<p><strong>ಯಾದಗಿರಿ:</strong>ತರಕಾರಿ ಸೇಬು ಟೊಮೆಟೊ ದರ ಇಳಿಕೆಯಾಗಿದೆ. ಕಳೆದ ವಾರಕ್ಕಿಂತ ₹20 ಇಳಿಕೆಯಾಗಿದ್ದು, ಕೇಜಿಗೆ ₹40 ಇದೆ. ಇನ್ನೇನು ಎಲ್ಲ ಕಡೆಟೊಮೆಟೊ ಅಭಾವವಾಗಿ ದರ ಏರಿಕೆಯಾಗುತ್ತದೆ ಎಂದು ಎಣಿಸಿದ್ದ ಗ್ರಾಹಕರಿಗೆ ಬೆಲೆ ಇಳಿಕೆ ಸಮಾಧಾನ ಮೂಡಿಸಿದೆ.</p>.<p>ದರ ಏರಿಕೆಯಾಗಿದ್ದರಿಂದ ರೈತರು, ವ್ಯಾಪಾರಸ್ಥರು ಖುಷ್ ಆಗಿದ್ದರು. ಆದರೆ, ಒಂದೇ ವಾರದಲ್ಲಿ ದರ ಸಮರ ನಡೆದು ಇಳಿಕೆಯಾಗಿರುವುದು ರೈತರಿಗೆ ನಿರಾಶೆ ಉಂಟು ಮಾಡಿದೆ.</p>.<p>ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಅತ್ಯಧಿಕ ಮಳೆ ಬಂದು ತರಕಾರಿ ಬೆಳೆ ನಾಶವಾಗಿತ್ತು. ಆದರಲ್ಲಿಟೊಮೆಟೊ ಬೆಳೆಯೂ ಸೇರಿತ್ತು. ಗುರುಮಠಕಲ್, ಶಹಾಪುರ ತಾಲ್ಲೂಕಿನಲ್ಲಿ ತರಕಾರಿ ಬೆಳೆಗಳು ಹಾನಿಯಾಗಿತ್ತು. ಆಭಾವ ಸೃಷ್ಟಿಯಾಗುತ್ತದೆ ಎನ್ನುವಾಗಲೇ ದರ ಇಳಿಕೆಯಾಗಿದೆ.</p>.<p>ಇನ್ನುಳಿದಂತೆ ಗಜ್ಜರಿ, ಬೀನ್ಸ್ ಬೆಲೆ ₹40 ರಷ್ಟು ಏರಿಕೆಯಾಗಿ ಅತಿ ದರ ತರಕಾರಿ ಎನಿಸಿಕೊಂಡಿದೆ.ಬೀನ್ಸ್ಕಳೆದ ವಾರ ₹80 ಇದ್ದಿದ್ದು,ಈ ವಾರ ₹120 ಕೇಜಿಗೆ ಮಾರಾಟವಾಗುತ್ತಿದೆ.ಗಜ್ಜರಿ₹80 ಇತ್ತು. ಈ ವಾರ ₹120ಕ್ಕೆ ಜಿಗಿತ ಕಂಡಿದೆ. ಕಳೆದ ವಾರಕ್ಕಿಂತ ಹೀರೆಕಾಯಿಯೂ ಹಿರಿಹಿರಿ ಹಿಗ್ಗಿದೆ.₹80 ರಿಂದ ₹120ಕ್ಕೆ ಏರಿಕೆಯಾಗಿದೆ.</p>.<p>ಹೂಕೋಸು ಕಳೆದ ವಾರಕ್ಕಿಂತ ₹20 ಜಾಸ್ತಿಯಾಗಿ ₹80ಗೆ ಕೇಜಿ ದರ ಇದೆ.ಬಿಟ್ ರೂಟ್₹60 ಇದ್ದಿದ್ದು,₹80 ಆಗಿದೆ. ಆದರೆ,ಬೆಂಡೆಕಾಯಿದರ ಕಳೆದ ವಾರಕ್ಕಿಂತ ₹20ಇಳಿಕೆಯಾಗಿದೆ. ಕಳೆದ ವಾರ ₹60ಇತ್ತು. ಈ ವಾರ ₹40 ಕೇಜಿ ಇದೆ.