನಾಗರಪ್ಪ ವಾಲೀಕಾರ ರಾಯಚೂರು ವೆಂಕಪ್ಪ, ತಿಮ್ಮಯ್ಯ, ಯರಗೇರ ದಾಸಪ್ಪ, ಅಸ್ಕಿಹಾಳ, ರಾಮಣ್ಣ, ದೇವದುರ್ಗದ ವೆಂಕಣ್ಣ ಮಾಸ್ತರ ದೊಡ್ಡಾಟದ ಸುಪ್ರಸಿದ್ದ ಕಲಾವಿದರು. ರಾಯಚೂರಿನ ಎನ್. ಫಕೀರಪ್ಪ ದೊಡ್ಡಾಟ ಕಲಿಸುವುದಲ್ಲಿದೆ ಭಾಗವಂತಿಕೆ, ಮದ್ದಳೆ ಮತ್ತು ಡಪ್ಪು ಬಾರಿಸುವುದರಲ್ಲಿಯೂ ನಿಪುಣನಾಗಿದ್ದಾನೆ. ದೇವದುರ್ಗತಾಲ್ಲೂಕಿನ ಕೊತ್ತದೊಡ್ಡಿಯ ಮುದ್ದಯ್ಯ ನೂಲಿ ಬಯಲಾಟದ ಬಹುದೊಡ್ಡ ಕಲಾವಿದ. ಒಟ್ಟಾರೆಯಾಗಿ ಜಿಲ್ಲೆಯ ಜನಪದ ಕಲೆ, ಸಂಸ್ಕೃತಿ ಹಾಗೂ ಕಲಾವಿದರನ್ನು ಉಳಿಸಿಕೊಳ್ಳುವ ಕಾರ್ಯ ನಡೆಯಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಚೂರು ಜಿಲ್ಲೆಗೆ ಐತಿಹಾಸಿಕ, ಸಾಹಿತಿಕ, ಭೌಗೋಳಿಕ, ಧಾರ್ಮಿಕ ಹಾಗೂ ಮೌಖಿಕ ಪರಂಪರೆ ಇದೆ. ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದ್ದರಿಂದ ಇಲ್ಲಿ ಅನೇಕ ಕೋಟೆ-ಕೊತ್ತಲಗಳು ರಾಯಚೂರು, ದೇವದುರ್ಗ, ಮುದಗಲ್, ಜಲದುರ್ಗ ಮುಂತಾದಡೆ ಕಂಡುಬರುತ್ತವೆ. ದೇವಸುಗೂರಿನ ಸೂಗೂರೇಶ್ವರ, ಗಬ್ಬೂರಿನ ಬೂದಿಬಸವೇಶ್ವರ, ಗುರಗುಂಟಿ ಅಮರೇಶ್ವರ, ಸಂತೆಕೆಲ್ಲೂರಿನ ಘನಮಠ, ಕೂಡಲೂರು ಬಸವಲಿಂಗ, ಸಜ್ಜಲಗುಡ್ಡದ ಶರಣಮ್ಮ, ಅಂಕಲಗಿ ಮಠದ ನಿರುಪಾಧಿಶ್ವರ ಜತೆಗೆ ಗಡಿಯಲ್ಲಿನ ಮಂತ್ರಾಲಯ ಮುಂತಾದವು ಜಿಲ್ಲೆಯ ಜನತೆಯ ಧಾರ್ಮಿಕ-ಸಾಂಸ್ಕೃತಿಕ ಬುದುಕಿನ ಜಾಗೃತ ಸ್ಥಳಗಳಾಗಿವೆ.