<p><strong>ಯಾದಗಿರಿ:</strong> ‘ನಮ್ಮ ದೇಶದಲ್ಲಿ ಉತ್ಪಾದನೆಯಲ್ಲಿ ತೊಡಗುವ ಯುವಸಮುದಾಯ 60 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿದೆ. ಯುವ ಜನರು ಸ್ವತಂತ್ರವಾಗಿ ಚಿಂತಿಸುವ ಮತ್ತು ಪ್ರಶ್ನಿಸುವ ಗುಣವನ್ನು ಅಳವಡಿಸಿಕೊಳ್ಳಬೇಕು’ ಎಂದು ಎಐಡಿವೈಒ ಅಖಿಲ ಭಾರತೀಯ ಉಪಾಧ್ಯಕ್ಷ ಜಿ. ಶಶಿಕುಮಾರ ಸಲಹೆ ನೀಡಿದರು.</p>.<p>ನಗರದ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಭಾನುವಾರ ಎಐಡಿಎಸ್ಒ ಸಂಘಟನೆಯ 60ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ಯುವಜನರ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಮಾತನಾಡಿದ ಅವರು, ‘ಸಮಾಜದ ಪ್ರಗತಿಗೆ ಪೂರಕವಾದ ಯುವಕರ ಶಕ್ತಿಯನ್ನು ಬಳಸುವಲ್ಲಿ ಸರ್ಕಾರಗಳು ವಿಫಲವಾಗಿವೆ’ ಎಂದರು.</p>.<p>‘ರಾಜಕೀಯ ಪಕ್ಷಗಳು ಯುವಜನರನ್ನು ಕುಡಿತ, ಜೂಜು, ಮಾದಕ ವ್ಯಸನ, ಅಶ್ಲೀಲ ಸಿನಿಮಾ ಸಾಹಿತ್ಯದಲ್ಲಿ ಮುಳುಗಿಸಿ ಜಾತಿ, ಕೋಮು ವಿಭಜನೆಗೆ ಬಳಸಿಕೊಳ್ಳುತ್ತಿವೆ. ಯುವಜನರು ಸ್ವಾರ್ಥ ರಾಜಕೀಯ ಪಕ್ಷಗಳ ದಾಳಗಳಾದೆ ಸಮಾಜದಲ್ಲಿನ ಅನ್ಯಾಯ, ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ವಿರುದ್ಧ ಧ್ವನಿ ಎತ್ತಬೇಕು’ ಎಂದು ಹೇಳಿದರು.</p>.<p>‘ಯೌವನಕ್ಕೆ ಕಾಲಿಡುವಾಗ ಬರುವ ಭಾವನೆಗಳು ನೈಸರ್ಗಿಕ, ಅದು ತಪ್ಪಲ್ಲ. ಆದರೆ, ಅವುಗಳನ್ನು ಪ್ರಬುದ್ಧತೆಯಿಂದ ನಿರ್ವಹಿಸಿ. ಪ್ರೇಮದ ಹೆಸರಿನಲ್ಲಿ ಕೇವಲ ಆಕರ್ಷಣೆಗೆ ಬಲಿಯಾಗದಿರಿ. ಪ್ರೀತಿಯು ಪರಸ್ಪರ ಗೌರವ, ಘನತೆಯಿಂದಿರಬೇಕು. ನಾವುಗಳು ಪ್ರಾಣಿಗಳಲ್ಲ, ಸರಿ-ತಪ್ಪುಗಳನ್ನು ವಿಮರ್ಷಿಸಿ ಹೆಜ್ಜೆಯಿಡಬೇಕು’ ಎಂದರು.</p>.<p>ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಶರಣಪ್ಪ ಉದ್ಬಾಳ್ ಮಾತನಾಡಿ, ‘ದೇಶದ ಸ್ವಾತಂತ್ರ್ಯಕ್ಕೆ ಹಲವು ಜನ ಕ್ರಾಂತಿಕಾರಿಗಳು ತ್ಯಾಗ, ಬಲಿದಾನ ಮಾಡಿದ್ದಾರೆ. ಬ್ರಿಟಿಷರ ವಿರುದ್ಧ ಮಾತ್ರವಲ್ಲದೆ ದೇಶದಲ್ಲಿನ ಅಸಮಾನತೆಯ ವಿರುದ್ಧವು ಸಹ ಹೋರಾಡಿದ್ದರು’ ಎಂದರು.