ಮೆಣಸಿನಕಾಯಿದರವೂ ಇಳಿಕೆ ಕಂಡು ಕೇಜಿ ₹60 ಆಗಿದೆ. ಶ್ರಾವಣ ಮಾಸದಲ್ಲಿ ತರಕಾರಿ ರಾಜಬದನೆಕಾಯಿ ಬೆಲೆ ಗಗನಕ್ಕೇರಿತ್ತು. ಕಳೆದ ವಾರ ಇರುವಷ್ಟೇಈ ವಾರವೂ ಸ್ಥಿರವಾಗಿದೆ.ಇನ್ನುಳಿದಂತೆ ಇತರ ತರಕಾರಿ ದರ ಯಥಾಸ್ಥಿತಿ ಇದೆ.</p>.<p>ಕಳೆದ ವಾರ ನುಗ್ಗೆಕಾಯಿ ದರ ₹160ಗೆ ಕೇಜಿ ಇತ್ತು. ಈ ಬಾರಿ ಆವಕ ಹೆಚ್ಚಾಗಿದ್ದರಿಂದ ₹80 ದರ ಇದೆ. ಆದರೆ, ಸೌತೆಕಾಯಿ ದರ ಹೆಚ್ಚಳವಾಗಿದೆ.</p>.<p><strong>ಸೊಪ್ಪುಗಳ ದರ</strong></p>.<p>ಪಾಲಕ್ ಸೊಪ್ಪು ಕಳೆದ ವಾರದಂತೆ ಈ ವಾರವೂ ₹20ಗೆ 3 ಕಟ್ಟು ಮಾರಾಟವಾಗುತ್ತಿದೆ.ಸಬ್ಬಸಿಗೆ ₹10ಗೆ ಒಂದು ಕಟ್ಟು, ಮೆಂತೆ₹20ಗೆ ಒಂದು ಕಟ್ಟು, ರಾಜಗಿರಿ ₹20ಗೆ ಮೂರು ಕಟ್ಟು,ಪುಂಡಿ ಪಲ್ಯೆ ₹20ಗೆ ನಾಲ್ಕು ಕಟ್ಟುಮಾರಾಟವಾಗಿದೆ.ಕೋತಂಬರಿ ₹30ಗೆ ಒಂದು ಕಟ್ಟು,ಪುದೀನಾ ₹30ಗೆ ಒಂದು ದರ ಇದೆ.</p>.<p>ಕಳೆದ ವಾರ ₹120 ಕೇಜಿ ಈರುಳ್ಳಿ ಸೊಪ್ಪುಇತ್ತು. ಈ ವಾರ ₹40 ಇಳಿಕೆಯಾಗಿ ₹80 ಕೆಜಿ ಮಾರಾಟವಾಗುತ್ತಿದೆ.ಬೆಳ್ಳೊಳ್ಳಿ ₹120ಕೇಜಿ,ಶುಂಠಿ ₹80 ಕೇಜಿ ಇದೆ.</p>.<p>***</p>.<p>ರಾಯಚೂರು, ಕಲಬುರ್ಗಿಯಿಂದ ತರಕಾರಿ ತರಿಸುತ್ತೇವೆ. ಮಳೆಯಿಂದ ಬೆಳೆ ನಾಶವಾಗಿದೆ. ಹೀಗಾಗಿ ಕೆಲ ತರಕಾರಿ ಬೆಲೆ ಏರಿಕೆಯಾಗಿದೆ<br /><em><strong>ಮಹಮ್ಮದ್ ಇಮ್ರಾನ್, ತರಕಾರಿ ವ್ಯಾಪಾರಿ</strong></em></p>.<p>***</p>.<p>ಕಳೆದ ವಾರಕ್ಕಿಂತ ತರಕಾರಿ ತುಟ್ಟಿಯಾಗಿದೆ. ಲಾಕ್ಡೌನ್ ಪ್ರಭಾವ ತರಕಾರಿ ಮೇಲೆ ಬಿದ್ದಿದೆ. ರೈತರಿಗೆ ಉತ್ತಮ ಬೆಲೆ ಸಿಕ್ಕರೆ ಅವರಿಗೆ ಅನುಕೂಲ<br /><em><strong>ಶಂಕರ ಪವಾರ್, ಗ್ರಾಹಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong>ತರಕಾರಿ ಸೇಬು ಟೊಮೆಟೊ ದರ ಇಳಿಕೆಯಾಗಿದೆ. ಕಳೆದ ವಾರಕ್ಕಿಂತ ₹20 ಇಳಿಕೆಯಾಗಿದ್ದು, ಕೇಜಿಗೆ ₹40 ಇದೆ. ಇನ್ನೇನು ಎಲ್ಲ ಕಡೆಟೊಮೆಟೊ ಅಭಾವವಾಗಿ ದರ ಏರಿಕೆಯಾಗುತ್ತದೆ ಎಂದು ಎಣಿಸಿದ್ದ ಗ್ರಾಹಕರಿಗೆ ಬೆಲೆ ಇಳಿಕೆ ಸಮಾಧಾನ ಮೂಡಿಸಿದೆ.</p>.<p>ದರ ಏರಿಕೆಯಾಗಿದ್ದರಿಂದ ರೈತರು, ವ್ಯಾಪಾರಸ್ಥರು ಖುಷ್ ಆಗಿದ್ದರು. ಆದರೆ, ಒಂದೇ ವಾರದಲ್ಲಿ ದರ ಸಮರ ನಡೆದು ಇಳಿಕೆಯಾಗಿರುವುದು ರೈತರಿಗೆ ನಿರಾಶೆ ಉಂಟು ಮಾಡಿದೆ.</p>.<p>ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಅತ್ಯಧಿಕ ಮಳೆ ಬಂದು ತರಕಾರಿ ಬೆಳೆ ನಾಶವಾಗಿತ್ತು. ಆದರಲ್ಲಿಟೊಮೆಟೊ ಬೆಳೆಯೂ ಸೇರಿತ್ತು. ಗುರುಮಠಕಲ್, ಶಹಾಪುರ ತಾಲ್ಲೂಕಿನಲ್ಲಿ ತರಕಾರಿ ಬೆಳೆಗಳು ಹಾನಿಯಾಗಿತ್ತು. ಆಭಾವ ಸೃಷ್ಟಿಯಾಗುತ್ತದೆ ಎನ್ನುವಾಗಲೇ ದರ ಇಳಿಕೆಯಾಗಿದೆ.</p>.<p>ಇನ್ನುಳಿದಂತೆ ಗಜ್ಜರಿ, ಬೀನ್ಸ್ ಬೆಲೆ ₹40 ರಷ್ಟು ಏರಿಕೆಯಾಗಿ ಅತಿ ದರ ತರಕಾರಿ ಎನಿಸಿಕೊಂಡಿದೆ.ಬೀನ್ಸ್ಕಳೆದ ವಾರ ₹80 ಇದ್ದಿದ್ದು,ಈ ವಾರ ₹120 ಕೇಜಿಗೆ ಮಾರಾಟವಾಗುತ್ತಿದೆ.ಗಜ್ಜರಿ₹80 ಇತ್ತು. ಈ ವಾರ ₹120ಕ್ಕೆ ಜಿಗಿತ ಕಂಡಿದೆ. ಕಳೆದ ವಾರಕ್ಕಿಂತ ಹೀರೆಕಾಯಿಯೂ ಹಿರಿಹಿರಿ ಹಿಗ್ಗಿದೆ.₹80 ರಿಂದ ₹120ಕ್ಕೆ ಏರಿಕೆಯಾಗಿದೆ.</p>.<p>ಹೂಕೋಸು ಕಳೆದ ವಾರಕ್ಕಿಂತ ₹20 ಜಾಸ್ತಿಯಾಗಿ ₹80ಗೆ ಕೇಜಿ ದರ ಇದೆ.ಬಿಟ್ ರೂಟ್₹60 ಇದ್ದಿದ್ದು,₹80 ಆಗಿದೆ. ಆದರೆ,ಬೆಂಡೆಕಾಯಿದರ ಕಳೆದ ವಾರಕ್ಕಿಂತ ₹20ಇಳಿಕೆಯಾಗಿದೆ. ಕಳೆದ ವಾರ ₹60ಇತ್ತು. ಈ ವಾರ ₹40 ಕೇಜಿ ಇದೆ.