</p><p>ಇವುಗಳನ್ನಾಶ್ರಯಿಸಿ ಜನಪದ ವೃತ್ತಿಕಲೆಗಳು,ಪ್ರದರ್ಶನ ಕಲೆಗಳು ಬೆಳೆದು ಬಂದಿವೆ. ಇಲ್ಲಿನ ಕವಿಗಳ ಕಾವ್ಯಕ್ಕೆ ಇಲ್ಲಿನ ದೇವ-ದೇವಾಲಯಗಳು ಆರಾಧ್ಯ ದೈವಗಳಾಗಿವೆ. ಇವರ ಕುರಿತು ಬರೆದ ಪದ್ಯಗಳು, ಪುರಾಣಗಳು, ಬಯಲಾಟಗಳು ಹೇರಳವಾಗಿ ದೊರೆಯುತ್ತವೆ. ಜಿಲ್ಲೆಯಲ್ಲಿ ಹಲವು ಭಾಷೆಗಳನ್ನಾಡುವವರು ಅಧಿಕ ಸಂಖ್ಯೆಯಲ್ಲಿದ್ದಾರೆ.</p>. <p>ಗಡಿನಾಡಿನಲ್ಲಿ ತೆಲುಗಿನ ಪ್ರಭಾವ ಹೆಚ್ಚಿದೆ. ಅಪರಾಳ ತಮ್ಮಣ್ಣನ ಶ್ರೀಕೃಷ್ಣ ಪಾರಿಜಾ, ಜೂಡಲೂರ ಬಸವಲಿಂಗ, ಘನಮಠಾರ್ಯ, ನೀರಲಕೇರಿ ಶರಣರ ಪದ್ಯಗಳಲ್ಲಿ ಅಲ್ಲಲ್ಲಿ ತೆಲುಗು ಪದಗಳ ಬಳಕೆಯಾಗಿವೆ. ವೇಷಗಾರರು, ಕೌತಿತ್ತಿನವರು, ಮೋಡಿಕಾರರು ತೆಲುಗಿನ ಮೂಲದವರಾಗಿದ್ದಾರೆ.</p><p>ರಾಯಚೂರಿನ ಮಡ್ಡಿಮೇಟೆ, ಚಿಕ್ಕಸುಗೂರು, ದೇವಸುಗೂರು, ಗುರಗುಂಟಿ, ಗಬ್ಬೂರು, ಸಂತೆಕೆಲ್ಲೂರು, ಅಪರಾಳ, ನೀರಲಕೇರಿ, ಕೂಡಲೂರು, ಮಾನ್ವಿ, ಮುದಗಲ್, ಆಮದಿಹಾಳ, ಈಚನಾಳ, ಲಿಂಗಸುಗೂರು, ಹಸಮಕಲ್, ಮುಂತಾದವುಗಳನ್ನು ಜಿಲ್ಲಿಯ ಜನಪದ ಕೇಂದ್ರ ಸ್ಥಳಗಳಾಗಿವೆ.</p><p>ಕೂಡಲೂರು ಬಸಲಿಂಗ, ಅಪರಾಳ ತಮ್ಮಣ್ಣ, ನೀರಲಕೇರಿ ಬಸವಲಿಂಗ, ಸಂತೆಕೆಲ್ಲೂರಿನ ನಾಗಭೂಷಣ ಮೊದಲಾದವರ ತತ್ವಪದಗಳು, ಶ್ರೀಕೃಷ್ಣ ಪಾರಿಜಾತ, ಕೃಷಿಜ್ಞಾನ ಪ್ರದೀಪಿಕೆ, ಬಸವಗೀತ, ಕಲ್ಯಾಣಗೀತ, ತಾಯಿಯ ಹಾಡು ಕೃತಿಗಳು ಜಾನಪದ ಸಾಹಿತ್ಯಕ್ಕೆ ಮುಕುಟ ಪ್ರಾಯವಾಗಿವೆ.</p>. <p>ಜಿಲ್ಲೆಯ ಜಾನಪದ ಸಾಹಿತ್ಯ ಕ್ಷೇತ್ರ ಬೆಳೆಸುವಲ್ಲಿ ಗಬ್ಬೂರು ಹಂಪಣ್ಣ, ಗುರಣ್ಣ, ಬಳಗನೂರ ಮರಿಸ್ವಾಮಿ, ಮಾನ್ವಿ ಗುಂಡಚಾರಿ, ಮದರಕಲ್ಲು ನಾಗಯ್ಯ, ಚಿಕ್ಕಸುಗೂರಿನ ನೀಲಕಂಠ ಶಾಸ್ತ್ರಿ, ರಾಯಚೂರಿನ ಶಾಂತರಸ, ರಾಜಶ್ರೀ ಇಲ್ಲೂರ, ದೇವದುರ್ಗದ ಲಿಂಗಣ್ಣ ಗಾಣದಾಳ, ಲಿಂಗಸುಗೂರಿನ ಚಿ.