ಹುಣಸಗಿ ಕ್ಲಸ್ಟರ್ನ ಸಿಆರ್ಪಿ ಹಾಗೂ ಅಕ್ಷರ ದಾಸೋಹ ಅಧಿಕಾರಿಗಳನ್ನು ಅಮಾನತುಗೊಳಿಸದೇ ನೊಟೀಸ್ ನೀಡಿ ಕೈತೊಳೆದುಕೊಂಡಿರುವುದು ಖೇದಕರ ಎಂದು ಸಮಿತಿಯ ತಾಲ್ಲೂಕು ಅಧ್ಯಕ್ಷ ಮಾನಪ್ಪ ಕಟ್ಟಿಮನಿ ಆಕ್ರೋಶ ವ್ಯಕ್ತಪಡಿಸಿದರು.
ಹುಣಸಗಿ ಸಿಆರ್ಪಿ ಹಾಗೂ ಅಕ್ಷರ ದಾಸೋಹ ಅಧಿಕಾರಿಗಳನ್ನು ಅಮಾನತುಗೊಳಿಸದಿದ್ದಲ್ಲಿ ಡಿಸೆಂಬರ್ 5 ರಂದು ಸುರಪುರದ ಸುರಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಎದುರು ಧರಣಿ ಹಮ್ಮಿಕೊಳ್ಳುವದಾಗಿ ಎಚ್ಚರಿಕೆ ನೀಡಿದ್ದಾರೆ.
ಪದಾಧಿಕಾರಿಗಳಾದ ಸಿದ್ದಣ್ಣ ಮೇಲಿನಮನಿ, ಮಂಜುನಾಥ ಚನ್ನೂರ, ಸೋಮಶೇಖರ ಆನೇಕಿ, ಮೌನೇಶ, ತಿಪ್ಪಣ್ಣ ಗೋಗಿ, ಭೀಮಣ್ಣ ಚಾನಿ, ತಿಪ್ಪಣ್ಣ ಬೇವಿನಗಿಡ, ಸಿದ್ದಣ್ಣ ಹೊಸಮನಿ, ಪ್ರಭು ಇತರರು ಇದ್ದರು.