ಮೆಣಸಿನಕಾಯಿದರವೂ ಇಳಿಕೆ ಕಂಡು ಕೇಜಿ ₹60 ಆಗಿದೆ. ಶ್ರಾವಣ ಮಾಸದಲ್ಲಿ ತರಕಾರಿ ರಾಜಬದನೆಕಾಯಿ ಬೆಲೆ ಗಗನಕ್ಕೇರಿತ್ತು. ಕಳೆದ ವಾರ ಇರುವಷ್ಟೇಈ ವಾರವೂ ಸ್ಥಿರವಾಗಿದೆ.ಇನ್ನುಳಿದಂತೆ ಇತರ ತರಕಾರಿ ದರ ಯಥಾಸ್ಥಿತಿ ಇದೆ.</p>.<p>ಕಳೆದ ವಾರ ನುಗ್ಗೆಕಾಯಿ ದರ ₹160ಗೆ ಕೇಜಿ ಇತ್ತು. ಈ ಬಾರಿ ಆವಕ ಹೆಚ್ಚಾಗಿದ್ದರಿಂದ ₹80 ದರ ಇದೆ. ಆದರೆ, ಸೌತೆಕಾಯಿ ದರ ಹೆಚ್ಚಳವಾಗಿದೆ.</p>.<p><strong>ಸೊಪ್ಪುಗಳ ದರ</strong></p>.<p>ಪಾಲಕ್ ಸೊಪ್ಪು ಕಳೆದ ವಾರದಂತೆ ಈ ವಾರವೂ ₹20ಗೆ 3 ಕಟ್ಟು ಮಾರಾಟವಾಗುತ್ತಿದೆ.ಸಬ್ಬಸಿಗೆ ₹10ಗೆ ಒಂದು ಕಟ್ಟು, ಮೆಂತೆ₹20ಗೆ ಒಂದು ಕಟ್ಟು, ರಾಜಗಿರಿ ₹20ಗೆ ಮೂರು ಕಟ್ಟು,ಪುಂಡಿ ಪಲ್ಯೆ ₹20ಗೆ ನಾಲ್ಕು ಕಟ್ಟುಮಾರಾಟವಾಗಿದೆ.ಕೋತಂಬರಿ ₹30ಗೆ ಒಂದು ಕಟ್ಟು,ಪುದೀನಾ ₹30ಗೆ ಒಂದು ದರ ಇದೆ.</p>.<p>ಕಳೆದ ವಾರ ₹120 ಕೇಜಿ ಈರುಳ್ಳಿ ಸೊಪ್ಪುಇತ್ತು. ಈ ವಾರ ₹40 ಇಳಿಕೆಯಾಗಿ ₹80 ಕೆಜಿ ಮಾರಾಟವಾಗುತ್ತಿದೆ.ಬೆಳ್ಳೊಳ್ಳಿ ₹120ಕೇಜಿ,ಶುಂಠಿ ₹80 ಕೇಜಿ ಇದೆ.</p>.<p>***</p>.<p>ರಾಯಚೂರು, ಕಲಬುರ್ಗಿಯಿಂದ ತರಕಾರಿ ತರಿಸುತ್ತೇವೆ. ಮಳೆಯಿಂದ ಬೆಳೆ ನಾಶವಾಗಿದೆ. ಹೀಗಾಗಿ ಕೆಲ ತರಕಾರಿ ಬೆಲೆ ಏರಿಕೆಯಾಗಿದೆ<br /><em><strong>ಮಹಮ್ಮದ್ ಇಮ್ರಾನ್, ತರಕಾರಿ ವ್ಯಾಪಾರಿ</strong></em></p>.<p>***</p>.<p>ಕಳೆದ ವಾರಕ್ಕಿಂತ ತರಕಾರಿ ತುಟ್ಟಿಯಾಗಿದೆ. ಲಾಕ್ಡೌನ್ ಪ್ರಭಾವ ತರಕಾರಿ ಮೇಲೆ ಬಿದ್ದಿದೆ. ರೈತರಿಗೆ ಉತ್ತಮ ಬೆಲೆ ಸಿಕ್ಕರೆ ಅವರಿಗೆ ಅನುಕೂಲ<br /><em><strong>ಶಂಕರ ಪವಾರ್, ಗ್ರಾಹಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>