<p>ಕಕ್ಕೇರಾ: ‘ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ, ಉನ್ನತ ಶಿಕ್ಷಣ ಕೊಡಿಸಿದರೆ ಅವರೇ ನಿಮ್ಮ ಮುಂದಿನ ಆಸ್ತಿಯಾಗುತ್ತಾರೆ’ ಎಂದು ಕೆಂಬಾವಿ ಪಿಎಸ್ಐ ಹಣಮಂತ ಹೇಳಿದರು.</p>.<p>ಸಮೀಪದ ಶಾಂತಪುರ ಸರ್ಕಾರಿ ಶಾಲೆಯಲ್ಲಿ ಮಕ್ಕಳೇ ರಚಿಸಿದ ‘ಶಾಂತ ಹೂಬನ’ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಿಸಿ, ಮಕ್ಕಳನ್ನು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತನ್ನಾಗಿ ಮಾಡಬೇಡಿ, ಉತ್ತಮ ಶಿಕ್ಷಕರ ತಂಡ ಶ್ರಮ ಮಕ್ಕಳ ಸಂಕಲನದಲ್ಲಿ ಕಾಣುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ವಿವಿಧ ಸೌಲಭ್ಯ ಬಳಿಸಿಕೊಂಡು ಉನ್ನತ ಮಾದರಿ ವ್ಯಕ್ತಿಗಳಾಗಬೇಕೆಂದು ಸಲಹೆ ನೀಡಿದರು.</p>.<p>ನಂತರ ಮುಖ್ಯಶಿಕ್ಷಕ ಕಾಳಪ್ಪ ಬಡಿಗೇರ ಮಾತನಾಡಿ, ಇಲ್ಲಿಯವರಿಗೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ ತೃಪ್ತಿಯಿದೆ, ನಮ್ಮ ಶಿಕ್ಷಕರ ಶ್ರಮವೇ ಇಂದು ನಮ್ಮ ಮಕ್ಕಳು ಶಾಂತ ಹೂಬನ ಕವನ ಸಂಕಲನ ಬರೆಯುವುದರಲ್ಲಿ ಸಾಮಾನ್ಯ ಮಾತಲ್ಲ ಎಂದು ಹೇಳಿದರು.</p>.<p>ತಾಲ್ಲೂಕು ವರ್ಷದ ವ್ಯಕ್ತಿಯಾಗಿ ಆಯ್ಕೆಯಾದ ಹೊನ್ನಪ್ಪ ಹಾದಿಮನಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.</p>.<p>ಎಸ್ಡಿಎಂಸಿ ಅಧ್ಯಕ್ಷ ಚಿದಾನಂದ ಪಾಟೀಲ, ಗ್ರಾಮ ಪಂಚಾಯತ ಅಧ್ಯಕ್ಷೆ ದೇವಕ್ಕೆಮ್ಮ ದಳಪತಿ, ಮಲಕಪ್ಪ ಲಿಂಗದಳ್ಳಿ, ಶರಣಪ್ಪ ಬಾದ್ಯಾಪುರ, ಮನೋಹರ, ಯಲ್ಲಪ್ಪ, ಮಾಳಪ್ಪ, ಜಯಂತಿ, ನಾಗರತ್ನ, ಬಾಲರಾಜ, ಪದ್ಮಾವತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಕ್ಕೇರಾ: ‘ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ, ಉನ್ನತ ಶಿಕ್ಷಣ ಕೊಡಿಸಿದರೆ ಅವರೇ ನಿಮ್ಮ ಮುಂದಿನ ಆಸ್ತಿಯಾಗುತ್ತಾರೆ’ ಎಂದು ಕೆಂಬಾವಿ ಪಿಎಸ್ಐ ಹಣಮಂತ ಹೇಳಿದರು.</p>.<p>ಸಮೀಪದ ಶಾಂತಪುರ ಸರ್ಕಾರಿ ಶಾಲೆಯಲ್ಲಿ ಮಕ್ಕಳೇ ರಚಿಸಿದ ‘ಶಾಂತ ಹೂಬನ’ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಿಸಿ, ಮಕ್ಕಳನ್ನು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತನ್ನಾಗಿ ಮಾಡಬೇಡಿ, ಉತ್ತಮ ಶಿಕ್ಷಕರ ತಂಡ ಶ್ರಮ ಮಕ್ಕಳ ಸಂಕಲನದಲ್ಲಿ ಕಾಣುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ವಿವಿಧ ಸೌಲಭ್ಯ ಬಳಿಸಿಕೊಂಡು ಉನ್ನತ ಮಾದರಿ ವ್ಯಕ್ತಿಗಳಾಗಬೇಕೆಂದು ಸಲಹೆ ನೀಡಿದರು.</p>.<p>ನಂತರ ಮುಖ್ಯಶಿಕ್ಷಕ ಕಾಳಪ್ಪ ಬಡಿಗೇರ ಮಾತನಾಡಿ, ಇಲ್ಲಿಯವರಿಗೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ ತೃಪ್ತಿಯಿದೆ, ನಮ್ಮ ಶಿಕ್ಷಕರ ಶ್ರಮವೇ ಇಂದು ನಮ್ಮ ಮಕ್ಕಳು ಶಾಂತ ಹೂಬನ ಕವನ ಸಂಕಲನ ಬರೆಯುವುದರಲ್ಲಿ ಸಾಮಾನ್ಯ ಮಾತಲ್ಲ ಎಂದು ಹೇಳಿದರು.</p>.<p>ತಾಲ್ಲೂಕು ವರ್ಷದ ವ್ಯಕ್ತಿಯಾಗಿ ಆಯ್ಕೆಯಾದ ಹೊನ್ನಪ್ಪ ಹಾದಿಮನಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.</p>.<p>ಎಸ್ಡಿಎಂಸಿ ಅಧ್ಯಕ್ಷ ಚಿದಾನಂದ ಪಾಟೀಲ, ಗ್ರಾಮ ಪಂಚಾಯತ ಅಧ್ಯಕ್ಷೆ ದೇವಕ್ಕೆಮ್ಮ ದಳಪತಿ, ಮಲಕಪ್ಪ ಲಿಂಗದಳ್ಳಿ, ಶರಣಪ್ಪ ಬಾದ್ಯಾಪುರ, ಮನೋಹರ, ಯಲ್ಲಪ್ಪ, ಮಾಳಪ್ಪ, ಜಯಂತಿ, ನಾಗರತ್ನ, ಬಾಲರಾಜ, ಪದ್ಮಾವತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>