ಮುಖಂಡ ಹಣಮಂತ್ರಾಯ ಚಂದಲಾಪುರ ಮಾತನಾಡಿ, ವಿತರಣಾ ಕಾಲುವೆಯ ಮುಖಾಂತರ ಹೊಲಗಳಿಗೆ ನೀರು ಮುಟ್ಟಿಸಲು ಕಾಡಾ ಕಾಲುವೆ ನಿರ್ಮಾಣ, ನಿರ್ವಹಣೆ, ಪರಿಶಿಷ್ಟ ಸಮೂದಾಯದ ಜನರ ಯೋಜನೆಗಳ ಅನುಷ್ಠಾನ, ರಸ್ತೆಗಳ ನಿರ್ಮಾಣ ಈ ಕಚೇರಿಯ ಜವಾಬ್ದಾರಿಯಾಗಿತ್ತು. ಇದಕ್ಕೆ ಹೆಚ್ಚಿನ ಅನುದಾನವೂ ಬರುತ್ತಿತ್ತು. ಕಚೇರಿ ಸ್ಥಳಾಂತರದಿಂದ ಈ ಎಲ್ಲ ಕಾರ್ಯಗಳು ಸ್ಥಗಿತಗೊಳ್ಳಲಿವೆ ಎಂದು ಆತಂಕ ವ್ಯಕ್ತಪಡಿಸಿದರು.