ಬಿ. ಚಿಲ್ಕರಾಗಿ, ಶಶಿಕಾಂತ, ಹುಲಗಪ್ಪ ಬುದ್ದಿನ್ನಿ, ಶರಣಪ್ಪ ಆನೆಹೊಸೂರು, ದಸಗಿರಿಸಾಬ ದಿನ್ನಿ ಮುಂತಾದವರು ಮುಖ್ಯರು. </p><p>ಜಿಲ್ಲೆಯಲ್ಲಿ ಬಹುಪಾಲು ಲೇಖಕರು ತತ್ವಪದ , ಲಾವಣಿ ಮತ್ತು ದೊಡ್ಡಾಟಗಳು ರಚಿಸಿದ್ದಾರೆ. ಜಿಲ್ಲೆ ಜನಪದ ಕಲೆಗಳ ಆಗರವೆನಿಸಿದೆ. ಗೀಗೀ-ಲಾವಣಿ, ಡೊಳ್ಳು, ಹಂತಿ, ಭಜನೆ, ಚೌಡಕಿ, ಶಹನಾಯಿ, ಕಣಿಹಲಗೆ, ವೀರಗಾಸೆ, ಸುಡುಗಾಡಸಿದ್ದರ, ಹಗಲುವೇಷಗಾರರು, ತೊಗಲುಬೊಂಬೆಯಾಟ, ಹುಲಿವೇಷ, ದೊಡ್ಡಾಟ, ಮೋಡಿಯಾಟ, ಕೋಲಾಟ, ಜೋಗುತಿ ಕುಣಿತ, ಕಂಸಾಳೆ, ಬುರಾಕತೆ ಮುಂತಾದ ಕಲಾಮೇಳಗಳು ಜನತೆಯ ಮಧ್ಯದಲ್ಲಿವೆ.</p><p>ರಾಯಚೂರಿನ ಫಕೀರಪ್ಪ, ದೇವದುರ್ಗದ ಕಾಳಮ್ಮ ಚಲವಾದಿ, ದಂಡಮ್ಮ ಅಕ್ಕರಕಿ, ಸೋಮಲಿಂಗಪ್ಪ, ಕುರಡಿ ಕೃಷ್ಣಪ್ಪ, ಮುದಗಲ್ ಮೆಹಬೂಬ, ಆಮದಿಹಾಳದ ಲಂಕೆಪ್ಪ ಭಜಂತ್ರಿ, ಕಮಲಮ್ಮ, ಸೇರಿದಂತೆ ಇನ್ನಿತರರು ಜಾನಪದ ಅಕಾಡಮಿ, ಜಾನಪದ ಪರಿಷತ್ತುಗಳ ಪ್ರಶಸ್ತಿ ಪಡೆದಿದ್ದಾರೆ.</p><p>ಸಿಂಧನೂರ ತಾಲ್ಲೂಕಿನ ಉಮಲೂಟಿಯ ಮಲ್ಲಿಕಾರ್ಜುನ ಬಡಿಗೇರ ಮತ್ತು ಸಂಗಡಿಗೆರೆ ಅವರ ಗೀಗೀ-ಲಾವಣಿ ಕಲಾ ಮೇಳ, ಲಿಂಗುಸುಗೂರ ತಾಲ್ಲೂಕಿನ ಖೈರವಾಡಗಿಯ ಗದ್ದೆಪ್ಪ ಗೌಂಡಿ ಸಂಗಡಿಗರು, ಆನೆಹೊಸೂರು, ಮುದಗಲ್ ಸೇರಿದಂತೆ ಇನ್ನಿತರ ಕಡೆ ಹೆಜ್ಜೆ ಹಾಕುವುದರಲ್ಲಿ ಪ್ರವೀಣರಿದ್ದಾರೆ.