</p>.<p>‘ಉದಮಸಿಂಗ್, ಕರ್ತಾರ್ ಸಿಂಗ್ ಸರಬಾ, ಖುದಿರಾಂ ಬೋಸ್, ಸೂರ್ಯ ಸೇನ್, ನೇತಾಜಿ, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಅಶ್ಫಾಖುಲ್ಲಾ ಖಾನ್ ಸೇರಿದಂತೆ ಹಲವು ಮಹನೀಯರು ಮುಂತಾದವರು ಶೋಷಣಾ ರಹಿತ ಸಮಾಜವಾದಿ ಭಾರತದ ಕನಸು ಕಂಡಿದ್ದರು. ಆದರೆ, ಅದು ನನಸಾಗಲಿಲ್ಲ’ ಎಂದರು.</p>.<p>‘ಶಿವದಾಸ್ ಘೋಷ್ ಅವರ ಚಿಂತನೆಗಳ ಆಧಾರದಂತೆ ಎಐಡಿವೈಒ ಸ್ಥಾಪನೆಯಾಗಿದೆ. ಸ್ವಾತಂತ್ರ್ಯ ನಂತರ 77 ವರ್ಷಗಳಾದರೂ ಜನ ನಿರುದ್ಯೋಗ, ಬಡತನದಂತ ಸಮಸ್ಯೆಗಳಿಂದ ಬಳಲುತಿದ್ದಾರೆ. ಅಂತಹ ಸಮಸ್ಯೆಗಳ ವಿರುದ್ಧ ಹೋರಾಡುತ್ತಾ ಸಮಾನತೆಯ ಭಾರತ ಕಟ್ಟುವುದು ನಮ್ಮ ಸಂಘಟನೆಯ ಕಾರ್ಯ’ ಎಂದು ತಿಳಿಸಿದರು.</p>.<p>ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಚನ್ನಬಸವ ಜಾನೇಕಲ್ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ‘ನಮ್ಮ ದೇಶದಲ್ಲಿ ಉತ್ಪಾದನೆಯಲ್ಲಿ ತೊಡಗುವ ಯುವಸಮುದಾಯ 60 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿದೆ. ಯುವ ಜನರು ಸ್ವತಂತ್ರವಾಗಿ ಚಿಂತಿಸುವ ಮತ್ತು ಪ್ರಶ್ನಿಸುವ ಗುಣವನ್ನು ಅಳವಡಿಸಿಕೊಳ್ಳಬೇಕು’ ಎಂದು ಎಐಡಿವೈಒ ಅಖಿಲ ಭಾರತೀಯ ಉಪಾಧ್ಯಕ್ಷ ಜಿ. ಶಶಿಕುಮಾರ ಸಲಹೆ ನೀಡಿದರು.</p>.<p>ನಗರದ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಭಾನುವಾರ ಎಐಡಿಎಸ್ಒ ಸಂಘಟನೆಯ 60ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ಯುವಜನರ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಮಾತನಾಡಿದ ಅವರು, ‘ಸಮಾಜದ ಪ್ರಗತಿಗೆ ಪೂರಕವಾದ ಯುವಕರ ಶಕ್ತಿಯನ್ನು ಬಳಸುವಲ್ಲಿ ಸರ್ಕಾರಗಳು ವಿಫಲವಾಗಿವೆ’ ಎಂದರು.</p>.