<p><strong>ವಡಗೇರಾ: </strong>ತಾಲ್ಲೂಕಿನ ಕ್ಯಾತನಾಳ ಗ್ರಾಮದ ಹೊಸ ಓಣಿಯಲ್ಲಿಮುಸ್ಲಿಂ ಯುವಕ ದಾವೂದ್ ಚಾಕ್ರಿ ಸ್ವಂತ ಖರ್ಚಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಭಾವೈಕ್ಯ ಮೆರೆದಿದ್ದಾರೆ.</p>.<p>‘ಹಬ್ಬದ ಸಂದರ್ಭದಲ್ಲಿ ನಮ್ಮ ಓಣಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರಲಿಲ್ಲ. ನನ್ನ ಹಿಂದೂ ಸ್ನೇಹಿತರಿಗಾಗಿ ಈ ಬಾರಿ ನಮ್ಮ ಓಣಿಯಲ್ಲಿ ಗಣೇಶ ಚತುರ್ಥಿ ಆಚರಿಸಬೇಕು ಎಂದು ನಿರ್ಧರಿಸಿ ಗೆಳೆಯರಾದ ದೇವಪ್ಪ ಬಾಣಕಾರ, ಭೀಮಣ್ಣ ದೊರೆ ಮತ್ತು ತಾಯಪ್ಪ ಅವರ ಸಹಕಾರದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು’ ಎನ್ನುತ್ತಾರೆ ದಾವೂದ್. </p>.<p>ಕಿರಾಣಿ ವ್ಯಾಪಾರಿಯಾಗಿರುವ ದಾವೂದ್ ಸ್ವಂತ ಹಣದಲ್ಲಿ 3 ಅಡಿಯ ಮೂರ್ತಿ ಖರೀದಿಸಿದ್ದಾರೆ. ಇನ್ನುಳಿದ ಪೂಜೆ ಮತ್ತು ಮಂಟಪದ ಖರ್ಚುಗಳಿಗೆ ಅವರ ಗೆಳೆಯರಾದಅಬ್ದುಲ್, ಮುಸ್ತಫಾ ಕೊಲ್ಮಿ ಸಹಕಾರ ನೀಡಿದ್ದಾರೆ. ಯುವಕರನ್ನು ಕರೆದುಕೊಂಡು ಹೋಗಿ ಶಹಾಪುರ ಪಟ್ಟಣದಿಂದ ಗಣೇಶ ಮೂರ್ತಿ ತಂದು ಭಾನುವಾರ ಪ್ರತಿಷ್ಠಾಪನೆ ಮಾಡಿದ್ದಾರೆ.</p>.<p>ದಾವೂದ್ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<p>ನನಗೆ ಮೊದಲಿನಿಂದಲೂ ಗಣೇಶ ಹಬ್ಬವೆಂದರೆ ಇಷ್ಟ. ಊರಿನಲ್ಲಿ ನಡೆಯುವ ಪೂಜೆ, ಉರುಸ್ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಹಿಂದು– ಮುಸ್ಲಿಮರು ಒಟ್ಟಾಗಿ ಆಚರಿಸುತ್ತೇವೆ ಎನ್ನುತ್ತಾರೆದಾವೂದ್ ಚಾಕ್ರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಡಗೇರಾ: </strong>ತಾಲ್ಲೂಕಿನ ಕ್ಯಾತನಾಳ ಗ್ರಾಮದ ಹೊಸ ಓಣಿಯಲ್ಲಿಮುಸ್ಲಿಂ ಯುವಕ ದಾವೂದ್ ಚಾಕ್ರಿ ಸ್ವಂತ ಖರ್ಚಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಭಾವೈಕ್ಯ ಮೆರೆದಿದ್ದಾರೆ.</p>.<p>‘ಹಬ್ಬದ ಸಂದರ್ಭದಲ್ಲಿ ನಮ್ಮ ಓಣಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರಲಿಲ್ಲ. ನನ್ನ ಹಿಂದೂ ಸ್ನೇಹಿತರಿಗಾಗಿ ಈ ಬಾರಿ ನಮ್ಮ ಓಣಿಯಲ್ಲಿ ಗಣೇಶ ಚತುರ್ಥಿ ಆಚರಿಸಬೇಕು ಎಂದು ನಿರ್ಧರಿಸಿ ಗೆಳೆಯರಾದ ದೇವಪ್ಪ ಬಾಣಕಾರ, ಭೀಮಣ್ಣ ದೊರೆ ಮತ್ತು ತಾಯಪ್ಪ ಅವರ ಸಹಕಾರದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು’ ಎನ್ನುತ್ತಾರೆ ದಾವೂದ್. </p>.<p>ಕಿರಾಣಿ ವ್ಯಾಪಾರಿಯಾಗಿರುವ ದಾವೂದ್ ಸ್ವಂತ ಹಣದಲ್ಲಿ 3 ಅಡಿಯ ಮೂರ್ತಿ ಖರೀದಿಸಿದ್ದಾರೆ. ಇನ್ನುಳಿದ ಪೂಜೆ ಮತ್ತು ಮಂಟಪದ ಖರ್ಚುಗಳಿಗೆ ಅವರ ಗೆಳೆಯರಾದಅಬ್ದುಲ್, ಮುಸ್ತಫಾ ಕೊಲ್ಮಿ ಸಹಕಾರ ನೀಡಿದ್ದಾರೆ. ಯುವಕರನ್ನು ಕರೆದುಕೊಂಡು ಹೋಗಿ ಶಹಾಪುರ ಪಟ್ಟಣದಿಂದ ಗಣೇಶ ಮೂರ್ತಿ ತಂದು ಭಾನುವಾರ ಪ್ರತಿಷ್ಠಾಪನೆ ಮಾಡಿದ್ದಾರೆ.</p>.<p>ದಾವೂದ್ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<p>ನನಗೆ ಮೊದಲಿನಿಂದಲೂ ಗಣೇಶ ಹಬ್ಬವೆಂದರೆ ಇಷ್ಟ. ಊರಿನಲ್ಲಿ ನಡೆಯುವ ಪೂಜೆ, ಉರುಸ್ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಹಿಂದು– ಮುಸ್ಲಿಮರು ಒಟ್ಟಾಗಿ ಆಚರಿಸುತ್ತೇವೆ ಎನ್ನುತ್ತಾರೆದಾವೂದ್ ಚಾಕ್ರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>