


ಕಿಚ್ಗುತ್ ಮಾರಮ್ಮ

ಸುಳ್ವಾಡಿ ಕಿಚ್ಗುತ್ ಮಾರಮ್ಮನ ದೇವಸ್ಥಾನದಲ್ಲಿ ವಿಷಪ್ರಸಾದ ಸೇವಿಸಿ ಮೃತಪಟ್ಟವರ ಭಾವಚಿತ್ರ

ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಆರೋಪಿಗಳು
ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಎರಡು ದಿನವಾಗಿದೆ ಅಷ್ಟೆ. ಸುಳ್ವಾಡಿ ಸಂತ್ರಸ್ತರಿಗೆ ಭೂಮಿ, ನಿವೇಶನ, ವಸತಿ ನೀಡುವ ಸಂಬಂಧ ಇಲ್ಲಿಯವರೆಗೂ ಹಿಂದಿನ ಜಿಲ್ಲಾಧಿಕಾರಿಗಳು ತೆಗೆದುಕೊಂಡ ಕ್ರಮಗಳು ಹಾಗೂ ಕಡತಗಳನ್ನು ಪರಿಶೀಲಿಸಲಾಗುವುದು.–ಶ್ರೀರೂಪಾ, ಜಿಲ್ಲಾಧಿಕಾರಿ
ಸುಳ್ವಾಡಿ ವಿಷಪ್ರಾಷನ ದುರ್ಘಟನೆಯಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಇಂದಿಗೂ ಸೂಕ್ತ ಪರಿಹಾರ ಸಿಕ್ಕಿಲ್ಲ. ಬದುಕುಳಿದವರು ಇಂದಿಗೂ ಮಾನಸಿಕ ತೊಳಲಾಟದಲ್ಲಿ ಸಿಲುಕಿದ್ದಾರೆ. ಸರ್ಕಾರ ಅಂದು ನೀಡಿದ್ದ ಭರವಸೆಯಂತೆ ನಿವೇಶನ, ವಸತಿ ನೀಡಬೇಕು. ಸರ್ಕಾರ ವಿಶೇಷ ಪ್ರಕರಣ ಎಂದು ಪರಿಗಣಿಸಬೇಕು. ಅನಕ್ಷರಸ್ಥರು ಹಾಗೂ ಪರಿಶಿಷ್ಟ ಜಾತಿ ಹಾಗೂ ವರ್ಗದವರೇ ಹೆಚ್ಚಾಗಿರುವ ಸಂತ್ರಸ್ಥರು ಹೋರಾಟ ಮಾಡುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಮಾನವೀಯ ನೆಲೆಯಲ್ಲಿ ಸರ್ಕಾರ ಬೇಡಿಕೆಗಳನ್ನು ಈಡೇರಿಸಬೇಕು.–ಬೋಸ್ಕೋ, ಮಾರ್ಟಳ್ಳಿ ಗ್ರಾಮದ ಮುಖಂಡ
ಸುಳ್ವಾಡಿ ದುರಂತದಲ್ಲಿ ಮೃತಪಟ್ಟವರು ಬದುಕುಳಿದ ಬಹುತೇಕರು ತೀರಾ ಬಡವರು, ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿದವರು. ಮೃತರ ಕುಟುಂಬಗಳಲ್ಲಿ ಚಿಕ್ಕ ಮಕ್ಕಳಿದ್ದಾರೆ, ವೃದ್ಧರಿದ್ದಾರೆ, ಮದುವೆಗೆ ಬಂದ ಯುವತಿಯರು ಇದ್ದಾರೆ. ಸರ್ಕಾರದ ನೆರವು ಸಿಗದೆ ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿವೇಶನ, ಮನೆ ಸಹಿತ ಸೂಕ್ತ ಪರಿಹಾರ ಸಿಗಬೇಕು.–ರಾಮಸ್ವಾಮಿ, ಹಳೆ ಮಾರ್ಟಳ್ಳಿ ಗ್ರಾಮದ ಮುಖಂಡ
ವಿಷಪ್ರಸಾದ ಸೇವಿಸಿ ತಾಯಿ ತೀರಿಕೊಂಡರು, ಬಳಿಕ ಕೊರಗಿನಲ್ಲಿ ತಂದೆಯೂ ಮೃತಪಟ್ಟರು. ಈಗ ಮನೆಯಲ್ಲಿ ಉಳಿದಿರುವುದು ನಾನೊಬ್ಬನೇ, ಯೋಗಕ್ಷೇಮ ವಿಚಾರಿಸುವವರು ಇಲ್ಲ. ಸರಿಯಾದ ಕೆಲಸ ಸಿಗುತ್ತಿಲ್ಲ, ದುಡಿದು ತಿನ್ನಲು ತುಂಡು ಭೂಮಿ ಇಲ್ಲ. ಸರ್ಕಾರ ಡಿ ಗ್ರೂಪ್ ನೌಕರಿ ಕೊಟ್ಟರೆ ಬದುಕಿಗೆ ಆಧಾರವಾಗಲಿದೆ.–ಶಾಂತಕುಮಾರ್, ಮೃತ ಗೋಪಿಯಮ್ಮನ ಪುತ್ರ
ವಿಷಪ್ರಸಾದ ತಿಂದ ಬಳಿಕ ಆಗಾಗ ಆರೋಗ್ಯ ಹದಗೆಡುತ್ತಲೇ ಇದೆ. ಒಮ್ಮೆ ಸ್ಕ್ಯಾನಿಂಗ್ ಮಾಡಿಸಲು ಎರಡರಿಂದ ಮೂರು ಸಾವಿರ ಖರ್ಚಾಗುತ್ತಿದೆ. ಸರ್ಕಾರ ಕೊಟ್ಟಿದ್ದ 50,000 ಪರಿಹಾರ ಚಿಕಿತ್ಸೆಗೆ ಖರ್ಚಾಗಿದ್ದು ಸಾಲದ ಹೊರೆ ಹೆಚ್ಚಾಗಿದೆ. ಯಾರೂ ನೆರವಿಗೆ ಬರುತ್ತಿಲ್ಲ. ಹೃದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದು ಕನಿಷ್ಠ ಚಿಕಿತ್ಸೆಗಾದರೂ ವ್ಯವಸ್ಥೆ ಮಾಡಿ.–ರಾಜಮ್ಮ, ವಿಷಪ್ರಸಾದ ಸೇವಿಸಿದ ಸಂತ್ರಸ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.