ಬೌದ್ಧ ಧರ್ಮ ನಮೂದಿಸಲು ಮನವಿ

ಸುರಪುರ: ಪರಿಶಿಷ್ಟ ಜಾತಿಯ ಮಕ್ಕಳ ಶಾಲಾ ಪ್ರವೇಶ ಅರ್ಜಿಯಲ್ಲಿನ ಧರ್ಮ ಕಾಲಂನಲ್ಲಿ ‘ಬೌದ್ಧ‘ ಎಂದು ನಮೂದಿಸಬೇಕು ಎಂದು ಮೂಲನಿವಾಸಿ ಅಂಬೇಡ್ಕರ್ ಸೇನೆಯ ಮುಖಂಡರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧಿಕಾರಿ ಜಗದೀಶ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಸೇನೆಯ ರಾಜ್ಯ ಸಂಘಟನಾ ಸಂಚಾಲಕ ರಾಹುಲ ಹುಲಿಮನಿ ಮಾತನಾಡಿ, ‘ಪ್ರವೇಶಾತಿ ಸಂದರ್ಭದಲ್ಲಿ ಪೋಷಕರು ಧರ್ಮ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಲು ಹೇಳಿದರೆ ಶಾಲೆಯ ಸಿಬ್ಬಂದಿ ಯಾವುದೇ ಅಡೆತಡೆ ಮಾಡಬಾರದು’ ಎಂದರು.
‘ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಎಲ್ಲ ಶಾಲೆಗಳಿಗೆ ಮುಖ್ಯ ಗುರುಗಳಿಗೆ ಸುತ್ತೋಲೆ ಹೊರಡಿಸಿ ಈ ಬಗ್ಗೆ ಸ್ಪಷ್ಟ ಸೂಚನೆ ಕೊಡಬೇಕು’ ಎಂದು ಆಗ್ರಹಿಸಿದರು.
ವೆಂಕಟೇಶ ಬಡಿಗೇರ, ಹಣಮಂತ ರತ್ತಾಳ, ರಾಜು ಬಡಿಗೇರ, ಶಿವಣ್ಣ ಸಾಸಿಗೇರ ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.