<p>ಹುಣಸಗಿ: ತಾಲ್ಲೂಕಿನ ಗಡಿಗ್ರಾಮ ವಾಗಿರುವ ಮಾಳನೂರು ಗ್ರಾಮದ ಬಳಿ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅಚ್ಚುಕಟ್ಟು ಪ್ರದೇಶದ ರೈತರಿಗೆ ಮತ್ತೆ ಆತಂಕ ಉಂಟಾಗುವಂತೆ ಮಾಡಿದೆ.</p>.<p>ಮಾಳನೂರು ಗುಳಬಾಳ ಗ್ರಾಮದ ಮುಖ್ಯರಸ್ತೆಯಲ್ಲಿ ಹಾದು ಹೋಗಿರುವ ಈ ಎಡದಂಡೆ ಮುಖ್ಯ ಕಾಲುವೆಯ ಒಳಭಾಗದಲ್ಲಿ 40 ನೇ ಕಿ.ಮೀ ಬಳಿ ಅಲ್ಪ ಪ್ರಮಾಣದ ಬಿರುಕು ಕಂಡು ಬಂದಿದೆ. ಕಾಲುವೆಯಲ್ಲಿ ನೀರು ನಿಲುಗಡೆಗಾಗಿ ತಡೆಗೋಡೆಯ ಅಳವಡಿಸಿರುವ ಮುಂಭಾಗದಲ್ಲಿ ನೀರಿನ ಒತ್ತಡಕ್ಕೆ ಅಲ್ಪ ಪ್ರಮಾಣದ ಕಾಲುವೆ ಮೇಲ್ಭಾಗದ ಆರ್ಸಿಸಿ ಲೈನಿಂಗ್ ಪದರ<br />ಕಿತ್ತು ಹೋಗಿದೆ.</p>.<p>ಕೆಲ ವರ್ಷಗಳ ಹಿಂದೆ ಈ ಎಡದಂಡೆ ಮುಖ್ಯ ಕಾಲುವೆಯನ್ನು ನವೀಕರಿಸಲಾಗಿತ್ತು. ಆದರೆ ಅಲ್ಲಲ್ಲಿ ಪದೇ ಪದೇ ಇಂತಹ ಪ್ರಕರಣಗಳು ಕಂಡು ಬರುತ್ತಲೆ ಇವೆ. ಆದ್ದರಿಂದ ನಾಲ್ಕು ಜಿಲ್ಲೆಗಳ ಲಕ್ಷಾಂತರ ರೈತರಿಗೆ ನೀರು ಒದಗಿಸುವ ಈ ಮುಖ್ಯ ಕಾಲುವೆಯ ಕುರಿತು ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು. ರೈತರಿಗೆ ಸಮರ್ಪಕ ನೀರು ಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಜುಮ್ಮಣ್ಣ ಬಲಶೆಟ್ಟಿಹಾಳ ಒತ್ತಾಯಿಸಿದ್ದಾರೆ.</p>.<p>ಈ ಕುರಿತು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ್ ನಾಯ್ಕೋಡಿ ಮಾತನಾಡಿ, ಇದರ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ಕಾಲುವೆಗೆ ನೀರು ಹರಿಸಿದರೂ ಯಾವುದೆ ತೊಂದರೆ ಆಗುವದಿಲ್ಲ. ಅಚ್ಚುಕಟ್ಟು ಪ್ರದೇಶದ ರೈತರು ಯಾವುದೆ ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದ್ದಾರೆ.</p>.<p>2012ರಲ್ಲಿ ಈ ಭಾಗದಲ್ಲಿ ಕಾಲುವೆಗೆ ಆರ್ಸಿಸಿ ಲೈನಿಂಗ್ ಹಾಕಲಾಗಿತ್ತು. ಈ ಭಾಗದಲ್ಲಿ ಕಾಲುವೆ ಹರಿಯುವ ಸ್ಥಳದ ಬಳಿ ಆಳವಾದ ಕಠಿಣ ಕಲ್ಲಿನ ಪದರು ಇರುವುದರಿಂದ ಯಾವುದೆ ಹಾನಿಯಾಗುವದು ಸಾಧ್ಯತೆ ಆಗುವುದಿಲ್ಲ. ಮೆಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಣಸಗಿ: ತಾಲ್ಲೂಕಿನ ಗಡಿಗ್ರಾಮ ವಾಗಿರುವ ಮಾಳನೂರು ಗ್ರಾಮದ ಬಳಿ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅಚ್ಚುಕಟ್ಟು ಪ್ರದೇಶದ ರೈತರಿಗೆ ಮತ್ತೆ ಆತಂಕ ಉಂಟಾಗುವಂತೆ ಮಾಡಿದೆ.