ಈ ಕುರಿತು ಪ್ರತಿಕ್ರಿಯಿಸಿದ ಯಾದಗಿರಿ ತಾಲ್ಲೂಕಿನ ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ, ‘ಡಾ.ಖಾಜಾ ಬೇಗಂ ತರಬೇತಿಗಾಗಿ ಯಾದಗಿರಿಗೆ ಬಂದಿದ್ದರು. ವರದಿಗಳು ನಾರ್ಮಲ್ ಇದ್ದ ಕಾರಣ ಹೀಗಾಗಿ ಸ್ಟಾಫ್ ನರ್ಸ್ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಆದರೆ, ಮೊದಲು ಶಿಶು ಕಾಲು ಹೊರಗೆ ಬಂದಿದೆ. ನಂತರ ಉಸಿರಾಟದ ತೊಂದರೆಯಿಂದ ಶಿಶು ಮೃತಪಟ್ಟಿದೆ’ ಎಂದರು.