<p>‘ರಾಜಕೀಯ ಪಕ್ಷಗಳು ಯುವಜನರನ್ನು ಕುಡಿತ, ಜೂಜು, ಮಾದಕ ವ್ಯಸನ, ಅಶ್ಲೀಲ ಸಿನಿಮಾ ಸಾಹಿತ್ಯದಲ್ಲಿ ಮುಳುಗಿಸಿ ಜಾತಿ, ಕೋಮು ವಿಭಜನೆಗೆ ಬಳಸಿಕೊಳ್ಳುತ್ತಿವೆ. ಯುವಜನರು ಸ್ವಾರ್ಥ ರಾಜಕೀಯ ಪಕ್ಷಗಳ ದಾಳಗಳಾದೆ ಸಮಾಜದಲ್ಲಿನ ಅನ್ಯಾಯ, ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ವಿರುದ್ಧ ಧ್ವನಿ ಎತ್ತಬೇಕು’ ಎಂದು ಹೇಳಿದರು.</p>.<p>‘ಯೌವನಕ್ಕೆ ಕಾಲಿಡುವಾಗ ಬರುವ ಭಾವನೆಗಳು ನೈಸರ್ಗಿಕ, ಅದು ತಪ್ಪಲ್ಲ. ಆದರೆ, ಅವುಗಳನ್ನು ಪ್ರಬುದ್ಧತೆಯಿಂದ ನಿರ್ವಹಿಸಿ. ಪ್ರೇಮದ ಹೆಸರಿನಲ್ಲಿ ಕೇವಲ ಆಕರ್ಷಣೆಗೆ ಬಲಿಯಾಗದಿರಿ. ಪ್ರೀತಿಯು ಪರಸ್ಪರ ಗೌರವ, ಘನತೆಯಿಂದಿರಬೇಕು. ನಾವುಗಳು ಪ್ರಾಣಿಗಳಲ್ಲ, ಸರಿ-ತಪ್ಪುಗಳನ್ನು ವಿಮರ್ಷಿಸಿ ಹೆಜ್ಜೆಯಿಡಬೇಕು’ ಎಂದರು.</p>.<p>ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಶರಣಪ್ಪ ಉದ್ಬಾಳ್ ಮಾತನಾಡಿ, ‘ದೇಶದ ಸ್ವಾತಂತ್ರ್ಯಕ್ಕೆ ಹಲವು ಜನ ಕ್ರಾಂತಿಕಾರಿಗಳು ತ್ಯಾಗ, ಬಲಿದಾನ ಮಾಡಿದ್ದಾರೆ. ಬ್ರಿಟಿಷರ ವಿರುದ್ಧ ಮಾತ್ರವಲ್ಲದೆ ದೇಶದಲ್ಲಿನ ಅಸಮಾನತೆಯ ವಿರುದ್ಧವು ಸಹ ಹೋರಾಡಿದ್ದರು’ ಎಂದರು.</p>.<p>‘ಉದಮಸಿಂಗ್, ಕರ್ತಾರ್ ಸಿಂಗ್ ಸರಬಾ, ಖುದಿರಾಂ ಬೋಸ್, ಸೂರ್ಯ ಸೇನ್, ನೇತಾಜಿ, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಅಶ್ಫಾಖುಲ್ಲಾ ಖಾನ್ ಸೇರಿದಂತೆ ಹಲವು ಮಹನೀಯರು ಮುಂತಾದವರು ಶೋಷಣಾ ರಹಿತ ಸಮಾಜವಾದಿ ಭಾರತದ ಕನಸು ಕಂಡಿದ್ದರು. ಆದರೆ, ಅದು ನನಸಾಗಲಿಲ್ಲ’ ಎಂದರು.</p>.<p>‘ಶಿವದಾಸ್ ಘೋಷ್ ಅವರ ಚಿಂತನೆಗಳ ಆಧಾರದಂತೆ ಎಐಡಿವೈಒ ಸ್ಥಾಪನೆಯಾಗಿದೆ. ಸ್ವಾತಂತ್ರ್ಯ ನಂತರ 77 ವರ್ಷಗಳಾದರೂ ಜನ ನಿರುದ್ಯೋಗ, ಬಡತನದಂತ ಸಮಸ್ಯೆಗಳಿಂದ ಬಳಲುತಿದ್ದಾರೆ. ಅಂತಹ ಸಮಸ್ಯೆಗಳ ವಿರುದ್ಧ ಹೋರಾಡುತ್ತಾ ಸಮಾನತೆಯ ಭಾರತ ಕಟ್ಟುವುದು ನಮ್ಮ ಸಂಘಟನೆಯ ಕಾರ್ಯ’ ಎಂದು ತಿಳಿಸಿದರು.</p>.<p>ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಚನ್ನಬಸವ ಜಾನೇಕಲ್ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>