</p>. <p>ಮದಕಲ್ಲಿನ ಮಲ್ಲಪ್ಪ, ಗಣೇಕಲ್ಲನ ನಾಯ್ಕಪ್ಪ, ಲಿಂಗಸುಘುರಿನ ಒಡ್ಡರ ಮಹುಮಂತಪ್ಪ, ಸಂತೆಕೆಲ್ಲೂರಿ ಶಂಕರಪ್ಪ, ಮಡ್ಡಿಪೇಟೆ ಭೀಮರೆಡ್ಡಿ, ಆನೆಹೊಸೂರಿನ ಪಾಷ ಹೈದರಾಬಾದ್ ಮುಂದಾದವರು ರಿಯಾಯ್ತು ಹಾಡುಗಳನ್ನು ಸುಮಧುರವಾಗಿ ಹಾಡುತ್ತಾರೆ. ಏಗನೂರಿನ ಸಣ್ಣಯಲ್ಲಪ್ಪ ತಂಡಾ, ನೀರಮಾನ್ವಿಯ ಕನಕದಾಸ ಕಲಾ ತಂಡ ಡೊಳ್ಳಿನ ನೃತ್ಯ ಮಾಡುವಲ್ಲಿ ನಿಸ್ಸೀಮರು. ಸಂತಕೆಲ್ಲೂರ ಗ್ಯಾನಪ್ಪ, ಯರದೊಡ್ಡಿ ದ್ಯಾವಪ್ಪ, ಮಸ್ಕಿ ಬೀರಪ್ಪ, ಆನೆಹೊಸೂರು ಗದ್ದೆಪ್ಪ, ಕೆರಿಯಪ್ಪ ಮುಂತಾದವರು ರಸವತ್ತಾಗಿ ಡೊಳ್ಳಿನ ಹಾಡುಗಳನ್ನು ಹೇಳುತ್ತಾರೆ.</p><p>ಕರಡಿಗುಡ್ಡ ಶಂಕ್ರಪ್ಪ, ಗೆಜ್ಜಲಗಟ್ಟಿ ಮಲ್ಲಪ್ಪ ಗೊಂದಲ ಹಾಡುವದರಲ್ಲಿ ಹೆಸರಾದವರು. ಮಾನ್ವಿಯಲ್ಲಿ ಗೊಂದಲಿಗರ ಮೇಳಗಳಿದ್ದವು. ರಾಯಚೂರಿನ ಗಜಲಪ್ಪ, ನಗನೂರಿನ ಪರಶುರಾಮ ಚೌಡಕಿಯಲ್ಲಿ ಹೆಸರುವಾಸಿಯಾಗಿದ್ದಾರೆ. ಹಸಮಕಲ್ ಜಂಬಣ್ಣ, ಅಮರೇಶ ಸಂಗಡಿಗರ ಹಗಲು ವೇಷಗಾರ ವೃತ್ತಿಯಲ್ಲಿ ಪ್ರವೀಣರು. ಲಿಂಗಸುಗೂರು ತಾಲ್ಲೂಕಿನ ಆಮದಿಹಾಳ ಗ್ರಾಮದ ಲಂಕೆಪ್ಪ ಭಜಂತ್ರಿ, ದಿನ್ನಿ ನರಸಪ್ಪ ಹಲಗೆ ನುಡಿಸುವುದರಲ್ಲಿ ಶ್ರೇಷ್ಠರು. ರಾಯಚೂರಿನ ಮೂಕಯ್ಯ ಸ್ವಾಮಿ, ದಿನ್ನಿ ಚಿದಾನಂದ, ಸಿಂಧನೂರಿನ ನಾರಾಯಣಪ್ಪ ಮಾಶಿಮಡಿ ಮುಂತಾದವರು ಸುಪ್ರಸಿದ್ಧ ಭಜನಾ ಹಾಡುಗಾರರು. ತಲೆಖಾನ ಅಮೃತಾಬಾಯಿ, ಯರಮರಸ ಶಾಂತಾಬಾಯಿ, ಯರಗೇರಾ ಕಾಸೀಬಾಯಿ, ಗಬ್ಬೂರ ಲಕ್ಷ್ಮೀಬಾಯಿ, ಜವಳಗೇರಿಯ ಭಾಗ್ಯಮ್ಮ, ದೇವದುರ್ಗದ ಕಾಳಮ್ಮ, ದಂಡಮ್ಮ ಅಕ್ಕರಕಿ, ಕಸಬಾ ಲಿಂಗಸುಗೂರಿನ ಹಂಪಮ್ಮ, ನಾಗರಾಳದ ರಾಜೇಸಾಬ ಮುಂತಾದವರು ಗರತಿ, ಸಂಪ್ರದಾಯ ಹಾಡುಗಳನ್ನು ಸುಶಾವ್ಯವಾಗಿ ಹೇಳುತ್ತಾರೆ.