<p><strong>ಯರಗೋಳ</strong>: ಬೆಳಗೇರಾ ಗ್ರಾಮದಲ್ಲಿ ಭಾನುವಾರ ನಡೆದ ಪರಿಸರ ಕಾಳಜಿ ಮದುವೆಯಲ್ಲಿ ನವದಂಪತಿ ವೆಂಕಟೇಶ ಮತ್ತು ಚಾಮುಂಡೇಶ್ವರಿ ತಮ್ಮನ್ನು ಶುಭ ಹಾರೈಸಿದ ಬಂಧುಗಳು, ಆಪ್ತರು ಮತ್ತು ಸ್ನೇಹಿತರಿಗೆ ವಿವಿಧ ಬಗೆಯ ಸಸಿಗಳನ್ನು ನೀಡಿದರು.</p>.<p>ಮರೆಮ್ಮ ತಿಪ್ಪಣ್ಣ ಪೂಜಾರಿ ಪಸ್ಪೂಲ್ ಅವರ ಪುತ್ರ ವೆಂಕಟೇಶ ಮತ್ತು ಕನ್ಯಾಕೋಳೂರು ಗ್ರಾಮದ ಜಯಶ್ರೀ ಪೂಜಪ್ಪ ಅವಡಿಯವರ ಪುತ್ರಿ ಚಾಮುಂಡೇಶ್ವರಿ ವಿನೂತನ ರೀತಿ ಮದುವೆಯಾದರು.</p>.<p>ಬಣ್ಣದ ಹೂಗಳಿಂದ ಅಲಂಕೃತ ಬಟ್ಟೆ ಪರದೆಯ ಮೇಲೆ ದಂಪತಿ ಹೆಸರಿನ ಜೊತೆ ‘ಪರಿಸರ ಉಳಿಸಿ, ಪರಿಸರ ಬೆಳೆಸಿ’ ಎಂಬ ಸಾಲುಗಳಿದ್ದವು. ಮದುವೆಗೆ ಬಂದವರಿಗೆ ಕರಿಬೇವು, ಮಾವು, ಸೀತಾಫಲ, ಬೇವು, ಲಿಂಬೆ, ಅಶೋಕ, ನೇರಳೆ ಮುಂತಾದ ಸಸಿಗಳನ್ನು ನೀಡಲಾಯಿತು.</p>.<p>‘ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕನಾದ ನನಗೆ ಗಿಡ, ಮರಗಳೆಂದರೆ ಪ್ರೀತಿ. ನಮ್ಮೂರಿನ ಪಕ್ಕದ ಹತ್ತಿಕುಣಿ ಗ್ರಾಮದಲ್ಲಿರುವ ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಜಾತಿಯ1 ಸಾವಿರ ಗಿಡಗಳನ್ನು ಖರೀದಿಸಿ, ಅತಿಥಿಗಳಿಗೆ ವಿತರಿಸಿದೆ’ ಎಂದು ವರ ವೆಂಕಟೇಶ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯರಗೋಳ</strong>: ಬೆಳಗೇರಾ ಗ್ರಾಮದಲ್ಲಿ ಭಾನುವಾರ ನಡೆದ ಪರಿಸರ ಕಾಳಜಿ ಮದುವೆಯಲ್ಲಿ ನವದಂಪತಿ ವೆಂಕಟೇಶ ಮತ್ತು ಚಾಮುಂಡೇಶ್ವರಿ ತಮ್ಮನ್ನು ಶುಭ ಹಾರೈಸಿದ ಬಂಧುಗಳು, ಆಪ್ತರು ಮತ್ತು ಸ್ನೇಹಿತರಿಗೆ ವಿವಿಧ ಬಗೆಯ ಸಸಿಗಳನ್ನು ನೀಡಿದರು.</p>.<p>ಮರೆಮ್ಮ ತಿಪ್ಪಣ್ಣ ಪೂಜಾರಿ ಪಸ್ಪೂಲ್ ಅವರ ಪುತ್ರ ವೆಂಕಟೇಶ ಮತ್ತು ಕನ್ಯಾಕೋಳೂರು ಗ್ರಾಮದ ಜಯಶ್ರೀ ಪೂಜಪ್ಪ ಅವಡಿಯವರ ಪುತ್ರಿ ಚಾಮುಂಡೇಶ್ವರಿ ವಿನೂತನ ರೀತಿ ಮದುವೆಯಾದರು.</p>.<p>ಬಣ್ಣದ ಹೂಗಳಿಂದ ಅಲಂಕೃತ ಬಟ್ಟೆ ಪರದೆಯ ಮೇಲೆ ದಂಪತಿ ಹೆಸರಿನ ಜೊತೆ ‘ಪರಿಸರ ಉಳಿಸಿ, ಪರಿಸರ ಬೆಳೆಸಿ’ ಎಂಬ ಸಾಲುಗಳಿದ್ದವು. ಮದುವೆಗೆ ಬಂದವರಿಗೆ ಕರಿಬೇವು, ಮಾವು, ಸೀತಾಫಲ, ಬೇವು, ಲಿಂಬೆ, ಅಶೋಕ, ನೇರಳೆ ಮುಂತಾದ ಸಸಿಗಳನ್ನು ನೀಡಲಾಯಿತು.</p>.<p>‘ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕನಾದ ನನಗೆ ಗಿಡ, ಮರಗಳೆಂದರೆ ಪ್ರೀತಿ. ನಮ್ಮೂರಿನ ಪಕ್ಕದ ಹತ್ತಿಕುಣಿ ಗ್ರಾಮದಲ್ಲಿರುವ ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಜಾತಿಯ1 ಸಾವಿರ ಗಿಡಗಳನ್ನು ಖರೀದಿಸಿ, ಅತಿಥಿಗಳಿಗೆ ವಿತರಿಸಿದೆ’ ಎಂದು ವರ ವೆಂಕಟೇಶ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>