<p><strong>ಗುರುಮಠಕಲ್ (ಯಾದಗಿರಿ ಜಿಲ್ಲೆ):</strong> ಮುಂಗಾರು ಹಂಗಾಮಿನ ಮಳೆ ಅಭಾವದಿಂದಾಗಿ ಕಂಗೆಟ್ಟ ತಾಲ್ಲೂಕಿನ ಪಾಡುಪಲ್ಲಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಕತ್ತೆಯನ್ನು ಪೂಜಿಸಿ ಮೆರವಣಿಗೆ ಮಾಡಿದ್ದಾರೆ. </p><p>ಮೃಗಶಿರ ಮಳೆ ಕೈಕೊಟ್ಟಿದ್ದು, ಮಧ್ಯಂತರ ಬೆಳೆಗಳಾದ ಹೆಸರು ಮತ್ತು ಉದ್ದು ಬೆಳೆಗಳು ಈ ಬಾರಿ ಪಡೆಯದಂತಾಗಿದೆ. ಜೊತೆಗೆ ಮೃಗಶಿರ ಕಳೆದ ನಂತರವಾದರೂ ಮಳೆ ಬರುತ್ತದೆಂಬ ನಿರೀಕ್ಷೆಯೂ ಫಲಿಸಲಿಲ್ಲ.</p><p>ಹೀಗಾಗಿ ಮಳೆಗಾಗಿ ಗ್ರಾಮದಲ್ಲಿ ಕತ್ತೆ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಲಾಗಿದೆ. ಹೀಗೆ ಮಾಡುವುದರಿಂದ ಮಳೆ ಬರುತ್ತದೆಂಬ ನಂಬಿಕೆಯಿದೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.</p><p>ಮಂಗಳ ಮೇಳವಾದ್ಯಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿದ್ದು, ಮೆರವಣಿಗೆ ವೇಳೆ ‘ಬಾರೋ, ಬಾರೋ ಮಳೆರಾಯ’ ಎಂದು ಪ್ರಾರ್ಥನೆ ಮಾಡುತ್ತಾ ಸಾಗಿದರು.</p><p>ಈ ವೇಳೆ ಶ್ರೀನಿವಾಸ, ಮೋಹನರೆಡ್ಡಿ, ಕೃಷ್ಣಾರೆಡ್ಡಿ, ಬಲರಾಮ, ಬಂಡೆಪ್ಪ, ಜಗದೀಶ, ಸಾಬಣ್ಣ, ರಾಜಪ್ಪ, ಶಂಕರರೆಡ್ಡಿ, ಶರಣಪ್ಪ, ಬಸಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್ (ಯಾದಗಿರಿ ಜಿಲ್ಲೆ):</strong> ಮುಂಗಾರು ಹಂಗಾಮಿನ ಮಳೆ ಅಭಾವದಿಂದಾಗಿ ಕಂಗೆಟ್ಟ ತಾಲ್ಲೂಕಿನ ಪಾಡುಪಲ್ಲಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಕತ್ತೆಯನ್ನು ಪೂಜಿಸಿ ಮೆರವಣಿಗೆ ಮಾಡಿದ್ದಾರೆ. </p><p>ಮೃಗಶಿರ ಮಳೆ ಕೈಕೊಟ್ಟಿದ್ದು, ಮಧ್ಯಂತರ ಬೆಳೆಗಳಾದ ಹೆಸರು ಮತ್ತು ಉದ್ದು ಬೆಳೆಗಳು ಈ ಬಾರಿ ಪಡೆಯದಂತಾಗಿದೆ. ಜೊತೆಗೆ ಮೃಗಶಿರ ಕಳೆದ ನಂತರವಾದರೂ ಮಳೆ ಬರುತ್ತದೆಂಬ ನಿರೀಕ್ಷೆಯೂ ಫಲಿಸಲಿಲ್ಲ.</p><p>ಹೀಗಾಗಿ ಮಳೆಗಾಗಿ ಗ್ರಾಮದಲ್ಲಿ ಕತ್ತೆ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಲಾಗಿದೆ. ಹೀಗೆ ಮಾಡುವುದರಿಂದ ಮಳೆ ಬರುತ್ತದೆಂಬ ನಂಬಿಕೆಯಿದೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.</p><p>ಮಂಗಳ ಮೇಳವಾದ್ಯಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿದ್ದು, ಮೆರವಣಿಗೆ ವೇಳೆ ‘ಬಾರೋ, ಬಾರೋ ಮಳೆರಾಯ’ ಎಂದು ಪ್ರಾರ್ಥನೆ ಮಾಡುತ್ತಾ ಸಾಗಿದರು.</p><p>ಈ ವೇಳೆ ಶ್ರೀನಿವಾಸ, ಮೋಹನರೆಡ್ಡಿ, ಕೃಷ್ಣಾರೆಡ್ಡಿ, ಬಲರಾಮ, ಬಂಡೆಪ್ಪ, ಜಗದೀಶ, ಸಾಬಣ್ಣ, ರಾಜಪ್ಪ, ಶಂಕರರೆಡ್ಡಿ, ಶರಣಪ್ಪ, ಬಸಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>