</p>. <p>ದೇವಸುಗೂರಿನ ರಾಚಯ್ಯ ಸ್ವಾಮಿ ವೀರಗಾಸೆ ನೃತ್ಯ ಕಣ್ಣಿಗೆ ಕಟ್ಟುತ್ತಿದೆ. ಸಿಂಧನೂರಿನಲ್ಲಿ ವೀರಗಾಸೆ ಕಲಾ ಮೇಳಗಳಿವೆ. ಆನೆಹೊಸೂರು ಮಲ್ಲೇಶ ಕಟಗಿ, ರಾಯಚೂರಿನ ತಪ್ಪಯ್ಯ ಸಂಗಡಿಗರು ಕೋಲಿನ ಹಾಡುಗಳನ್ನು ಹೇಳುತ್ತ ಕೋಲಾಟ ಕಲೆ ತೋರಿಸುತ್ತಾರೆ. ಮಾನ್ವಿ ತಾಲ್ಲೂಕಿನ ಕುರಡಿ ಗ್ರಾಮದ ಕೃಷ್ಣಪ್ಪ ಸುಪ್ರಸಿದ್ಧ ತೊಗಲುಗೊಂಬೆಯಾಟ ಕಲಾವಿದನಾಗಿದ್ದಾನೆ.</p><p>ಸಿಂಧನೂರು ತಾಲ್ಲೂಕಿನಲ್ಲಿ ಕಲಾ ತಂಡವಿದೆ. ಮುದಗಲ್ ಮಹೆಬೂಬ ಕವ್ವಾಲಿ ಹಾಡು ಹೇಳುವದರಲ್ಲಿ ನಿಪುಣರು. ಗೆಜ್ಜಲಗಟ್ಟದ ಆದನಗೌಡ, ಪೋತ್ನಾಳ ಈರಪ್ಪ ಅಂಗಡಿ, ಸಿರವಾರ ಕರಿಯಪ್ಪ ಲಂದೆ, ಕಲ್ಲೂರು ನಾಗರಪ್ಪ ವಾಲೀಕಾರ ರಾಯಚೂರು ವೆಂಕಪ್ಪ, ತಿಮ್ಮಯ್ಯ, ಯರಗೇರ ದಾಸಪ್ಪ, ಅಸ್ಕಿಹಾಳ, ರಾಮಣ್ಣ, ದೇವದುರ್ಗದ ವೆಂಕಣ್ಣ ಮಾಸ್ತರ ದೊಡ್ಡಾಟದ ಸುಪ್ರಸಿದ್ದ ಕಲಾವಿದರು. ರಾಯಚೂರಿನ ಎನ್. ಫಕೀರಪ್ಪ ದೊಡ್ಡಾಟ ಕಲಿಸುವುದಲ್ಲಿದೆ ಭಾಗವಂತಿಕೆ, ಮದ್ದಳೆ ಮತ್ತು ಡಪ್ಪು ಬಾರಿಸುವುದರಲ್ಲಿಯೂ ನಿಪುಣನಾಗಿದ್ದಾನೆ. ದೇವದುರ್ಗತಾಲ್ಲೂಕಿನ ಕೊತ್ತದೊಡ್ಡಿಯ ಮುದ್ದಯ್ಯ ನೂಲಿ ಬಯಲಾಟದ ಬಹುದೊಡ್ಡ ಕಲಾವಿದ. ಒಟ್ಟಾರೆಯಾಗಿ ಜಿಲ್ಲೆಯ ಜನಪದ ಕಲೆ, ಸಂಸ್ಕೃತಿ ಹಾಗೂ ಕಲಾವಿದರನ್ನು ಉಳಿಸಿಕೊಳ್ಳುವ ಕಾರ್ಯ ನಡೆಯಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>