<p><strong>ಕಕ್ಕೇರಾ:</strong> ‘ಪಟ್ಟಣದ ಸಮೀಪದ ಬಂಡೊಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ಅವರು ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷ ಸಾಬಯ್ಯ ಗೋನಾಲ ಆರೋಪಿಸಿದ್ದಾರೆ.</p>.<p>‘ಸರ್ಕಾರಿ ಶಾಲೆ ಕಟ್ಟಡ ಶಿಥಿಲಗೊಂಡಿರುತ್ತದೆ. ಕಟ್ಟಡಕ್ಕೆ ಸುಣ್ಣ ಬಣ್ಣವಿಲ್ಲ, ಸಮರ್ಪಕ ಕಲಿಕೆಯಿಲ್ಲ, ಕಲಿಕಾ ಸಾಮಗ್ರಿ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಹೀಗೆ ಹಲವಾರು ವರ್ಷಗಳಿಂದ ಬಂದಂತಹ ಹಣದ ಖರ್ಚು ವೆಚ್ಚಗಳ ಮಾಹಿತಿಯಿಲ್ಲ’ ಎಂದು ದೂರಿದ್ದಾರೆ.</p>.<p>‘ವಿದ್ಯಾರ್ಥಿಗಳ ದಾಖಲಾತಿ 86 ಇದ್ದು, ಹಾಜರಾತಿ 35 ಮಾತ್ರ. ಉಳಿದ ಮಕ್ಕಳ ಪೌಷ್ಠಿಕ ಆಹಾರ ದುರ್ಬಳಕೆ ಮಾಡುತ್ತಿದ್ದು, ಇದರ ಸೂಕ್ತ ದಾಖಲಾತಿಗಳೊಂದಿಗೆ ಬಿಇಒ ಅವರಿಗೆ ಮನವಿ ಮಾಡಿ ವಾರ ಕಳೆದರೂ, ಪ್ರಯೋಜನವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ಒಂದು ವಾರದೊಳಗೆ ಸೂಕ್ತ ದಾಖಲಾತಿಗಳನ್ನು ಅಧಿಕಾರಿಗಳು ಪರೀಶಿಲನೆ ಮಾಡಿ, ಮುಖ್ಯಶಿಕ್ಷಕಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.</p>.<div><blockquote>ನಮ್ಮ ಶಾಲೆಯಲ್ಲಿ ಯಾವುದೇ ಹಣ ದುರ್ಬಳಕೆಯಾಗಿಲ್ಲ. ಪ್ರತಿಯೊಂದಕ್ಕೂ ದಾಖಲೆಯಿದೆ. ನಾನು ಯಾವುದೇ ತಪ್ಪು ಮಾಡಿಲ್ಲ </blockquote><span class="attribution">ವಿಜಯಲಕ್ಷ್ಮಿ ಮುಖ್ಯಶಿಕ್ಷಕಿ</span></div>
<p><strong>ಕಕ್ಕೇರಾ:</strong> ‘ಪಟ್ಟಣದ ಸಮೀಪದ ಬಂಡೊಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ಅವರು ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷ ಸಾಬಯ್ಯ ಗೋನಾಲ ಆರೋಪಿಸಿದ್ದಾರೆ.</p>.<p>‘ಸರ್ಕಾರಿ ಶಾಲೆ ಕಟ್ಟಡ ಶಿಥಿಲಗೊಂಡಿರುತ್ತದೆ. ಕಟ್ಟಡಕ್ಕೆ ಸುಣ್ಣ ಬಣ್ಣವಿಲ್ಲ, ಸಮರ್ಪಕ ಕಲಿಕೆಯಿಲ್ಲ, ಕಲಿಕಾ ಸಾಮಗ್ರಿ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಹೀಗೆ ಹಲವಾರು ವರ್ಷಗಳಿಂದ ಬಂದಂತಹ ಹಣದ ಖರ್ಚು ವೆಚ್ಚಗಳ ಮಾಹಿತಿಯಿಲ್ಲ’ ಎಂದು ದೂರಿದ್ದಾರೆ.</p>.<p>‘ವಿದ್ಯಾರ್ಥಿಗಳ ದಾಖಲಾತಿ 86 ಇದ್ದು, ಹಾಜರಾತಿ 35 ಮಾತ್ರ. ಉಳಿದ ಮಕ್ಕಳ ಪೌಷ್ಠಿಕ ಆಹಾರ ದುರ್ಬಳಕೆ ಮಾಡುತ್ತಿದ್ದು, ಇದರ ಸೂಕ್ತ ದಾಖಲಾತಿಗಳೊಂದಿಗೆ ಬಿಇಒ ಅವರಿಗೆ ಮನವಿ ಮಾಡಿ ವಾರ ಕಳೆದರೂ, ಪ್ರಯೋಜನವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ಒಂದು ವಾರದೊಳಗೆ ಸೂಕ್ತ ದಾಖಲಾತಿಗಳನ್ನು ಅಧಿಕಾರಿಗಳು ಪರೀಶಿಲನೆ ಮಾಡಿ, ಮುಖ್ಯಶಿಕ್ಷಕಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.</p>.<div><blockquote>ನಮ್ಮ ಶಾಲೆಯಲ್ಲಿ ಯಾವುದೇ ಹಣ ದುರ್ಬಳಕೆಯಾಗಿಲ್ಲ. ಪ್ರತಿಯೊಂದಕ್ಕೂ ದಾಖಲೆಯಿದೆ. ನಾನು ಯಾವುದೇ ತಪ್ಪು ಮಾಡಿಲ್ಲ </blockquote><span class="attribution">ವಿಜಯಲಕ್ಷ್ಮಿ ಮುಖ್ಯಶಿಕ್ಷಕಿ</span></div>