</p>.<p>ಮಾಳನೂರು ಗುಳಬಾಳ ಗ್ರಾಮದ ಮುಖ್ಯರಸ್ತೆಯಲ್ಲಿ ಹಾದು ಹೋಗಿರುವ ಈ ಎಡದಂಡೆ ಮುಖ್ಯ ಕಾಲುವೆಯ ಒಳಭಾಗದಲ್ಲಿ 40 ನೇ ಕಿ.ಮೀ ಬಳಿ ಅಲ್ಪ ಪ್ರಮಾಣದ ಬಿರುಕು ಕಂಡು ಬಂದಿದೆ. ಕಾಲುವೆಯಲ್ಲಿ ನೀರು ನಿಲುಗಡೆಗಾಗಿ ತಡೆಗೋಡೆಯ ಅಳವಡಿಸಿರುವ ಮುಂಭಾಗದಲ್ಲಿ ನೀರಿನ ಒತ್ತಡಕ್ಕೆ ಅಲ್ಪ ಪ್ರಮಾಣದ ಕಾಲುವೆ ಮೇಲ್ಭಾಗದ ಆರ್ಸಿಸಿ ಲೈನಿಂಗ್ ಪದರ<br />ಕಿತ್ತು ಹೋಗಿದೆ.</p>.<p>ಕೆಲ ವರ್ಷಗಳ ಹಿಂದೆ ಈ ಎಡದಂಡೆ ಮುಖ್ಯ ಕಾಲುವೆಯನ್ನು ನವೀಕರಿಸಲಾಗಿತ್ತು. ಆದರೆ ಅಲ್ಲಲ್ಲಿ ಪದೇ ಪದೇ ಇಂತಹ ಪ್ರಕರಣಗಳು ಕಂಡು ಬರುತ್ತಲೆ ಇವೆ. ಆದ್ದರಿಂದ ನಾಲ್ಕು ಜಿಲ್ಲೆಗಳ ಲಕ್ಷಾಂತರ ರೈತರಿಗೆ ನೀರು ಒದಗಿಸುವ ಈ ಮುಖ್ಯ ಕಾಲುವೆಯ ಕುರಿತು ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು. ರೈತರಿಗೆ ಸಮರ್ಪಕ ನೀರು ಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಜುಮ್ಮಣ್ಣ ಬಲಶೆಟ್ಟಿಹಾಳ ಒತ್ತಾಯಿಸಿದ್ದಾರೆ.</p>.<p>ಈ ಕುರಿತು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ್ ನಾಯ್ಕೋಡಿ ಮಾತನಾಡಿ, ಇದರ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ಕಾಲುವೆಗೆ ನೀರು ಹರಿಸಿದರೂ ಯಾವುದೆ ತೊಂದರೆ ಆಗುವದಿಲ್ಲ. ಅಚ್ಚುಕಟ್ಟು ಪ್ರದೇಶದ ರೈತರು ಯಾವುದೆ ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದ್ದಾರೆ.</p>.<p>2012ರಲ್ಲಿ ಈ ಭಾಗದಲ್ಲಿ ಕಾಲುವೆಗೆ ಆರ್ಸಿಸಿ ಲೈನಿಂಗ್ ಹಾಕಲಾಗಿತ್ತು. ಈ ಭಾಗದಲ್ಲಿ ಕಾಲುವೆ ಹರಿಯುವ ಸ್ಥಳದ ಬಳಿ ಆಳವಾದ ಕಠಿಣ ಕಲ್ಲಿನ ಪದರು ಇರುವುದರಿಂದ ಯಾವುದೆ ಹಾನಿಯಾಗುವದು ಸಾಧ್ಯತೆ ಆಗುವುದಿಲ್ಲ. ಮೆಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>