ವೀರಗಲ್ಲು ಉಳಿಸಿಕೊಳ್ಳಲು ಐತಿಹಾಸಿಕ ಪ್ರಜ್ಞೆ ಅಗತ್ಯ. ಮುಂದಿನ ಪೀಳಿಗೆಗಳಿಗೆ, ಇತಿಹಾಸದ ವಿದ್ಯಾರ್ಥಿಗಳಿಗೆ ನೈಜ ಇತಿಹಾಸದ ಅರಿವು ಅಗತ್ಯವಾಗಿರುತ್ತದೆ. ಇವು ಇತಿಹಾಸದ ಕೊಂಡಿಗಳಾಗಿವೆ. ಇಂತಹ ವೀರಗಲ್ಲು, ಸ್ಮಾರಕಗಳನ್ನು ಗುರುತಿಸಿ ಅಭಿವೃದ್ಧಿಪಡಿಸಿ ಸಂರಕ್ಷಿಸಬೇಕಿದೆ. ಪುರಾತತ್ವ ಇಲಾಖೆಯ ಜೊತೆಗೆ ಇತಿಹಾಸ ಆಸಕ್ತರು ನಿಯೋಗದ ಸಹಕಾರದೊಂದಿಗೆ ಜಿಲ್ಲೆಯ ಐತಿಹಾಸಿಕ ಸಂಸ್ಕೃತಿ ಎಲ್ಲೆಡೆ ಪಸರಿಸುವಂತಾಗಬೇಕಿದೆ
ಎಂ.ಆರ್.ರವಿ, ಜಿಲ್ಲಾಧಿಕಾರಿ, ಕೋಲಾರ
ಅರಾಭಿಕೊತ್ತನೂರು ಮಾತ್ರವಲ್ಲ; ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಹುನ್ಕುಂದ, ಮಾಲೂರು ತಾಲ್ಲೂಕಿನ ದೊಡ್ಡಶಿವಾರ, ಮುಳಬಾಗಿಲು ತಾಲ್ಲೂಕಿನ ಜೋಗಲಕಾಷ್ಟಿ ಗ್ರಾಮದಲ್ಲೂ ವೀರಗಲ್ಲು ಉದ್ಯಾನಗಳು ತಲೆ ಎತ್ತುತ್ತಿವೆ. ಜೊತೆಗೆ ಇಲ್ಲಿ ಇನ್ನೂ ಹಲವು ಕೆಲಸಗಳು ನಡೆಯಬೇಕಿದೆ. ಈ ಸಂಬಂಧ ಸಭೆ ನಡೆಸಿ ರೂಪುರೇಷೆ ರೂಪಿಸುವಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ
–ಅರಿವು ಶಿವಪ್ಪ, ಇತಿಹಾಸ ಪ್ರೇಮಿ, ಅರಿವು ಭಾರತ ಸಂಸ್ಥೆ ಮುಖ್ಯಸ್ಥ